ಆ್ಯಪ್ನಗರ

ರಸ್ತೆ ದುರಸ್ತಿಗೆ ನೀರಾವರಿ ಹೋರಾಟ ಸಮಿತಿ ಆಗ್ರಹ

ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಲು ಮುಂದಾಗದಿದ್ದಲ್ಲಿ ಶಾಸಕರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಕುರುಬರ ಪೇಟೆ ವೆಂಕಟೇಶ್‌ ಎಚ್ಚರಿಕೆ ನೀಡಿದರು.

Vijaya Karnataka 2 Jun 2019, 5:00 am
ಕೋಲಾರ: ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಲು ಮುಂದಾಗದಿದ್ದಲ್ಲಿ ಶಾಸಕರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಕುರುಬರ ಪೇಟೆ ವೆಂಕಟೇಶ್‌ ಎಚ್ಚರಿಕೆ ನೀಡಿದರು.
Vijaya Karnataka Web activist demand road repair
ರಸ್ತೆ ದುರಸ್ತಿಗೆ ನೀರಾವರಿ ಹೋರಾಟ ಸಮಿತಿ ಆಗ್ರಹ


ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹೋರಾಟ ಸಮಿತಿ, ಈಗ ಆಗಿರುವ ರಸ್ತೆ ಗುಂಡಿಗಳು ಮುಂದಿನ 10 ವರ್ಷಗಳಲ್ಲೂ ಸರಿಪಡಿಸಲಾಗದಂತಹ ರೀತಿಯಾಗಿ ನಿರ್ಮಾಣವಾಗಿವೆ. ನಗರಸಭೆ, ಲೋಕೋಪಯೋಗಿ ಇಲಾಖೆ, ಜಲಮಂಡಳಿಗಳು ರಸ್ತೆ ಅಗೆದು ಹಾಳು ಮಾಡಿವೆಯೇ ಹೊರತೂ ಎಂದೂ ರಸ್ತೆ ರಿಪೇರಿ ಮಾಡಿಲ್ಲ, ಇದು ಇವರ ನಿರ್ಲಕ್ಷ ್ಯಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.

ಹಳ್ಳಗಳ ರಸ್ತೆಯಲ್ಲೇ ಸಂಚರಿಸುವ ಜನಪ್ರತಿನಿಧಿಗಳ ವರ್ತನೆಯಿಂದಾಗಿ ಕೋಲಾರ ಅಭಿವೃದ್ದಿಯಾಗದೇ ಇಂದಿಗೂ ಹಳ್ಳಿಗಿಂತಲೂ ಹೀನಾಯವಾಗಿದೆ. ಕನಿಷ್ಠ ಡೂಂಲೈಟ್‌ ವೃತ್ತ-ಕ್ಲಾಕ್‌ ಟವರ್‌, ಬಂಗಾರಪೇಟೆ ವೃತ್ತದವರೆಗೂ ದ್ವಿಪಥ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ, ಅಂಡರ್‌ಪಾಸ್‌, ಸೇವಾ ರಸ್ತೆ ನಿರ್ಮಿಸದೇ ಜನರನ್ನು ಹಗಲು ದರೋಡೆ ಮಾಡುತ್ತಿದೆ. ಟೋಲ್‌ ತೆರಿಗೆ ಸಂಗ್ರಹಿಸಿ ಲೂಟಿ ಮಾಡುತ್ತಿದೆ ಎಂದು ದೂರಿದರು.

ಡಿಕೆ ರವಿ ಅವರು ಡಿಸಿಯಾಗಿದ್ದಾಗ ಹೆದ್ದಾರಿ ವಿಸ್ತರಣೆಗಾಗಿ ಜಮೀನು ಕಳೆದುಕೊಂಡಿದ್ದ ರೈತರಿಗೆ ಪರಿಹಾರ ನಿಗದಿ ಮಾಡಿದ್ದು, ಈಗಿನ ಜಿಲ್ಲಾಧಿಕಾರಿಗಳು ಪರಿಹಾರ ನೀಡಲು ನಿರ್ಲಕ್ಷ ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

ವಾಹನಗಳು ಜಖಂ: ಮುಖಂಡ ಚೇತನ್‌ಬಾಬು ಮಾತನಾಡಿ, ನಗರದಲ್ಲಿ ಹದೆಗೆಟ್ಟ ರಸ್ತೆಗಳಿಂದ ವಾಹನಗಳು ಹಾಳಾಗುತ್ತಿವೆ ಜನರ ಬದುಕು ಸಂಕಷ್ಟಕ್ಕೆ ದೂಡಲಾಗಿದೆ. ರಸ್ತೆ ಹಳ್ಳಗಳನ್ನು ಮುಚ್ಚುವ ಸೌಜನ್ಯವೂ ಇಲ್ಲವಾಗಿದೆ. ಹೀಗೆ ಮುಂದುವರಿದರೆ ಶಾಸಕರ ಮನೆ ಮುಂದೆ ಧರಣಿ ನಡೆಸಬೇಕಾದೀತು ಎಂದರು.

ಜಯ ಕರ್ನಾಟಕ ಅಧ್ಯಕ್ಷ ತ್ಯಾಗರಾಜ್‌ ಮಾತನಾಡಿ, ಅಮೃತ ಸಿಟಿ ಯೋಜನೆಯಡಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಕಳಪೆಯಾಗಿದೆ. ನೀಡಿರುವ ಅನುದಾನ ಸದ್ಬಳಕೆಯಾಗುತ್ತಿದೆಯೇ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಜಿಲ್ಲಾಡಳಿತ, ಶಾಸಕರು ಕೂಡಲೇ ಈ ಕುರಿತು ಗಮನಹರಿಸಬೇಕು. ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ರೂಪಿಸುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಮುಶಿವಣ್ಣ, ಮಂಜುನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ