ಆ್ಯಪ್ನಗರ

ಋುಣಮುಕ್ತ ಕಾಯಿದೆ; ಅರ್ಜಿ ಸಲ್ಲಿಕೆಗೆ ಅ.22 ಕೊನೆ ದಿನ

ಬಡತನದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಬಡ್ಡಿಯ ಶೋಷಣೆಯಿಂದ ಮುಕ್ತ ಗೊಳಿಸಿಲು ರಾಜ್ಯ ಸರ್ಕಾರವು ಋುಣಮುಕ್ತ ಕಾಯಿದೆಯನ್ನು ಜಾರಿಗೆ ತಂದಿದ್ದು, ಅರ್ಜಿ ಸಲ್ಲಿಸಲು ಅ.22 ಕೊನೆ ದಿನವಾಗಿದೆ. ಅರ್ಹ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸೋಮಶೇಖರ್‌ ತಿಳಿಸಿದರು.

Vijaya Karnataka 24 Sep 2019, 3:08 pm
ಕೋಲಾರ: ಬಡತನದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಬಡ್ಡಿಯ ಶೋಷಣೆಯಿಂದ ಮುಕ್ತ ಗೊಳಿಸಿಲು ರಾಜ್ಯ ಸರ್ಕಾರವು ಋುಣಮುಕ್ತ ಕಾಯಿದೆಯನ್ನು ಜಾರಿಗೆ ತಂದಿದ್ದು, ಅರ್ಜಿ ಸಲ್ಲಿಸಲು ಅ.22 ಕೊನೆ ದಿನವಾಗಿದೆ. ಅರ್ಹ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸೋಮಶೇಖರ್‌ ತಿಳಿಸಿದರು.
Vijaya Karnataka Web affordable care act application deadline is oct 22nd
ಋುಣಮುಕ್ತ ಕಾಯಿದೆ; ಅರ್ಜಿ ಸಲ್ಲಿಕೆಗೆ ಅ.22 ಕೊನೆ ದಿನ


ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿಆಯೋಜಿಸಿದ್ದ ಋುಣಮುಕ್ತ ಕಾಯಿದೆ ಕುರಿತು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳ ಸಭೆಯಲ್ಲಿಅವರು ಮಾತನಾಡಿದರು.

ಸರಕಾರವು ಕಳೆದ 2018ರ ಜು.23ರಂದು ಋುಣಮುಕ್ತ ಕಾಯಿದೆಯನ್ನು ಜಾರಿಗೆ ತಂದಿದೆ. ಆರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು 2019ರ ಅ.22 ಕೊನೆಯ ದಿನವಾಗಿರುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಸದ್ಬಳಿಸಿ ಕೊಳ್ಳುವಂತಾಗಲಿ ಎನ್ನುವ ಸಲುವಾಗಿ ಸಭೆ ಆಯೋಜಿಸಲಾಗಿದೆ ಎಂದರು.

ಈಗಾಗಲೇ 2,850 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಗಡಿ ಭಾಗದ ಜನತೆಗೆ ತೊಂದರೆಯಾಗದಂತೆ ಪ್ರತಿ ತಾಲೂಕಿನ ತಹಸೀಲ್ದಾರ್‌ ಕಚೇರಿಯಲ್ಲಿಅರ್ಜಿಯನ್ನು ವಿತರಿಸಲಾಗುವುದು. ಸಾರ್ವಜನಿಕರು ಅರ್ಜಿಗಳೊಂದಿಗೆ ಸಂಬಂಧ ಪಟ್ಟ ದಾಖಲಾತಿಗಳನ್ನು ಲಗತ್ತಿಸಿ ನೀಡುವ ಮೂಲಕ ಸ್ವೀಕೃತಿ ಪಡೆಯಬೇಕೆಂದರು.

ಅರ್ಜಿಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸಲಾಗುವುದು. ಅರ್ಜಿಗಳೊಂದಿಗೆ ತಮ್ಮ ವಾರ್ಷಿಕ ಆದಾಯವು 1.20 ಲಕ್ಷ ರೂ. ಒಳಗೆ ಇರಬೇಕು. ಸಣ್ಣ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಅರ್ಹರಾಗಿರುತ್ತಾರೆ. ನೀರಾವರಿ ಜಮೀನು ಅರ್ಧ ಎಕರೆ, ಮಳೆ ಆಶ್ರಿತ ಒಂದೂವರೆ ಎಕರೆ, 5 ಎಕರೆ ಒಳಗೆ ಇರುವವರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ದಾಖಲೆ ಸಲ್ಲಿಸಬೇಕು: ಗಿರವಿ ಅಂಗಡಿಗಳಲ್ಲಿಒಡವೆಗಳನ್ನು ಇಟ್ಟಿರುವವರು ರಸೀದಿಯನ್ನು ಪಡೆದಿರಬೇಕು. ಭೂಮಿಯನ್ನು ಅಡ ಇಟ್ಟು ಹಣ ಪಡೆದಿರುವವರು ದಾಖಲಾತಿಯನ್ನು ಸಲ್ಲಿಸಬೇಕು. ಗಿರವಿ ಅಂಗಡಿಗಳಲ್ಲಿಸುಲಭವಾಗಿ ಹಣ ಸಿಗುವುದರಿಂದ ಎಲ್ಲರೂ ಗಿರವಿ ಅಂಗಡಿಗಳಲ್ಲಿಅಡಮಾನ ಇಡಲು ಹೋಗುತ್ತಾರೆ. ಬಹಳಷ್ಟು ಮಂದಿ ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ಕಟ್ಟಿರುವವರು ಹೆಚ್ಚಾಗಿದ್ದು ತಮ್ಮ ಜೀವನವನ್ನೇ ಶೋಷಣೆಗೆ ಒಳಪಡಿಸಿ ಕೊಂಡಿರುತ್ತಾರೆ ಎಂದು ಹೇಳಿದರು.

ಋುಣಮುಕ್ತ ಕಾಯಿದೆಯ ಅರ್ಜಿಗಳನ್ನು ತಾಲೂಕು ಕಚೇರಿಯಲ್ಲಿಪಡೆದು ಜತೆಗೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಮೊಬೈಲ್‌ ಸಂಖ್ಯೆ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು, ತಮಗೆ ಮನೆ, ಜಮೀನು ಇತ್ಯಾದಿ ವಿವರಗಳನ್ನು ಸಂಬಂಧಪಟ್ಟ ಆರ್‌.ಐಗಳಿಂದ ದೃಢೀಕರಣ ಪತ್ರವನ್ನು ಸಲ್ಲಿಸಬೇಕೆಂದ ಅವರು ಜಿಲ್ಲಾಕೇಂದ್ರದಲ್ಲಿಉಪವಿಭಾಗಾಧಿಕಾರಿ ಕಚೇರಿಯಲ್ಲೂಸಿಗಲಿದೆ ಎಂದು ವಿವರಿಸಿದರು.

ತಹಸೀಲ್ದಾರ್‌ ನಾಗವೇಣಿ ಮಾತನಾಡಿ, ಕೋಲಾರದ 6 ಹೋಬಳಿಗಳಲ್ಲಿಸಾರ್ವಜನಿಕರಿಗೆ ಅನುವುಂಟಾಗುವಂತೆ ಆರ್‌.ಐ.ಗಳು 3 ಗಂಟೆಯೊಳಗೆ ನಾಡಕಚೇರಿಯಲ್ಲಿನ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ತಹಸೀಲ್ದಾರ್‌ ಕಚೇರಿಗೆ ಹಾಜರಾಗಿ ಕಾಯಿದೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ದೃಢೀಕರಣ ಪತ್ರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ವಡಗೂರಿನ ರಾಮಮೂರ್ತಿ ಮಾತನಾಡಿ, ಜಮೀನು ನನ್ನ ತಂದೆ ಹೆಸರಿನಲ್ಲಿದ್ದು ನಾನು ಭೂ ರಹಿತನೆಂದು ಪ್ರಮಾಣ ಪತ್ರ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದಾಗ ಎಸಿ ಸೋಮಶೇಖರ್‌, ಪ್ರತಿಕ್ರಿಯಿಸಿ ಅದಾಯ ಪತ್ರದೊಂದಿಗೆ ಅರ್ಜಿಸಲ್ಲಿಸಬಹುದು ಎಂದು ಹೇಳಿದರು.

ಸಭೆಯಲ್ಲಿನಾಡಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಪ್ರಚಾರದ ಕೊರತೆ; ಆಸನಗಳು ಖಾಲಿ ಖಾಲಿ!: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿಆಯೋಜಿಸಿದ್ದ ಋುಣಮುಕ್ತ ಕಾಯ್ದೆ ಕುರಿತು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳ ಸಭೆ ಕುರಿತಾಗಿ ಪ್ರಚಾರ ಮಾಡಿರದ ಹಿನ್ನೆಲೆಯಲ್ಲಿಜನರು ನಿರೀಕ್ಷಿತ ಸಂಖ್ಯೆಯಲ್ಲಿಬಾರಲಿಲ್ಲ. ಹೀಗಾಗಿ ಆಸನಗಳು ಖಾಲಿ ಖಾಲಿಯಾಗಿಯೇ ಕಂಡುಬಂದವು.

500ಕ್ಕೂ ಹೆಚ್ಚಿನ ಆಸನ ವ್ಯವಸ್ಥೆಯಿರುವ ಸಭಾಂಗಣದಲ್ಲಿನೂರಕ್ಕಿಂತಲೂ ಕಡಿಮೆ ಜನರು ಭಾಗವಹಿಸಿದ್ದರು. ಹೆಚ್ಚಿನ ಮಂದಿ ಕೋಲಾರ ತಾಲೂಕಿನವರೇ ಆಗಿದ್ದರು. ಪ್ರಚಾರದ ಕೊರತೆಯಿಂದಲೇ ಅರಿವು ಕಾರ್ಯಕ್ರಮಕ್ಕೆ ಜನರು ಬರಲು ಸಾಧ್ಯವಾಗಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ