ಆ್ಯಪ್ನಗರ

ಸಿಎಂ ಬೇಷರತ್‌ ಕ್ಷಮೆಯಾಚಿಸದಿದ್ದರೆ ಹೋರಾಟದ ಎಚ್ಚರಿಕೆ

ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಲಿತ ಸಮುದಾಯದ ಬಳಿ ಬೇಷರತ್‌ ಕ್ಷ ಮೆ ಯಾಚಿಸಬೇಕು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.

Vijaya Karnataka 29 Jan 2019, 5:00 am
ಕೋಲಾರ: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಲಿತ ಸಮುದಾಯದ ಬಳಿ ಬೇಷರತ್‌ ಕ್ಷ ಮೆ ಯಾಚಿಸಬೇಕು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.
Vijaya Karnataka Web cm should apologize dalit community
ಸಿಎಂ ಬೇಷರತ್‌ ಕ್ಷಮೆಯಾಚಿಸದಿದ್ದರೆ ಹೋರಾಟದ ಎಚ್ಚರಿಕೆ


ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರ ಮೂಲಕ ಮನವಿ ಸಲ್ಲಿಸಿದ ಒಕ್ಕೂಟದ ಮುಖಂಡರು, ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲು ಜಾರಿಗೊಳಿಸುವಂತೆ ಆಗ್ರಹಿಸಿ ಒಂದು ವರ್ಷದಿಂದ ಹೋರಾಟ ಮಾಡಿ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಲಿತ ಸಮುದಾಯದ ನೌಕರರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲವೆಂದು ದೂರಿದರು.

ಮುಖಂಡರಾದ ಡಾ.ಎಂ.ವೆಂಕಟಸ್ವಾಮಿ ಅವರು ಕುಮಾರಕೃಪ ಅತಿಥಿಗೃಹದಲ್ಲಿ ಆಯೋಜಿಸಿದ್ದ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರಿಗೆ ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ಜಾರಿ ವಿಷಯ ಪ್ರಸ್ತಾಪಿಸಲು ಮುಂದಾದಾಗ ಕುಮಾರಸ್ವಾಮಿ ಅವರು, ದಲಿತ ಮುಖಂಡರನ್ನು ಕಂಡು ಇದೆಲ್ಲಾ ನಡೆಯೋಲ್ಲ ಎಂದು ದಲಿತ ವಿರೋಧಿನೀತಿ ಅನುಸರಿಸಿದ್ದಾರೆ. ಈ ವಿಷಯವಾಗಿ ಡಾ.ವೆಂಕಟಸ್ವಾಮಿ ಪ್ರತಿಭಟನೆಗೆ ಮುಂದಾಗಿ, ಮಾಧ್ಯಮದವರ ಜತೆ ಮಾತನಾಡುವ ಸಂದರ್ಭದಲ್ಲಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಎಸ್‌ಎಸ್‌ಡಿಯ ಜಿಲ್ಲಾಧ್ಯಕ್ಷ ಆರ್‌.ಚಂದ್ರಶೇಖ ಅವರನ್ನು ಪೊಲೀಸರು ಬಂಧಿಸಿದ್ದಲ್ಲದೆ, ಥಳಿಸಲಾಗಿದೆ. ಪೊಲೀಸ್‌ ಪೇದೆಯೊಬ್ಬರು ರಿವಾಲ್ವರ್‌ನಿಂದ ಹಿಂಬದಿಯಿಂದ ಗುದ್ದಿದಾಗ ಚಂದ್ರಶೇಖರ್‌ ತಲೆಗೆ ಗಾಯವಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿ ರಾತ್ರಿ 10ಕ್ಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ನಡೆ ಮತ್ತು ದಲಿತರ ಚಳವಳಿಗಾರರ ಮೇಲೆ ದೌರ್ಜನ್ಯವೆಸಗಲು ಕುಮ್ಮಕ್ಕು ನೀಡಿರುವ ಮುಖ್ಯಮಂತ್ರಿ ಅವರು ದಲಿತ ಸಮುದಾಯದ ಬೇಷರತ್‌ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು. ಇಲ್ಲವಾದರೆ, ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಒಕ್ಕೂಟದ ಮುಖಂಡರಾದ ಹೂಹಳ್ಳಿ ಪ್ರಕಾಶ್‌, ಚಿಟ್ಟಿಬಾಬು, ನಾಗನಾಳ ಶಂಕರ್‌, ಮಾಸ್ತಿಬಾಬು, ಅರಳೇರಿ ನಾರಾಯಣಸ್ವಾಮಿ, ರಾಂಪುರ ಮುನಿರಾಜು, ಯಳಚೀಪುರ ಮುಳವಾಗಿಲಪ್ಪ, ಮುನೇಶ್‌, ಕಲ್ವಮಂಜಲಿ ಮಂಜುನಾಥ್‌, ಜನ್ನಘಟ್ಟ ಮುರಳಿ, ಧನಮಟ್ನಹಳ್ಳಿ ವೆಂಕಟೇಶಪ್ಪ, ಬೆಟ್ಟಹೊಸಪುರ ಇ.ಚಂದ್ರಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ