ಆ್ಯಪ್ನಗರ

ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿ

6 ಸಾವಿರ ರೂ. ಕೃಷಿ ಪ್ರೋತ್ಸಾಹಧನಕ್ಕೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಲ್ಲಾ ರೈತರು ಅರ್ಜಿ ಕೊಡಿ. ಕುಡಿಯುವ ನೀರು ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇವೆ. ಎಲ್ಲಾ ಕೆಲಸಗಳು ಸರಕಾರವೇ ಮಾಡಬೇಕೆಂದರೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿದರು.

Vijaya Karnataka 29 Jun 2019, 2:48 pm
ಶ್ರೀನಿವಾಸಪುರ: 6 ಸಾವಿರ ರೂ. ಕೃಷಿ ಪ್ರೋತ್ಸಾಹಧನಕ್ಕೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಲ್ಲಾ ರೈತರು ಅರ್ಜಿ ಕೊಡಿ. ಕುಡಿಯುವ ನೀರು ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇವೆ. ಎಲ್ಲಾ ಕೆಲಸಗಳು ಸರಕಾರವೇ ಮಾಡಬೇಕೆಂದರೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿದರು.
Vijaya Karnataka Web apply for kissan samman scheme
ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿ


ತಾಲೂಕಿನ ಲಕ್ಷ್ಮೀಪುರ ಕ್ರಾಸ್‌ನಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕುಂದು ಕೊರತೆ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಎಲ್ಲಾ ಕೆಲಸಗಳು ಸರಕಾರ ಮಾಡಬೇಕೆಂದರೆ ಆಗುವುದಿಲ್ಲವೆಂದು ತಿಳಿಸಿದರು.

ಲಕ್ಷ್ಮೀಪುರ, ಪುಲಗೂರಕೋಟೆ ಮತ್ತು ನೆಲವಂಕಿ ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಸಾರ್ವಜನಿಕ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಮಸ್ಯೆ ಇದ್ದರೆ ಹೇಳಿ ಇಲ್ಲೆ ಪರಿಹರಿಸುತ್ತೇವೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ 6 ಸಾವಿರ ರೂ. ಕೃಷಿಗೆ ಪ್ರೋತ್ಸಾಹಧನ ನೀಡಲು ಇನ್ನೂ ಬಹುತೇಕ ರೈತರು ಅರ್ಜಿ ಕೊಟ್ಟಿಲ್ಲ. ಈ ಕೂಡಲೆ ಅರ್ಜಿಗಳನ್ನು ಕೊಟ್ಟು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕೆರೆ ಕಾಲುವೆ ರಸ್ತೆ ನೀರು ಸೇರಿ ಸರಕಾರ ಮೂಲ ಸೌಲಭ್ಯಗಳು ಒದಗಿಸುತ್ತೇವೆ. ಆದರೆ ಇನ್ನು ಹಲವು ಕೆಲಸಗಳು ಸರಕಾರವೆ ಮಾಡಬೇಕೆನ್ನುವುದಲ್ಲ, ಸಾರ್ವಜನಿಕರು ಸಹ ಸಮಾಜದ ಹಿತದೃಷ್ಟಿಯಿಂದ ಕೈಜೋಡಿಸಬೇಕೆಂದು ಕಿವಿಮಾತು ಹೇಳಿದರು.

ದೂರು: ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್‌ಗಳಿಗೆ ಹಣ ಕೊಡದೆ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಮಗೆ ಈಗ ಕೊಡುತ್ತಿರುವ ಬೆಲೆ ಸಾಲದು. ಹೆಚ್ಚಿಸಿ ಈಗ ಕೊಡಬೇಕಾದ ಹಣ ಕೊಟ್ಟರೆ ನೀರು ಸರಬರಾಜು ಮಾಡುತ್ತೇವೆಂದು ನರಸಿಂಹಪ್ಪ ದೂರು ನೀಡಿದರು.

ಇನ್ನು ಮುಂದೆ 15 ದಿನಕ್ಕೊಮ್ಮೆ ನೀರು ಸರಬರಾಜು ಬಿಲ್ಲು ಬಿಡುಗಡೆ ಮಾಡುತ್ತೇವೆ. ಬೆಲೆ ಬಗ್ಗೆ ಮರುಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದರು.

ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳ ಪೈಕಿ 3 ಗ್ರಾಮಗಳು, ಪುಲಗೂರಕೋಟೆ 23 ಗ್ರಾಮಗಳ ಪೈಕಿ 6 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.

ನೀರು ಸರಬರಾಜು ಮಾಡುವವರಿಗೆ ಆಗಿಂದಾಗೆ 15 ದಿನಕ್ಕೊಮ್ಮೆ ಹಣ ಬಿಡಿಗಡೆ ಮಾಡುವಂತೆ ತಿಳಿಸಿ ಸಾರ್ವಜಜಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ತಿಳಿಸಿದರು.

ಕಿಸಾನ್‌ ಯೋಜನೆ ಸೇರಿದಂತೆ ಯಾವುದೆ ಯೋಜನೆಗಳಿಗೆ ರೈತರು ಅರ್ಜಿಗಳು ಕೊಟ್ಟರೂ ಮತ್ತೆ ಮತ್ತೆ ಕೇಳುತ್ತಾರೆ ಅಧಿಕಾರಿಗಳು. ಕೊಡುವ ಅರ್ಜಿಗಳು ಕಸದ ಬುಟ್ಟಿಗೆ ಹಾಕುತ್ತಾರೆಂದು ರೈತರು ದೂರಿದರು.

ಜಿಲಾಧಿಕಾರಿ, ರೈತರು ಕೊಡುವ ಅರ್ಜಿಗಳ ಬಗ್ಗೆ ತಾತ್ಸಾರ ತೋರಿದರೆ ಜೋಕೆ ಎಂದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ತಹಸೀಲ್ದಾರ್‌ ಬಿ.ಎಸ್‌.ರಾಜೀವ್‌, ಜಿಪಂ ಸದಸ್ಯ ಗೋವಿಂದಸ್ವಾಮಿ, ತಾಪಂ ಅಧ್ಯಕ್ಷ ಕೆ.ಎಂ.ನರೇಶ್‌, ಗ್ರಾಪಂ ಅಧ್ಯಕ್ಷೆ ಲಕ್ಷ ್ಮಮ್ಮ, ಮಂಜುಳ, ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ, ಸಿಪಿಐ ವೇಂಕಟ್ರಾಮಪ್ಪ, ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜುನಾಥ್‌ ಹಾಜರಿದ್ದರು.

ದೂರು ಸ್ವೀಕಾರ: ನೆಲವಂಕಿ ಹೋಬಳಿ ವ್ಯಾಪ್ತಿಯ 3 ಗ್ರಾಮ ಪಂಚಾಯಿತಿಗಳ ಸಾರ್ವಜನಿಕರು ವಿವಿದ ಸಮಸ್ಯೆಗಳಿಗೆ ನೂರಾರು ಮಂದಿ ದೂರುಗಳು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ