ಆ್ಯಪ್ನಗರ

ಆಟೋ ಪ್ರಯಾಣ ದರ ಹೆಚ್ಚಿಸಲು ಡಿಸಿ ನಕಾರ

ಆಟೋ ಪ್ರಯಾಣದರ ಹೆಚ್ಚಿಸಬೇಕೆಂಬ ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಮನವಿಯನ್ನು ತಿರಸ್ಕರಿಸಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಈಗಿರುವ ಪ್ರಯಾಣ ದರವನ್ನು ಮುಂದುವರಿಸಬೇಕೆಂದು ಆದೇಶಿಸಿದರು.

Vijaya Karnataka 21 Dec 2018, 5:00 am
ಹಾಲಿ ದರ ಮುಂದುವರಿಸಲು ಆಟೋ ಚಾಲಕರಿಗೆ ಸೂಚನೆ
Vijaya Karnataka Web dc shines to increase auto travel rates
ಆಟೋ ಪ್ರಯಾಣ ದರ ಹೆಚ್ಚಿಸಲು ಡಿಸಿ ನಕಾರ

ಕೋಲಾರ : ಆಟೋ ಪ್ರಯಾಣದರ ಹೆಚ್ಚಿಸಬೇಕೆಂಬ ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಮನವಿಯನ್ನು ತಿರಸ್ಕರಿಸಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಈಗಿರುವ ಪ್ರಯಾಣ ದರವನ್ನು ಮುಂದುವರಿಸಬೇಕೆಂದು ಆದೇಶಿಸಿದರು.

ನಗರದ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗೆ, ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ವಿ. ಸುರೇಶ್‌ಕುಮಾರ್‌ ಮನವಿ ಸಲ್ಲಿಸಿದರು.

ಕಟ್ಟುನಿಟ್ಟಿನ ಪರಿಶೀಲನೆ ಅಗತ್ಯ:

ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಆಟೋ ರಿಕ್ಷಾಗಳ ದಟ್ಟಣೆ ಹೆಚ್ಚುತ್ತಿದೆ. ಆಟೋ ರಿಕ್ಷಾ ಚಾಲನೆ ಮಾಡಿಕೊಂಡು ಸಾವಿರಾರು ಮಂದು ಜೀವನ ನಡೆಸುತ್ತಿದ್ದಾರೆ. ಚಾಲಕರಲ್ಲಿ ಬಹುಸಂಖ್ಯಾತರು ನ್ಯಾಯಯುತವಾಗಿ ವೃತ್ತಿ ಮಾಡುತ್ತಿದ್ದರೂ, ಕೆಲವರು ಮಾಡುತ್ತಿರುವ ವಂಚನೆಯಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಆಟೋ ಚಾಲನೆ ಪರವಾನಗಿ ಮುಕ್ತವಾಗಿ ದೊರೆಯುತ್ತಿರುವುದು, ದಲ್ಲಾಳಿ, ಮಧ್ಯವರ್ತಿಗಳ ಹಾವಳಿಯು ಇದಕ್ಕೆ ಕಾರಣ. ಪ್ರಾಮಾಣಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಟಿಒ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.

ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕಿ:

ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯ, ಪೊಲೀಸ್‌ ಸಿಬ್ಬಂದಿಯ ಉದಾರ ಮನೋಭಾವದಿಂದಾಗಿ ಜಿಲ್ಲೆಯಾದ್ಯಂತ ಅನಧಿಕೃತ ಆಟೋಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದ ಅವರು, ಮುಕ್ತವಾಗಿ ಪರವಾನಗಿ ನೀಡುವುದಕ್ಕೆ ಕಡಿವಾಣ ಹಾಕಿ, ದಾಖಲೆಗಳನ್ನು ತಪಾಸಣೆ ಮಾಡಿ ತಿಳಿವಳಿಕೆ ನೀಡಿದರೆ, ಅನಧಿಕೃತ ಆಟೋಗಳ ಸಂಚಾರ ಕಡಿಮೆಯಾಗುತ್ತದೆ ಎಂದರು.

ಕನಿಷ್ಟ ದರ 30ರೂ.ಗೆ ಹೆಚ್ಚಿಸಿ:

ಎರಡು ವರ್ಷದಿಂದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಗ್ಯಾಸ್‌ ದರ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾಗಾಗಿ ಆಟೋ ಪ್ರಾಯಣದ ಕನಿಷ್ಠ ದರವನ್ನು 25ರಿಂದ 30 ರೂಪಾಯಿ ಹಾಗೂ ಪ್ರತಿ ಕಿ.ಮೀ.ಗೆ 13ರಿಂದ 15 ರೂಪಾಯಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವ್ಯಾಪಕ ದೂರುಗಳ ಅನ್ವಯ ಮನವಿ ತಿರಸ್ಕಾರ:

ಬಹುತೇಕ ಆಟೋಗಳಿಗೆ ಮೀಟರ್‌ ಅಳವಡಿಸಿಲ್ಲ, ಪ್ರಯಾಣಕ್ಕೆ ಸೂಕ್ತವಾಗಿರುವುದಿಲ್ಲ, ಮೀಟರ್‌ ಇದ್ದರೂ, ಅದನ್ನು ಉಪಯೋಗಿಸುವುದಿಲ್ಲ, ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯಲಾಗುತ್ತದೆಂಬ ದೂರುಗಳ ಹಿನ್ನೆಲೆಯಲ್ಲಿ ಪ್ರಯಾಣದರ ಹೆಚ್ಚಿಸಬೇಕೆಂಬ ಕ್ರಿಯಾ ಸಮಿತಿಯ ಮನವಿಯನ್ನು ಜಿಲ್ಲಾಧಿಕಾರಿ ಮಂಜುನಾಥ್‌ ತಿರಸ್ಕರಿಸಿದರು.

ಪ್ರಯಾಣಿಕರ ಸುರಕ್ಷತೆಗೆ ಗಮನಕ್ಕೆ ಆದೇಶ:

2019ನೇ ಸಾಲಿನ ಜ. 15ರೊಳಗೆ ಮೀಟರ್‌ ಅಳವಡಿಸಲು, ಅನಧಿಕೃತವಾಗಿ ಸಂಚರಿಸುತ್ತಿರುವ ಆಟೋಗಳು ನೋಂದಣಿ , ಪರ್ಮಿಟ್‌ ಪಡೆಯುವ ಮೂಲಕ ಅಧಿಕೃತಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ರಿಕ್ಷಾ ಸುಸ್ಥಿತಿಯಲ್ಲಿರುವಂತೆ ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸಫೆಟ್‌, ಆರ್‌ಟಿಒ ನೇಫಾನಂದ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ