ಕೆಜಿಎಫ್: ಸಿಪಿಎಂ ಕಾರ್ಯಕರ್ತರು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರದ ಬಿಜೆಪಿ ಸರ ಕಾರದ ವಿರುದ್ಧ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ರಘು ರಾಮಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೇಂದ್ರದ ಬಿಜೆಪಿ ಸರಕಾರ ಕೈಗೊಳ್ಳುತ್ತಿರುವ ನೀತಿಗಳ ವಿರುದ್ಧ ಸಿಪಿಎಂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡ ತಂಗರಾಜ್, ನಷ್ಟದ ಕಾರಣ ನೀಡಿ ವಿಶ್ವವಿಖ್ಯಾತ ಚಿನ್ನದ ಗಣಿ ಕಾರ್ಖಾನೆ ಮುಚ್ಚಿ 19 ವರ್ಷಗಳು ಕಳೆದಿದ್ದು ತಜ್ಞರು ಭೂಮಿಯಲ್ಲಿಉತ್ತಮವಾದ ಚಿನ್ನದ ಪದರುಗಳು ಲಭ್ಯವಿದೆ ಎಂಬ ವರದಿ ಯನ್ನು ನೀಡಿದ್ದಾರೆ ಮತ್ತು ಜಾಗತಿಕ ಮಟ್ಟದಲ್ಲಿಚಿನ್ನದ ರೇಟ್ ವೃದ್ಧಿಗೊಂಡಿದೆ. ಆದ್ದರಿಂದ ಕಾರ್ಖಾನೆ ಪುನರ್ ಆರಂಭಿಸಬೇಕು ಎಂದರು. ಖಾಸಗೀಕರಣಕ್ಕೆ ಸಿದ್ಧತೆ: ಈಗಾಗಲೇ ಬಿಇ ಎಂಎಲ್ ಕಾರ್ಖಾನೆಯನ್ನು ಖಾಸಗೀಕರಣ ಗೊಳಿಸಲು ಪೂರ್ವ ಸಿದ್ಧತೆ ಕೈಗೊಳ್ಳುತ್ತಿರುವ ಕೇಂದ್ರ ಸರಕಾರದ ತೀರ್ಮಾನವನ್ನು ಹಿಂಪಡೆ ಯಬೇಕು ಹಾಗೂ ಉದ್ಯೋಗಗಳನ್ನು ಸೃಷ್ಟಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು, ನಿರುದ್ಯೋಗಿ ಕಾರ್ಮಿಕರಿಗೆ ಮಾಸಿಕ ಜೀವನ ವೇತನ ನೀಡಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕೆಂದರು. ಡ್ರಗ್ಸ್ ಮಾಫಿಯಾ ಸ್ಥಗಿತಗೊಳಿಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ಮಾನವ ದಿನ ಗಳನ್ನು ಹೆಚ್ಚಿಸಬೇಕು. ಹಳೆಯ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ವೃದ್ಧಾಪ್ಯ ಹಾಗೂ ವಿಧವಾ ವೇತನಗಳನ್ನು 3 ಸಾವಿರ ರೂಗಳಿಗೆ ಹೆಚ್ಚಿಸಬೇಕು ಮತ್ತು ಸ್ಥಳೀಯ ವಾಗಿ ಇತ್ತೀಚಿನ ದಿನಗಳಲ್ಲಿಡ್ರಗ್ಸ್ ಮಾಫಿಯಾ ಹೆಚ್ಚಾಗಿ ಕೊಲೆ ದರೋಡೆ, ಸುಲಿಗೆ ಅತ್ಯಾಚಾರ ಗಳಂತಹ ಪ್ರಕರಣಗಳು ಬಯಲಿಗೆ ಬರುತ್ತಿದ್ದು ತಕ್ಷಣ ಡ್ರಗ್ಸ್ ಮಾಫಿಯಾವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಿಪಿಎಂ ಮುಖಂಡ ಬಾಬು ಹಾಗೂ ಇತರರು ಹಾಜರಿದ್ದರು.
ಕೇಂದ್ರದ ವಿರುದ್ಧ ಸಿಪಿಎಂ ಪ್ರತಿಭಟನೆ
ಸಿಪಿಎಂ ಕಾರ್ಯಕರ್ತರು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರದ ಬಿಜೆಪಿ ಸರ ಕಾರದ ವಿರುದ್ಧ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ರಘು ರಾಮಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Vijaya Karnataka 15 Oct 2019, 2:35 pm