ಆ್ಯಪ್ನಗರ

ನಗರಠಾಣೆ ಪೊಲೀಸರಿಂದ ಕುಖ್ಯಾತ ಎಟಿಎಂ ಕಳ್ಳರ ಬಂಧನ

ನಗರದ ನಾನಾ ಎಟಿಎಂಗಳಲ್ಲಿ ಕಳುವು ಮಾಡಲು ಪ್ರಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಗರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 9 May 2019, 2:58 pm
ಕೋಲಾರ: ನಗರದ ನಾನಾ ಎಟಿಎಂಗಳಲ್ಲಿ ಕಳುವು ಮಾಡಲು ಪ್ರಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಗರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web atm thief arrested
ನಗರಠಾಣೆ ಪೊಲೀಸರಿಂದ ಕುಖ್ಯಾತ ಎಟಿಎಂ ಕಳ್ಳರ ಬಂಧನ


ಕೋಲಾರ ನಗರದ ಷಹೀದ್‌ ನಗರದ ಸೈಯದ್‌ ತಬೀರ್‌, ಈದ್ಗಾ ಮೈದಾನದ ನವಾಜ್‌ ಬೇಗ್‌, ಟವರ್‌ನ ನವಾಜ್‌ ಖಾನ್‌ ಬಂಧಿತರಾಗಿದ್ದು, ಇವರಿಂದ ನಾನಾ ಪ್ರಕರಣಗಳಲ್ಲಿ ಕಳವು ಮಾಡಲಾಗಿದ್ದ 25,000 ರೂ ಹಣ ಹಾಗೂ ಆಟೊ ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಪಲ್ಲವಿ ವೃತ್ತ, ಗಲ್‌ಪೇಟೆ ಕಡೆಗಳಲ್ಲಿ ಎಟಿಎಂ ಯಂತ್ರದಲ್ಲಿ ಹಣ ಕಳುವು ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಸೈಯದ್‌ ತಬೀರ್‌ ಈ ಹಿಂದೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಮತ್ತೊಬ್ಬ ಆರೋಪಿ ನವಾಜ್‌ ಬೇಗ್‌ ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ನಗರಠಾಣೆ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರಠಾಣೆ ವೃತ್ತ ನಿರೀಕ್ಷ ಕ ನಾಗರಾಜ್‌, ಪಿಎಸ್‌ಐ ಶಂಕರಪ್ಪ ಮತ್ತು ಸಿಬ್ಬಂದಿ ಹಮೀದ್‌ ಖಾನ್‌, ರಾಘವೇಂದ್ರ, ನರೇಂದ್ರ, ಆಂಜಿನಪ್ಪ, ಗುರುಪ್ರಸಾದ್‌, ಚಲಪತಿ, ವೆಂಕಟರಮಣ, ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ