ಆ್ಯಪ್ನಗರ

ಮೂಲ ಸೌಲಭ್ಯ ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳಿಂದ ತಾರತಮ್ಯ ಆರೋಪ

ಪುರಸಭೆ ಅಧಿಕಾರಿಗಳು ಮೂಲ ಸೌಲಭ್ಯಗಳನ್ನು ಒದಗಿಸದೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಸೌಲಭ್ಯಗಳಿಗೆ ಒತ್ತಾಯಿಸಿ ಪಟ್ಟಣದ ಕೊಳ್ಳೂರು ಹೊಸ ಬಡಾವಣೆ ಸ್ಥಳೀಯ ವಾಸಿಗಳು ಖಾಲಿ ಕೊಡಗಳೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪತ್ರಿಭಟನೆ ಮಾಡಿದರು.

Vijaya Karnataka 16 Jul 2019, 3:56 pm
ಶ್ರೀನಿವಾಸಪುರ : ಪುರಸಭೆ ಅಧಿಕಾರಿಗಳು ಮೂಲ ಸೌಲಭ್ಯಗಳನ್ನು ಒದಗಿಸದೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಸೌಲಭ್ಯಗಳಿಗೆ ಒತ್ತಾಯಿಸಿ ಪಟ್ಟಣದ ಕೊಳ್ಳೂರು ಹೊಸ ಬಡಾವಣೆ ಸ್ಥಳೀಯ ವಾಸಿಗಳು ಖಾಲಿ ಕೊಡಗಳೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪತ್ರಿಭಟನೆ ಮಾಡಿದರು.
Vijaya Karnataka Web charges of discrimination by municipal authorities in providing basic facilities
ಮೂಲ ಸೌಲಭ್ಯ ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳಿಂದ ತಾರತಮ್ಯ ಆರೋಪ


ಪಟ್ಟಣದ ಪುರಸಭೆ ವ್ಯಾಪ್ತಿಗೆ ಕೊಳ್ಳೂರು ಬಡಾವಣೆ ಸೇರಿ 5 ವರ್ಷ ಕಳೆದರೂ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಕಡಿಯುವ ನೀರು, ಬೀದಿ ದೀಪ, ರಸ್ತೆ ಚರಂಡಿ ನಿರ್ಮಿಸದೆ ನಿರ್ಲಕ್ಷಿಸಿದ್ದಾರೆಂದು ಘೋಷಣೆಗಳನ್ನು ಕೂಗಿದರು.

ನಮ್ಮ ಗ್ರಾಮವನ್ನು ಪುರಸಭೆ ಉತ್ತರ-ದಕ್ಷಿಣವಾಗಿ ಬೇರ್ಪಡಿಸಿ ಉತ್ತರ ಭಾಗದಲ್ಲಿರುವ ಪ್ರಭಾವಿಗಳಿಗೆ ರೈಸಿಂಗ್‌ ಪೈಪ್‌ನಿಂದ ನೀರು ಸಂಪರ್ಕ ನೀಡಿದ್ದಾರೆ. ದಕ್ಷಿಣ ಭಾಗದಲ್ಲಿ ವಾಸಿಸುವ ಕೂಲಿ ಕಾರ್ಮಿಕರು, ಬಡವರು, ರೈತರು ಮಾತ್ರ ಪರಿಶಿಷ್ಟರು ವಾಸವಿರುವುದರಿಂದ ಅವರಿಗೆ 6 ತಿಂಗಳಿಂದ ಕುಡಿಯುವ ನೀರು ಬಿಡದೆ, ಬೀದಿ ದೀಪ ಸ್ಥಾಪಿಸದೆ, ಕಾಲೊನಿಗಳಲ್ಲಿ ಸರಿಯಾಗಿ ರಸ್ತೆ, ಚರಂಡಿ ನಿರ್ಮಿಸಿಲ್ಲ. ಸ್ವಚ್ಛತೆ ಮಾಯವಾಗಿದೆ. ನಾವು ಅಧಿಕಾರಿಗಳಿಗೆ ಹಲವಾರು ಸಲ ಮನವಿ ನೀಡಿದರೂ ಸಮಸ್ಯೆಗೆ ಪರಿಹರಿಸಿಲ್ಲವೆಂದು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದರು.

5 ವರ್ಷದ ಹಿಂದೆ ಪುರಸಭೆ ವ್ಯಾಪ್ತಿಗೆ ಕೊಳ್ಳೂರು, ಬೈರಪಲ್ಲಿ, ಉನಿಕಿಲಿ ಮತ್ತು ನಲ್ಲಪಲ್ಲಿ ಗ್ರಾಮಗಳನ್ನು ಸೇರಿಸಿದ್ದಾರಾದರೂ ಸೌಲಭ್ಯಗಳು ಒದಗಿಸುವಲ್ಲಿ ನಿರ್ಲಕ್ಷ ತೆ ವಗಿಸಿದ್ದಾರೆ. ಆರೇಳು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಗೆ ಕೊಳ್ಳೂರು ನಮ್ಮ ಗ್ರಾಮವನ್ನು ಪಂಚಾಯಿತಿಯಿಂದ ಬಿಡಿಸಿಕೊಂಡು ಅಬಿವೃದ್ಧಿಗೆ ಕಲ್ಲು ಹಾಕಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಮೋಹನ್‌ ಕುಮಾರ್‌ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸುತ್ತೇನೆ. ಅಕ್ರಮ ಕೊಳವೆ ಸಂಪರ್ಕಗಳನ್ನು ಕಡಿತಗೊಳಿಸಿ, ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ ನಂತರ ಪ್ರತಿಭಟನೆ ವಾಪಸ್‌ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ