ಆ್ಯಪ್ನಗರ

ರಂಜಾನ್‌ ಅಚರಣೆಗೆ ಸಹಕರಿಸಿ: ಡಿಸಿ

ಮುಸ್ಲಿಂ ಸಮುದಾಯದ ಸಂಭ್ರಮದ ಹಬ್ಬ ರಂಜಾನ್‌ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Vijaya Karnataka 5 Jun 2019, 5:00 am
ಕೋಲಾರ: ಮುಸ್ಲಿಂ ಸಮುದಾಯದ ಸಂಭ್ರಮದ ಹಬ್ಬ ರಂಜಾನ್‌ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.
Vijaya Karnataka Web co operate to celebrate ramzan
ರಂಜಾನ್‌ ಅಚರಣೆಗೆ ಸಹಕರಿಸಿ: ಡಿಸಿ


ನಗರದ ಜಿಲ್ಲಾಡಳತ ಭವನದಲ್ಲಿ ಮಂಗಳವಾರ ರಂಜಾನ್‌ ಹಬ್ಬದ ಪ್ರಯುಕ್ತ ಶಾಂತಿಸಭೆ ನಡೆಸಿ ಅವರು ಮಾತನಾಡಿದರು.

ಪ್ರತಿವರ್ಷದಂತೆಯೇ ಈ ಬಾರಿಯೂ ಸಂಭ್ರಮದಿಂದ ರಂಜಾನ್‌ ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆದಿದ್ದು, ಪ್ರತಿಯೊಬ್ಬರೂ ಸಹಕರಿಸಿದರೆ ಶಾಂತಿಯುತ ಮತ್ತು ಅರ್ಥಪೂರ್ಣ ಆಚರಣೆಗೆ ಅವಕಾಶವಾಗುತ್ತದೆ ಎಂದು ತಿಳಿಸಿದರು.

ವಿಶೇಷ ಪ್ರಾರ್ಥನೆ ನಡೆಯಲಿರುವ ಈದ್ಗಾ ಮೈದಾನದ ಕಾಂಪೌಂಡ್‌ ಪೂರ್ಣ ಮಾಡಿಸಿಕೊಡುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಎಲ್ಲ ಕಡೆಗಳಲ್ಲಿಯೂ ನೀರು ಮತ್ತು ವಿದ್ಯುತ್‌ಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಪಿ ರೋಹಿಣಿ ಕಟೋಚ್‌ ಮಾತನಾಡಿ, ಜನ ಮೊದಲೇ ರಸ್ತೆಯಲ್ಲಿ ಕುಳಿತುಕೊಳ್ಳಲು ಆರಂಭಿಸುತ್ತಾರೆ. ಒಂದು ಕಡೆಯಿಂದ ಕುಳಿತುಕೊಂಡರೆ ಜಾಗ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ ಅವರು, ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು ವಾಹನ ನಿಲುಗಡೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಂಜುಮಾನ್‌ ಅಧ್ಯಕ್ಷ ಜಮೀರ್‌ ಅಹಮದ್‌ ಮಾತನಾಡಿ, ವಿದ್ಯುತ್‌ ಅಡಚಣೆ ಅಗುವುದನ್ನು ತಪ್ಪಿಸಬೇಕು. ಹಿಂದಿನ ವರ್ಷ ತೀವ್ರ ಎದುರಾಯಿತು. ಇವರು ಇರೊದೆ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವುದಕ್ಕೆ ಇರುವುದು ಎಂದು ಆರೋಪಿಸಿದರು.

ಹಬ್ಬವು ಬುಧವಾರ ಅಗದಿದ್ದರೆ ಗುರುವಾರ ಆಗುತ್ತದೆ. ಕೇರಳದಲ್ಲಿ ಇವತ್ತು ಅಗದಿರುವ ಕಾರಣ ಮುಂದೂಡುವ ಅವಕಾಶವಿದೆ. ಬೆ.10 ಗಂಟೆಗೆ ಸಂಗೊಂಡಹಳ್ಳಿಯ ದರ್ಗಾ ಮತ್ತು ಬೆಳೆಗ್ಗೆ 11 ಗಂಟೆಗೆ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಹೀಗಾಗಿ ಎರಡೂ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕು. ನೀರಿನ ಸಮಸ್ಯೆ ಸಾಮಾನ್ಯವಾಗಿದೆ, ರಸ್ತೆಯಲ್ಲಿ ಹಳ್ಳಗಳು ಮುಚ್ಚಿಸಿಕೊಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಅಂಜುಮಾನ್‌ ಕಾರ್ಯದರ್ಶಿ ಸೈಫುಲ್ಲಾ, ವಕ್ಫಬೋರ್ಡ್‌ ಚೇರ್ಮನ್‌ ಇದಾಯತುಲ್ಲಾ ಷರೀಫ್‌ ಮಾತನಾಡಿದರು. ಉಪಾಧ್ಯಕ್ಷ ಷರೀಫ್‌, ಬಿಜೆಪಿ ಆಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಜಮೀರ್‌ಖಾನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್‌ ಆಶೀಮ್‌, ವಕ್ಫ್ ಬೋರ್ಡ್‌ನ ಸದಸ್ಯ ಯೂನಿಸ್‌ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ