ಕೋಲಾರ: ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು, ಸರಕಾರಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು, ಕೋಳಿ, ಸಮವಸ್ತ್ರ, ಶೂಗಳೊಂದಿಗೆ ರೈತ ಸಂಘವು ಬುಧವಾರ ಪ್ರತಿಭಟನೆ ನಡೆಸಿತು.
ಹೊಸದಾಗಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದ ಸಂಘದ ಮುಖಂಡರು, ಸಮವಸ್ತ್ರ, ಪುಸ್ತಕದಿಂದ ಮೊದಲ್ಗೊಂಡು, ಶೂ ವರೆಗೂ ಪಾಲಕರಿಂದ ಹಣ ವಸೂಲಿ ಮೂಲಕ, ಹಗಲು ದರೋಡೆ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರ್ಟಿಇ ಆದೇಶವನ್ನು ಎಲ್ಲಾ ಶಾಲೆಗಳಿಗೆ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಉಳಿಯಬೇಕು, ಶಿಕ್ಷ ಣದಿಂದ ಯಾವೊಬ್ಬರು ವಂಚಿತವಾಗಬಾರದೆಂಬ ಕಾಳಜಿ ಇದ್ದರೆ ಕೂಡಲೇ ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಕ್ಕೆ ಕಡಿವಾಣ ಹಾಕಬೇಕು. ಶಿಕ್ಷ ಣ ಎಂಬುದು ಬೀದಿಗಳಲ್ಲಿ ಮಾರಾಟವಾಗುವ ವಸ್ತುವಂತಾಗಿದೆ. ಶಿಕ್ಷ ಣ ಕ್ಷೇತ್ರ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿ ಸಿಲುಕಿ ಜನ ಸಾಮಾನ್ಯರ ಬದುಕನ್ನು ಬೀದಿಗೆ ಬೀಳುವಂತಾಗಿದೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆಂಗ್ಲ ಮಾಧ್ಯಮ ಜಾರಿ ಮಾಡುತ್ತೇವೆಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಪ್ರಬಲ ರಾಜಕಾರಣಿಗಳು ಖಾಸಗಿ ಶಾಲೆಗಳನ್ನು ತೆರೆದು ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ದೂಡಲಾಗುತ್ತಿದ್ದಾರೆ. ಈ ಮೂಲಕ ಮದ್ಯಮ ವರ್ಗದ ಜನರ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.
ಸರಕಾರಿ ಶಾಲೆ ಹಿಂದುಳಿಯಲು ಕಾರಣಗಳ ಕುರಿತು ಉಪನಿರ್ದೇಶಕರು, ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಶಿಕ್ಷ ಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗೆ ಅನುಮತಿಯನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ನೀಡಿ ದ್ರೋಹಬಗೆಯುತ್ತಿದ್ದಾರೆ ಎಂದು ಆಪಾದಿಸಿದರು. ಅಲ್ಲದೆ, ಹಗಲು ದರೋಡೆಗೆ ಇಳಿದಿರುವ ಕೆಲ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರಕಾರದ ನಿಯಮದ ಪ್ರಕಾರ ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ನಾಮ ಫಲಕ ಅಳವಡಿಸಬೇಕು.ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಪನಿರ್ದೇಶಕ ಕೆ.ರತ್ನಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ, ಪಾರುಕ್ಪಾಷ, ಹೊಸಹಳ್ಳಿ ವೆಂಕಟೇಶ್, ಬೇತಮಂಗಲ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟೇಶಪ್ಪ, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಅಶ್ವತಪ್ಪ, ರಾಮಸ್ವಾಮಿ, ನಲ್ಲಾಂಡಹಳ್ಳಿ ಶಂಕರ್, ಬಾಲು, ಪುರುಷೋತ್ತಮ್, ಪುತ್ತೇರಿ ರಾಜು, ಗೋವಿಂದಪ್ಪ, ಸಾಗರ್, ಸುಪ್ರಿಂ ಚಲ, ಮುದುವಾಡಿ ಚಂದ್ರಪ್ಪ ರಾಜೇಶ್, ನವೀನ್, ಪವನ್, ಮನು ಮತ್ತಿತರರು ಭಾಗವಹಿಸಿದ್ದರು.
ಹೊಸದಾಗಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದ ಸಂಘದ ಮುಖಂಡರು, ಸಮವಸ್ತ್ರ, ಪುಸ್ತಕದಿಂದ ಮೊದಲ್ಗೊಂಡು, ಶೂ ವರೆಗೂ ಪಾಲಕರಿಂದ ಹಣ ವಸೂಲಿ ಮೂಲಕ, ಹಗಲು ದರೋಡೆ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರ್ಟಿಇ ಆದೇಶವನ್ನು ಎಲ್ಲಾ ಶಾಲೆಗಳಿಗೆ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಉಳಿಯಬೇಕು, ಶಿಕ್ಷ ಣದಿಂದ ಯಾವೊಬ್ಬರು ವಂಚಿತವಾಗಬಾರದೆಂಬ ಕಾಳಜಿ ಇದ್ದರೆ ಕೂಡಲೇ ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಕ್ಕೆ ಕಡಿವಾಣ ಹಾಕಬೇಕು. ಶಿಕ್ಷ ಣ ಎಂಬುದು ಬೀದಿಗಳಲ್ಲಿ ಮಾರಾಟವಾಗುವ ವಸ್ತುವಂತಾಗಿದೆ. ಶಿಕ್ಷ ಣ ಕ್ಷೇತ್ರ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿ ಸಿಲುಕಿ ಜನ ಸಾಮಾನ್ಯರ ಬದುಕನ್ನು ಬೀದಿಗೆ ಬೀಳುವಂತಾಗಿದೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆಂಗ್ಲ ಮಾಧ್ಯಮ ಜಾರಿ ಮಾಡುತ್ತೇವೆಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಪ್ರಬಲ ರಾಜಕಾರಣಿಗಳು ಖಾಸಗಿ ಶಾಲೆಗಳನ್ನು ತೆರೆದು ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ದೂಡಲಾಗುತ್ತಿದ್ದಾರೆ. ಈ ಮೂಲಕ ಮದ್ಯಮ ವರ್ಗದ ಜನರ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.
ಸರಕಾರಿ ಶಾಲೆ ಹಿಂದುಳಿಯಲು ಕಾರಣಗಳ ಕುರಿತು ಉಪನಿರ್ದೇಶಕರು, ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಶಿಕ್ಷ ಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗೆ ಅನುಮತಿಯನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ನೀಡಿ ದ್ರೋಹಬಗೆಯುತ್ತಿದ್ದಾರೆ ಎಂದು ಆಪಾದಿಸಿದರು. ಅಲ್ಲದೆ, ಹಗಲು ದರೋಡೆಗೆ ಇಳಿದಿರುವ ಕೆಲ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರಕಾರದ ನಿಯಮದ ಪ್ರಕಾರ ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ನಾಮ ಫಲಕ ಅಳವಡಿಸಬೇಕು.ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಪನಿರ್ದೇಶಕ ಕೆ.ರತ್ನಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ, ಪಾರುಕ್ಪಾಷ, ಹೊಸಹಳ್ಳಿ ವೆಂಕಟೇಶ್, ಬೇತಮಂಗಲ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟೇಶಪ್ಪ, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಅಶ್ವತಪ್ಪ, ರಾಮಸ್ವಾಮಿ, ನಲ್ಲಾಂಡಹಳ್ಳಿ ಶಂಕರ್, ಬಾಲು, ಪುರುಷೋತ್ತಮ್, ಪುತ್ತೇರಿ ರಾಜು, ಗೋವಿಂದಪ್ಪ, ಸಾಗರ್, ಸುಪ್ರಿಂ ಚಲ, ಮುದುವಾಡಿ ಚಂದ್ರಪ್ಪ ರಾಜೇಶ್, ನವೀನ್, ಪವನ್, ಮನು ಮತ್ತಿತರರು ಭಾಗವಹಿಸಿದ್ದರು.