ಸಫಾಯಿ ಕರ್ಮಚಾರಿ ನಿಗಮದ ಅಧಿಕಾರಿಗಳಿಂದ ದೌರ್ಜನ್ಯ; ಆರೋಪ
ಸಫಾಯಿ ಕರ್ಮಚಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶಪ್ಪ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತನ್ನು ದೌರ್ಜನ್ಯದಿಂದ ವಂಚಿಸಿದ್ದಾರೆ. ಅಲ್ಲದೆ ವರ್ಗಾವಣೆಯಾಗಿದ್ದರೂ ಬೇರೆಯವರಿಗೆ ಅಧಿಕಾರ ನೀಡುತ್ತಿಲ್ಲ ಎಂದು ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮಾದೇಶ್ ಆರೋಪಿಸಿದರು.
Vijaya Karnataka 26 Jun 2019, 3:53 pm
ಕೋಲಾರ : ಸಫಾಯಿ ಕರ್ಮಚಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶಪ್ಪ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತನ್ನು ದೌರ್ಜನ್ಯದಿಂದ ವಂಚಿಸಿದ್ದಾರೆ. ಅಲ್ಲದೆ ವರ್ಗಾವಣೆಯಾಗಿದ್ದರೂ ಬೇರೆಯವರಿಗೆ ಅಧಿಕಾರ ನೀಡುತ್ತಿಲ್ಲ ಎಂದು ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮಾದೇಶ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದರೂ ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳಾದ ನಾಗರಾಜಪ್ಪ, ಹಾಗೂ ಗಣೇಶಪ್ಪ ಫಲಾನುಭವಿಗಳಿಗೆ ಸಾಲವನ್ನು ನೀಡದೆ ದೌರ್ಜನ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ನ್ಯಾಯ ಕೇಳಲು ಹೋದರೆ ಪೋಲಿಸ್ ಇಲಾಖೆಯಲ್ಲಿ ಪ್ರಕರಣವನ್ನು ದಾಖಲಿಸಿ ಕೋರ್ಟ್ಗೆ ಅಲೆಡಾದುವಂತೆ ಮಾಡುತ್ತಿದ್ದಾರೆ ಎಂದು ದೂರಿದರು. ಮಹಿಳೆಯರು ಸಾಲಕ್ಕಾಗಿ ಹೋದರೆ ಅವರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ದೂರಿದರು.
ಸಫಾಯಿ ಕರ್ಮಚಾರಿ ನಿಗಮ ಪ್ರಧಾನ ವ್ಯವಸ್ಥಾಪಕ ಡಾ.ನಾಗರಾಜಪ್ಪ ಅವರು ಆಯುಷ್ ಇಲಾಖೆಯಲ್ಲಿ ಹೋಮಿಯೋಪತಿ ಅಗಿ ಕೆಲಸ ಮಾಡುತ್ತಿರುವವನನ್ನು ಸಮಾಜ ಕಲ್ಯಾಣ ಇಲಾಖೆ ವರ್ಗಾವಣೆಗೊಳಿಸಿರುವುದು ಸರಿಯಲ್ಲ, ಮತ್ತು ಈ ಇಲಾಖೆಗೆ ಅವರು ಆರ್ಹರಲ್ಲ ಹೀಗಾಗಿ ಇವರನ್ನು ಆಯುಷ್ ಇಲಾಖೆಗೆ ಪುನಃ ವರ್ಗಾವಣೆಯನ್ನು ರಾಜ್ಯ ಸರಕಾರ ಮಾಡಬೇಕು ಹಾಗೂ ಇಬ್ಬರ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದರೂ ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳಾದ ನಾಗರಾಜಪ್ಪ, ಹಾಗೂ ಗಣೇಶಪ್ಪ ಫಲಾನುಭವಿಗಳಿಗೆ ಸಾಲವನ್ನು ನೀಡದೆ ದೌರ್ಜನ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ನ್ಯಾಯ ಕೇಳಲು ಹೋದರೆ ಪೋಲಿಸ್ ಇಲಾಖೆಯಲ್ಲಿ ಪ್ರಕರಣವನ್ನು ದಾಖಲಿಸಿ ಕೋರ್ಟ್ಗೆ ಅಲೆಡಾದುವಂತೆ ಮಾಡುತ್ತಿದ್ದಾರೆ ಎಂದು ದೂರಿದರು. ಮಹಿಳೆಯರು ಸಾಲಕ್ಕಾಗಿ ಹೋದರೆ ಅವರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ದೂರಿದರು.
ಸಫಾಯಿ ಕರ್ಮಚಾರಿ ನಿಗಮ ಪ್ರಧಾನ ವ್ಯವಸ್ಥಾಪಕ ಡಾ.ನಾಗರಾಜಪ್ಪ ಅವರು ಆಯುಷ್ ಇಲಾಖೆಯಲ್ಲಿ ಹೋಮಿಯೋಪತಿ ಅಗಿ ಕೆಲಸ ಮಾಡುತ್ತಿರುವವನನ್ನು ಸಮಾಜ ಕಲ್ಯಾಣ ಇಲಾಖೆ ವರ್ಗಾವಣೆಗೊಳಿಸಿರುವುದು ಸರಿಯಲ್ಲ, ಮತ್ತು ಈ ಇಲಾಖೆಗೆ ಅವರು ಆರ್ಹರಲ್ಲ ಹೀಗಾಗಿ ಇವರನ್ನು ಆಯುಷ್ ಇಲಾಖೆಗೆ ಪುನಃ ವರ್ಗಾವಣೆಯನ್ನು ರಾಜ್ಯ ಸರಕಾರ ಮಾಡಬೇಕು ಹಾಗೂ ಇಬ್ಬರ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.