ಮೆಗಾಡೇರಿ ಸ್ಥಾಪನೆಗೆ ಅನುದಾನ ಬಿಡುಗಡೆಗೆ ಸಿಎಂ ಅಸ್ತು
ಕೋಲಾರ: ಕೋಚಿಮುಲ್(ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ) ಮುಖ್ಯಡೇರಿ ಆವರಣದಲ್ಲಿ ಮೆಗಾಡೇರಿ ಸ್ಥಾಪನೆಗೆ ಅನುದಾನ ನೀಡಬೇಕೆಂಬ ಅವಳಿ ಜಿಲ್ಲೆಯ ಶಾಸಕರು, ಒಕ್ಕೂಟ ಅಧ್ಯಕ್ಷ ಮತ್ತು ನಿರ್ದೇಶಕರ ನಿಯೋಗದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.
ಅಧಿವೇಶನ ನಡೆಯುತ್ತಿರುವ ಬೆಳಗಾವಿಗೆ ತೆರಳಿದ್ದ ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್, ಶಾಸಕರಾದ ಕೆ. ಶ್ರೀನಿವಾಸಗೌಡ, ಎಚ್. ನಾಗೇಶ್, ಎಸ್.ಎನ್. ನಾರಾಯಣಸ್ವಾಮಿ, ವಿ. ಮುನಿಯಪ್ಪ ಮತ್ತು ವಿಧಾನಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ ಹಾಗೂ ಒಕ್ಕೂಟ ನಿರ್ದೇಶಕರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು.
ಒಕ್ಕೂಟದಲ್ಲಿ 1.0 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿರುವ ಮುಖ್ಯ ಡೇರಿ ನಿರ್ಮಾಣವಾಗಿ ಸುಮಾರು 24 ವರ್ಷವಾಗಿದೆ. ಯಂತ್ರೋಪಕರಣಗಳ ಸಾಮರ್ಥ್ಯ ಕ್ಷೀಣಿಸುತ್ತಿದೆ. ಸಾಂಧರ್ಭಿಕ ಅಗತ್ಯತೆಯಂತೆ 4 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಿದರೂ ಸಹ, ಮುಖ್ಯ ಡೇರಿಯಲ್ಲಿ ನಿತ್ಯ ಅಂದಾಜು 6.5 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿವರ್ಷ ಒಕ್ಕೂಟದಲ್ಲಿ ಹಾಲು ಶೇಖರಣೆ ಸಾಮರ್ಥ್ಯಕ್ಕಿಂತ ಅಧಿಕವಾಗುತ್ತಿದೆ. ಮುಖ್ಯಡೇರಿಯ ಯಂತ್ರೋಪಕರಣಗಳ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ, ಆಧುನಿಕ ತಂತ್ರಜ್ಞಾನವುಳ್ಳ 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾಡೇರಿ ಸ್ಥಾಪನೆ ಮಾಡಬೇಕಿದೆ. ಒಕ್ಕೂಟದ ಮುಖ್ಯಡೇರಿ ಆವರಣದಲ್ಲಿ ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಮೆಗಾಡೇರಿ ನಿರ್ಮಾಣಕ್ಕೆ 50 ಕೋಟಿ ರೂ.ಅನುದಾನ ಹಾಗೂ ಚಿಕ್ಕಬಳ್ಳಾಪುರ ಮೆಗಾಡೇರಿಯಲ್ಲಿ ಉತ್ಪಾದನೆಯಾಗುವ ನಾನಾ ನಮೂನೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಮರ್ಪಕವಾಗಿ ಶೇಖರಣೆ ಮಾಡಲು ಗೋಧಾಮು ,ಈ ಘಟಕದಲ್ಲಿ 3 ಲಕ್ಷ ಲೀಟರ್ ಸಾಮರ್ಥ್ಯದ ಹಾಲು, ಮೊಸರು, ಮಜ್ಜಿಗೆ ಉತ್ಪಾದನಾ ಘಟಕ, ಅತ್ಯಾಧುನಿಕ ತಂತ್ರಜ್ಞಾನದ ಘಟಕದಲ್ಲಿ ಅವಶ್ಯಕ ತಾಂತ್ರಿಕ ಸಿಬ್ಬಂದಿ. ಘಟಕದ ಆವರಣದಲ್ಲಿಯೇ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆಯ 5 ಎಕರೆ ಜಮೀನಿನ ಅವಶ್ಯಕತೆ ಇರುತ್ತದೆ ಎಂದು ಸಿಎಂಗೆ ವಿವರಿಸಲಾಯಿತು.
ನಿಯೋಗದ ಮನವಿಗೆ ಸ್ಪಂದಿಸಿದ ಸಿಎಂ, ಕೋಲಾರ ಮೆಗಾಡೇರಿ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಹಾಗೂ ಚಿಕ್ಕಬಳ್ಳಾಪುರ ಮೆಗಾಡೇರಿಗೆ ಹೆಚ್ಚುವರಿಯಾಗಿ 5 ಎಕರೆ ಜಮೀನನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿದರು.
ನಿರ್ದೇಶಕರಾದ ಕೆ.ವಿ. ನಾಗರಾಜ್, ಜಯಸಿಂಹಕೃಷ್ಣಪ್ಪ, ಜೆ. ಕಾಂತರಾಜ್, ಕೆ. ಅಶ್ವಥರೆಡ್ಡಿ,ಆರ್. ರಾಮಕೃಷ್ಣೇಗೌಡ, ಆರ್.ಆರ್. ರಾಜೇಂದ್ರಗೌಡ, ಎಂ. ಬೈರಾರೆಡ್ಡಿ, ಕೆ. ಪ್ರಭಾಕರರೆಡ್ಡಿ, ಮುನಿಯಪ್ಪ, ಎಸ್.ವಿ. ಸುಬ್ಬಾರೆಡ್ಡಿ ಮತ್ತಿತರರಿದ್ದರು. ಈ ನಿಯೋಗವು ಮನವಿ ಸಲ್ಲಿಸುವ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಇದ್ದರು.
ಕೋಲಾರ: ಕೋಚಿಮುಲ್(ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ) ಮುಖ್ಯಡೇರಿ ಆವರಣದಲ್ಲಿ ಮೆಗಾಡೇರಿ ಸ್ಥಾಪನೆಗೆ ಅನುದಾನ ನೀಡಬೇಕೆಂಬ ಅವಳಿ ಜಿಲ್ಲೆಯ ಶಾಸಕರು, ಒಕ್ಕೂಟ ಅಧ್ಯಕ್ಷ ಮತ್ತು ನಿರ್ದೇಶಕರ ನಿಯೋಗದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.
ಅಧಿವೇಶನ ನಡೆಯುತ್ತಿರುವ ಬೆಳಗಾವಿಗೆ ತೆರಳಿದ್ದ ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್, ಶಾಸಕರಾದ ಕೆ. ಶ್ರೀನಿವಾಸಗೌಡ, ಎಚ್. ನಾಗೇಶ್, ಎಸ್.ಎನ್. ನಾರಾಯಣಸ್ವಾಮಿ, ವಿ. ಮುನಿಯಪ್ಪ ಮತ್ತು ವಿಧಾನಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ ಹಾಗೂ ಒಕ್ಕೂಟ ನಿರ್ದೇಶಕರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು.
ಒಕ್ಕೂಟದಲ್ಲಿ 1.0 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿರುವ ಮುಖ್ಯ ಡೇರಿ ನಿರ್ಮಾಣವಾಗಿ ಸುಮಾರು 24 ವರ್ಷವಾಗಿದೆ. ಯಂತ್ರೋಪಕರಣಗಳ ಸಾಮರ್ಥ್ಯ ಕ್ಷೀಣಿಸುತ್ತಿದೆ. ಸಾಂಧರ್ಭಿಕ ಅಗತ್ಯತೆಯಂತೆ 4 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಿದರೂ ಸಹ, ಮುಖ್ಯ ಡೇರಿಯಲ್ಲಿ ನಿತ್ಯ ಅಂದಾಜು 6.5 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿವರ್ಷ ಒಕ್ಕೂಟದಲ್ಲಿ ಹಾಲು ಶೇಖರಣೆ ಸಾಮರ್ಥ್ಯಕ್ಕಿಂತ ಅಧಿಕವಾಗುತ್ತಿದೆ. ಮುಖ್ಯಡೇರಿಯ ಯಂತ್ರೋಪಕರಣಗಳ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ, ಆಧುನಿಕ ತಂತ್ರಜ್ಞಾನವುಳ್ಳ 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾಡೇರಿ ಸ್ಥಾಪನೆ ಮಾಡಬೇಕಿದೆ. ಒಕ್ಕೂಟದ ಮುಖ್ಯಡೇರಿ ಆವರಣದಲ್ಲಿ ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಮೆಗಾಡೇರಿ ನಿರ್ಮಾಣಕ್ಕೆ 50 ಕೋಟಿ ರೂ.ಅನುದಾನ ಹಾಗೂ ಚಿಕ್ಕಬಳ್ಳಾಪುರ ಮೆಗಾಡೇರಿಯಲ್ಲಿ ಉತ್ಪಾದನೆಯಾಗುವ ನಾನಾ ನಮೂನೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಮರ್ಪಕವಾಗಿ ಶೇಖರಣೆ ಮಾಡಲು ಗೋಧಾಮು ,ಈ ಘಟಕದಲ್ಲಿ 3 ಲಕ್ಷ ಲೀಟರ್ ಸಾಮರ್ಥ್ಯದ ಹಾಲು, ಮೊಸರು, ಮಜ್ಜಿಗೆ ಉತ್ಪಾದನಾ ಘಟಕ, ಅತ್ಯಾಧುನಿಕ ತಂತ್ರಜ್ಞಾನದ ಘಟಕದಲ್ಲಿ ಅವಶ್ಯಕ ತಾಂತ್ರಿಕ ಸಿಬ್ಬಂದಿ. ಘಟಕದ ಆವರಣದಲ್ಲಿಯೇ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆಯ 5 ಎಕರೆ ಜಮೀನಿನ ಅವಶ್ಯಕತೆ ಇರುತ್ತದೆ ಎಂದು ಸಿಎಂಗೆ ವಿವರಿಸಲಾಯಿತು.
ನಿಯೋಗದ ಮನವಿಗೆ ಸ್ಪಂದಿಸಿದ ಸಿಎಂ, ಕೋಲಾರ ಮೆಗಾಡೇರಿ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಹಾಗೂ ಚಿಕ್ಕಬಳ್ಳಾಪುರ ಮೆಗಾಡೇರಿಗೆ ಹೆಚ್ಚುವರಿಯಾಗಿ 5 ಎಕರೆ ಜಮೀನನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿದರು.
ನಿರ್ದೇಶಕರಾದ ಕೆ.ವಿ. ನಾಗರಾಜ್, ಜಯಸಿಂಹಕೃಷ್ಣಪ್ಪ, ಜೆ. ಕಾಂತರಾಜ್, ಕೆ. ಅಶ್ವಥರೆಡ್ಡಿ,ಆರ್. ರಾಮಕೃಷ್ಣೇಗೌಡ, ಆರ್.ಆರ್. ರಾಜೇಂದ್ರಗೌಡ, ಎಂ. ಬೈರಾರೆಡ್ಡಿ, ಕೆ. ಪ್ರಭಾಕರರೆಡ್ಡಿ, ಮುನಿಯಪ್ಪ, ಎಸ್.ವಿ. ಸುಬ್ಬಾರೆಡ್ಡಿ ಮತ್ತಿತರರಿದ್ದರು. ಈ ನಿಯೋಗವು ಮನವಿ ಸಲ್ಲಿಸುವ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಇದ್ದರು.