ಆ್ಯಪ್ನಗರ

ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರ್ತಿದ್ದಾರೆ: ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ರಮೇಶ್ ಕುಮಾರ್..!

ಮಾಜಿ ಸ್ಪೀಕರ್ ರಮೇಶ್‍ಕುಮಾರ್ ವೇದಿಕೆಯಲ್ಲಿ ಒಂದು ಗಂಟೆ ಕಾಲ ನಿರರ್ಗಳವಾಗಿ ಭಾಷಣ ಮಾಡಿದರು. ಆದ್ರೆ ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯನ್ನೇ ಮರೆತಿದ್ದರು..! ಅದೂ ಕೂಡಾ ಕನ್ನಡ ರಾಜ್ಯೋತ್ಸವ ಆಚರಿಸಿ ಇನ್ನೂ ಮೂರು-ನಾಲ್ಕು ದಿನ ಕಳೆದಿಲ್ಲ. ಆಗಲೇ ಕನ್ನಡ ಮರೆತು ಹೋಗಿತ್ತು.

Lipi 5 Nov 2021, 7:19 pm

ಹೈಲೈಟ್ಸ್‌:

  • ಒಂದೇ ಒಂದು ಕನ್ನಡ ಪದವನ್ನೂ ಬಳಸದೆ ತೆಲುಗು ಭಾಷೆಯಲ್ಲೇ ರಮೇಶ್ ಕುಮಾರ್ ಭಾಷಣ
  • ಶ್ರೀನಿವಾಸ ಪುರದ ಗ್ರಾಮೀಣ ಭಾಗಗಳಿಂದ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸಿದ್ದರು
  • ಈ ಕಾರಣಕ್ಕಾಗಿ ರಮೇಶ್ ಕುಮಾರ್ ಅವರು ಕನ್ನಡ ಭಾಷೆಯಲ್ಲಿ ಮಾತನಾಡದೆ, ತೆಲುಗು ಭಾಷೆಯಲ್ಲೇ ಭಾಷಣ ಮಾಡಿದ್ದಾರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಕೋಲಾರ: ದಲಿತರು ಹೊಟ್ಟೆ ಪಾಡಿಗೆ ಬಿಜೆಪಿ ಸೇರ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಆದ್ರೆ, ಈ ವಿಚಾರವಾಗಿ ಕೋಲಾರ ಜಿಲ್ಲೆ ಶ್ರೀನಿವಾಸ ಪುರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಏನೇ ಹೇಳಿಕೆ ನೀಡಿದ್ದರೂ ಅದು ಸರಿಯಾಗಿಯೇ ಇರುತ್ತೆ ಎಂದ ರಮೇಶ್ ಕುಮಾರ್, ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಬಹಳಷ್ಟು ಅನುಭವ ಇದೆ. ಅವರ ಹೇಳಿಕೆ ವಿರುದ್ದವಾಗಿ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ ಎಂದರೆ, ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಾಗಿಯೇ ಇರುತ್ತೆ ಎಂದು ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಕೋಲಾರ ಜಿಲ್ಲೆ ಶ್ರೀನಿವಾಸ ಪುರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ ಪುರ ಪಟ್ಟಣದ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಸಕ ರಮೇಶ್‍ಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡ ಸೇರಿದಂತೆ ಬ್ಯಾಂಕ್ ನಿರ್ದೇಶಕರು ಭಾಗಿಯಾಗಿದ್ದರು.

ಬಿಜೆಪಿಗೆ ಕೆಲವರು ಸ್ವಾರ್ಥಕ್ಕಾಗಿ ಸೇರಿದ್ದಾರೆ, ದಲಿತ ಪದ ಬಳಸಿಲ್ಲ: ಸಿದ್ದರಾಮಯ್ಯ
ಸಾಲ ಪಡೆದುಕೊಳ್ಳಲು ರೋಣೂರು, ಗೌನಿ ಪಲ್ಲಿ, ಸೋಮಯಾಜಲ ಹಳ್ಳಿ, ಯಲ್ದೂರು ಹಾಗು ಅಡ್ಡಗಲ್ ಗ್ರಾಮದಿಂದ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶ್ರೀನಿವಾಸ ಪುರದಲ್ಲಿ ಡಿಸಿಸಿ ಬ್ಯಾಂಕ್ ಆಯೋಜಿಸಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ವೇದಿಕೆಯಲ್ಲಿ ಒಂದು ಗಂಟೆ ಕಾಲ ನಿರರ್ಗಳವಾಗಿ ಭಾಷಣ ಮಾಡಿದರು. ಆದ್ರೆ ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯನ್ನೇ ಮರೆತಿದ್ದರು..! ಅದೂ ಕೂಡಾ ಕನ್ನಡ ರಾಜ್ಯೋತ್ಸವ ಆಚರಿಸಿ ಇನ್ನೂ ಮೂರು-ನಾಲ್ಕು ದಿನ ಕಳೆದಿಲ್ಲ. ಆಗಲೇ ಕನ್ನಡ ಮರೆತು ಹೋಗಿತ್ತು.

ಸಿದ್ದರಾಮಯ್ಯ ದಲಿತಪರ ಕಾಳಜಿ ಪ್ರಶ್ನಾತೀತ - ಮಾಜಿ ಸಚಿವ ಎಚ್‌. ಆಂಜನೇಯ
ಒಂದೇ ಒಂದು ಕನ್ನಡ ಪದವನ್ನೂ ಬಳಸದೆ ತೆಲುಗು ಭಾಷೆಯಲ್ಲೇ ರಮೇಶ್ ಕುಮಾರ್ ಮಾತನಾಡಿದ್ರು. ಶ್ರೀನಿವಾಸ ಪುರದ ಗ್ರಾಮೀಣ ಭಾಗಗಳಿಂದ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸಿದ್ದ ಕಾರಣ, ರಮೇಶ್ ಕುಮಾರ್ ಅವರು ಕನ್ನಡ ಭಾಷೆಯಲ್ಲಿ ಮಾತನಾಡದೆ, ತೆಲುಗು ಭಾಷೆಯಲ್ಲೇ ಭಾಷಣ ಆರಂಭಿಸಿ ಮುಗಿಸಿದ್ರು.

ಭಾಷಣದ ಕಡೆಯಲ್ಲಿ ತಮ್ಮ ಪತ್ನಿಯನ್ನ ನೆನೆದು ಭಾವುಕರಾದ ರಮೇಶ್‍ ಕುಮಾರ್, ನನ್ನ ಪತ್ನಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಪತ್ನಿಗೆ ನಾನೇನೂ ಮಾಡಲು ಆಗಲಿಲ್ಲ. ನನ್ನೊಂದಿಗೆ ಅವರು ಅನ್ಯೋನ್ಯವಾಗಿ ಜೀವನ ನಡೆಸಿದ್ದಾರೆ. ಅಂತಹ ಪತ್ನಿ ಲಭಿಸಲು ಪುಣ್ಯ ಮಾಡಿದ್ದೆ ಎಂದು ತೆಲುಗಿನಲ್ಲೆ ಹೇಳುತ್ತಾ ಭಾವುಕರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ