ಆ್ಯಪ್ನಗರ

ಬೆಳ್ಳಂಬೆಳಗ್ಗೆ ಮದ್ಯ ಮಾರಾಟ; ನೀತಿ ಸಂಹಿತೆ ಗಾಳಿಗೆ!

ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ಚುನಾವಣಾ ಅಯೋಗವೂ ಜಾಗೃತ ತಂಡಗಳನ್ನು ರಚನೆ ಮಾಡಿದೆ.

Vijaya Karnataka 24 Mar 2019, 6:30 pm
ಕೋಲಾರ: ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಗರದಲ್ಲಿ ಬಾರ್‌ಗಳ ಮುಂದೆ ಬೆಳ್ಳಂಬೆಳಿಗ್ಗೆಯೇ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದೆ.
Vijaya Karnataka Web liqur


ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ಚುನಾವಣಾ ಅಯೋಗವೂ ಜಾಗೃತ ತಂಡಗಳನ್ನು ರಚನೆ ಮಾಡಿದೆ. ಗ್ರಾಮೀಣ ಭಾಗದ ಅಂಗಡಿಗಳವರು ನಗರ, ಪಟ್ಟಣ ಪ್ರದೇಶದಿಂದ ಮದ್ಯ ಸಾಗಣೆ ಮಾಡುವಾಗ ಹಿಡಿದು ದೂರು ದಾಖಲಿಸುತ್ತಿದ್ದಾರೆ.

ಆದರೆ ಬಾರ್‌, ವೈನ್ಸ್‌ ಅಂಗಡಿಗಳ ಮುಂದೆ ಮುಂಜಾನೆಯಿಂದ ರಾತ್ರಿಯತನಕ ರಾಜರೋಷವಾಗಿ ನಡೆಯುತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ನಮಕಾವಸ್ತೆಗೆ ಸಂಚಾರ ಮಾಡುತ್ತಿದು, ಇದ್ಯಾವೂದು ಗಮನಕ್ಕೆ ಬಾರದ ಹಾಗೆ ಸುಮ್ಮನಿದ್ದಾರೆ.

ಬೆಳಿಗ್ಗೆ ವಿವಿಧ ಕೂಲಿ ಕಾರ್ಮಿಕರು ಮದ್ಯ ಸೇವೆ ಮಾಡಿ ಕೆಲಸಕ್ಕೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕಾರ್ಮಿಕರ ಗುಂಪು ಬಾರ್‌ ಮುಂದೆಗೆ ಬರುತ್ತಿದ್ದಂತೆ ಡಿಕ್ಕಿ ಎತ್ತುಕೊಡುತ್ತಿದ್ದ.

ಇತ್ತೀಚಿಗೆ ಬಾರ್‌ಗಳವರು ಬೆಳಗ್ಗೆ ತೆಗೆಯಲು ಮತ್ತು ರಾತ್ರಿ ಮುಚ್ಚಲು ಸಮಯವೇ ಇಲ್ಲದಂತಾಗಿದೆ. ಅಬಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದು, ಬಾರ್‌ಗಳ ಮೇಲೆ ನಿಯಂತ್ರಣಾ ಹೇರ ಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ