ಸಾಲಬಾಧೆ :ರೈತ ಅತ್ಮಹತ್ಯೆಗೆ ಶರಣು
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಸುಂದರಪಾಳ್ಯ ಗ್ರಾಪಂ ವ್ಯಾಪ್ತಿಯ ತಲ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
Vijaya Karnataka 16 Mar 2019, 5:00 am
ಬೇತಮಂಗಲ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಸುಂದರಪಾಳ್ಯ ಗ್ರಾಪಂ ವ್ಯಾಪ್ತಿಯ ತಲ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಶ್ರೀನಿವಾಸ್ರೆಡ್ಡಿ (35) ಸಾಲ ಬಾಧೆಯಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಮಾಡಲು 5 ರಿಂದ 6 ಲಕ್ಷ ರೂ. ಸಾಲ ಮಾಡಿ ಒಟ್ಟು 5 ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಅವುಗಳಲ್ಲಿ 2ರಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಬರುತ್ತಿತು.
ಸದ್ಯ 2 ಎಕೆರೆ ಜಮೀನಿನಲ್ಲಿ ಟೊಮೇಟೊ, ಆಲುಗಡ್ಡೆ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ಇತ್ತೀಚಿಗೆ 2 ಕೊಳವೆ ಬಾವಿಗಳಲ್ಲಿ ನೀರು ಬರದ ಹಿನ್ನೆಲೆಯಲ್ಲಿ ರೈತ ಶ್ರೀನಿವಾಸ್ ರೆಡ್ಡಿ ಕಂಗಾಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೇತಮಂಗಲ ಪೊಲೀಸ್ ಠಾಣೆ ಪಿಎಸ್ಐ ಜಿ.ಕೆ. ಸುನಿಲ್ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮದ ರೈತ ಶ್ರೀನಿವಾಸ್ರೆಡ್ಡಿ (35) ಸಾಲ ಬಾಧೆಯಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಮಾಡಲು 5 ರಿಂದ 6 ಲಕ್ಷ ರೂ. ಸಾಲ ಮಾಡಿ ಒಟ್ಟು 5 ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಅವುಗಳಲ್ಲಿ 2ರಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಬರುತ್ತಿತು.
ಸದ್ಯ 2 ಎಕೆರೆ ಜಮೀನಿನಲ್ಲಿ ಟೊಮೇಟೊ, ಆಲುಗಡ್ಡೆ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ಇತ್ತೀಚಿಗೆ 2 ಕೊಳವೆ ಬಾವಿಗಳಲ್ಲಿ ನೀರು ಬರದ ಹಿನ್ನೆಲೆಯಲ್ಲಿ ರೈತ ಶ್ರೀನಿವಾಸ್ ರೆಡ್ಡಿ ಕಂಗಾಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೇತಮಂಗಲ ಪೊಲೀಸ್ ಠಾಣೆ ಪಿಎಸ್ಐ ಜಿ.ಕೆ. ಸುನಿಲ್ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.