ಆ್ಯಪ್ನಗರ

ಧ್ವನಿಸುರಳಿಯಲ್ಲಿ ಸ್ಪೀಕರ್‌ ಕುರಿತ ಬಿಎಸ್‌ವೈ ಮಾತಿಗೆ ಖಂಡನೆ

ಆಪರೇಷನ್‌ ಕಮಲದ ಭಾಗವಾಗಿ ನಡೆದಿದೆ ಎನ್ನಲಾದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಭಾಷಣೆಯಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಬಗ್ಗೆ ಹೆಸರು ಪ್ರಸ್ತಾಪವಾಗಿರುವುದಕ್ಕೆ ಜಿಲ್ಲೆಯ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.

Vijaya Karnataka 9 Feb 2019, 5:00 am
ಕೋಲಾರ: ಆಪರೇಷನ್‌ ಕಮಲದ ಭಾಗವಾಗಿ ನಡೆದಿದೆ ಎನ್ನಲಾದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಭಾಷಣೆಯಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಬಗ್ಗೆ ಹೆಸರು ಪ್ರಸ್ತಾಪವಾಗಿರುವುದಕ್ಕೆ ಜಿಲ್ಲೆಯ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.
Vijaya Karnataka Web audio tape condemned
ಧ್ವನಿಸುರಳಿಯಲ್ಲಿ ಸ್ಪೀಕರ್‌ ಕುರಿತ ಬಿಎಸ್‌ವೈ ಮಾತಿಗೆ ಖಂಡನೆ


ಆಪರೇಷನ್‌ ಕಮಲಕ್ಕಾಗಿ ಶಾಸಕರಿಗೆ ದೂರವಾಣಿ ಕರೆ ಮೂಲಕ ಬಿ.ಎಸ್‌. ಯಡಿಯೂರಪ್ಪ ಅವರು ಆಮಿಷವೊಡ್ಡಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ಸಂಭಾಷಣೆಯ ಆಡಿಯೋ ಶುಕ್ರವಾರ ಬಿಡುಗಡೆ ಮಾಡಿದರು. ಅದರಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ 50 ಕೋಟಿ ರೂಪಾಯಿ ಪಾವತಿಸಿ, ಬುಕ್‌ ಮಾಡುತ್ತೇನೆಂದು ಬಿಎಸ್‌ವೈ ಹೇಳಿದ್ದಾರೆಂಬುದು, ಜಿಲ್ಲೆಯ ಹಲವರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು, ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು 50 ಕೋಟಿ ರೂಪಾಯಿಗೆ ಡೀಲ್‌ ಮಾಡಿದ್ದೇನೆಂದು ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿರುವ ಕುರಿತು ಸುದ್ದಿ ಹರಡಿದೆ. ಇದು ಆಶ್ಚರ್ಯಕರ ಸುದ್ದಿ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಹುಚ್ಚು ಹಿಡಿದಂತೆ ಕಾಣುತ್ತಿದೆ ಎಂದು ದೂರಿದ ಅವರು, ಹಲವು ವರ್ಷದಿಂದ ಈವರೆಗೆ ರಮೇಶ್‌ಕುಮಾರ್‌ ಅವರು ಪರಿಶುದ್ಧವಾದ ರಾಜಕಾರಣ ಮಾಡಿದ್ದಾರೆ. ಅಂತಹವರ ಬಗ್ಗೆ ಆರೋಪ ಮಾಡುವ ಮುನ್ನ ನೂರಾರು ಸಲ ಯೋಜಿಸಬೇಕು ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಯಾವುದೆ ಹೇಳಿಕೆ ನೀಡುವ ಮುನ್ನ ಆಲೋಚಿಸಬೇಕು. ಮನಸೋ ಇಚ್ಛೆ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ