ಆ್ಯಪ್ನಗರ

ಹಾಡಹಗಲೇ ಎಟಿಎಂನಲ್ಲಿ ಕಳವಿಗೆ ಯತ್ನ

ರಿಪೇರಿ ಮಾಡುವ ನೆಪದಲ್ಲಿ ಹಾಡಹಗಲೇ ಎಟಿಎಂಗೆ ನುಗ್ಗಿದ ಇಬ್ಬರು ಚೋರರನ್ನು ಸಾರ್ವಜನಿಕರೇ ಹಿಡಿದು, ಥಳಿಸಿ ಆನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕ್ಲಾಕ್‌ ಟವರ್‌ ಬಳಿಯ ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ಬುಧವಾರ ನಡೆದಿದೆ.

Vijaya Karnataka 4 Jul 2019, 3:16 pm
ಕೋಲಾರ: ರಿಪೇರಿ ಮಾಡುವ ನೆಪದಲ್ಲಿ ಹಾಡಹಗಲೇ ಎಟಿಎಂಗೆ ನುಗ್ಗಿದ ಇಬ್ಬರು ಚೋರರನ್ನು ಸಾರ್ವಜನಿಕರೇ ಹಿಡಿದು, ಥಳಿಸಿ ಆನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕ್ಲಾಕ್‌ ಟವರ್‌ ಬಳಿಯ ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ಬುಧವಾರ ನಡೆದಿದೆ.
Vijaya Karnataka Web attempt to break atm
ಹಾಡಹಗಲೇ ಎಟಿಎಂನಲ್ಲಿ ಕಳವಿಗೆ ಯತ್ನ


ಆಂಧ್ರಪ್ರದೇಶ ಮೂಲದ ದೇವರಾಜ್‌, ಬಾಲಕೃಷ್ಣ ಸಿಕ್ಕಿಬಿದ್ದ ಚೋರರಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆ ಕ್ಲಾಕ್‌ಟವರ್‌ ಸಮೀಪದ ಎಟಿಎಂಗೆ ಆಗಮಿಸಿದ ಚೋರರು ಎಟಿಎಂ ರಿಪೇರಿ ಮಾಡುವಂತೆ ಮುಂದಾಗಿದ್ದಾರೆ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಹೊಡೆದುಹಾಕಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾರೆ.

ಇದೇ ವೇಳೆಗೆ ಹಣ ಡ್ರಾ ಮಾಡಲು ಬಂದಿದ್ದವರನ್ನು ಅನುಮಾನಸ್ಪದವಾಗಿ ಚೋರರು ಕಂಡಿದ್ದು, ಪ್ರಶ್ನಿಸಿದಾಗ ನಾವು ಕಂಪನಿ ಕಡೆಯಿಂದ ರಿಪೇರಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಅದಾದ ಬಳಿಕ ಬೇರೆ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದಂತೆಯೇ ಅನುಮಾನಗೊಂಡ ಸುತ್ತಮುತ್ತಲಿನ ಅಂಗಡಿಗಳವರು ಕೂಡಲೇ ಜಮಾಯಿಸುತ್ತಿದ್ದಂತೆಯೇ ಓರ್ವ ಪರಾರಿಯಾಗಿದ್ದಾನೆ. ಮತ್ತಿಬ್ಬರು ಸಿಕ್ಕಿಬಿದ್ದಿದ್ದು, ಜನರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಿಸಿದ್ದಾರೆ. ಅಲ್ಲದೆ ಸಿಸಿಟಿವಿ ಧ್ವಂಸ ಮಾಡಿದ್ದುದು ಖಚಿತವಾಗಿದೆ.

ಕೂಡಲೇ ಇಬ್ಬರನ್ನು ಥಳಿಸಿದ ಜನರು ಎಟಿಎಂನಲ್ಲೇ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಗರಠಾಣೆ ಪೊಲೀಸರು ಇಬ್ಬರನ್ನು, ಬೈಕ್‌ ಮತ್ತು 3 ಬ್ಯಾಟರಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

ಸೆಕ್ಯೂರಿಟಿ ಇಲ್ಲದ್ದಕ್ಕೆ ಆಕ್ರೋಶ: ಇನ್ನು ಇದೇ ಎಟಿಎಂನಲ್ಲಿ ಈ ಮೊದಲು ಕಳ್ಳತನಕ್ಕೆ ಯತ್ನಿಸಲಾಗಿ, ಆಗಲೂ ಚೋರರು ಸಿಕ್ಕಿಬಿದ್ದಿದ್ದರು. ಇಲ್ಲಿ ಸೆಕ್ಯೂರಿಟಿ ಇಲ್ಲದಿರುವುದಕ್ಕೆ ಘಟನೆಗಳು ಪದೇ ಪದೆ ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನಾದರೂ ಸಂಬಂಧಪಟ್ಟವರು ಸೆಕ್ಯೂರಿಟಿ ನೇಮಿಸುವಂತೆ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ