ಆ್ಯಪ್ನಗರ

ಬಾಲ ಕಾರ್ಮಿಕ ಪದ್ಧತಿ ಅಳಿಸಿ-ಮಕ್ಕಳನ್ನು ಶಾಲೆಗೆ ಕಳುಹಿಸಿ

ಬಾಲ ಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳ ಬಾಲ್ಯ ರಕ್ಷಿಸಲು ಬಾಲ ಕಾರ್ಮಿಕರನ್ನು ದುಡಿತದಿಂದ ಬಿಡಿಸಬೇಕು ಎಂದು ಜೆಎಂಎಫ್‌ಸಿ ಎರಡನೇ ಅಪರ ಸಿವಿಲ್‌ ನ್ಯಾಯಾಧೀಶೆ ಕೆ.ಪುಷ್ಪಲತಾ ತಿಳಿಸಿದರು.

Vijaya Karnataka 23 Jul 2019, 4:51 pm
ಮಾಲೂರು: ಬಾಲ ಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳ ಬಾಲ್ಯ ರಕ್ಷಿಸಲು ಬಾಲ ಕಾರ್ಮಿಕರನ್ನು ದುಡಿತದಿಂದ ಬಿಡಿಸಬೇಕು ಎಂದು ಜೆಎಂಎಫ್‌ಸಿ ಎರಡನೇ ಅಪರ ಸಿವಿಲ್‌ ನ್ಯಾಯಾಧೀಶೆ ಕೆ.ಪುಷ್ಪಲತಾ ತಿಳಿಸಿದರು.
Vijaya Karnataka Web delete child labor practices send children to school
ಬಾಲ ಕಾರ್ಮಿಕ ಪದ್ಧತಿ ಅಳಿಸಿ-ಮಕ್ಕಳನ್ನು ಶಾಲೆಗೆ ಕಳುಹಿಸಿ


ಪಟ್ಟಣದ ದೊಡ್ಡಪೇಟೆಯ ಶ್ರೀವಾಸವಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷ ಣ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಪೊಲೀಸ್‌ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚಾರಣೆ ಅಂಗವಾಗಿ ಕಾನೂನು ನೆರವು ಅರಿವು ಕಾರ‍್ಯಕ್ರಮ ಉದ್ಘಾಟಿಸಿಮಾತನಾಡಿದರು.

ಬಡತನ, ಪೋಷಕರ ಆರ್ಥಿಕ ದುಸ್ಥಿತಿ ಮತ್ತಿತರ ಅನಿವಾರ್ಯ ಕಾರಣಗಳಿಂದಾಗಿ ಶಿಕ್ಷ ಣದಿಂದ ವಂಚಿತರಾದ ಅನೇಕ ಮಕ್ಕಳು ಒತ್ತಾಯ ಪೂರ್ವಕವಾಗಿ ಕೆಗಾರಿಕೆ, ವರ್ಕ್‌ಶಾಪ್‌ ಮತ್ತಿತರ ಕಡೆಗಳಲ್ಲಿ ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೊಡ್ಡ ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. 14 ವರ್ಷದೊಳಗಿನ ಬಾಲ್ಯಾವಸ್ಥೆಯ ಕಾರ್ಮಿಕರುಗಳನ್ನು ಯಾವುದೇ ಅಂಗಡಿ ಮತ್ತು ವಾಣಿಜ್ಯ, ಸಂಸ್ಥೆ, ಗ್ಯಾರೇಜ್‌, ಕಾರ್ಖಾನೆ ,ಹೋಟೆಲ್‌,ರೆಸ್ಟೊರೆಂಟ್‌,ಡಾಬಾ,ಮನೆಗೆಲಸ ಇತರೆ ಉದ್ಯೊಗದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ ಅದಿಹರಿಯದ ಮಕ್ಕಳನ್ನು ಅಕ್ರಮವಾಗಿ ದುಡಿಸಿಕೊಳ್ಳುವುದು ಅಫರಾದವಾಗಿದ್ದು, ಅವರಿಗೆ ಕಡ್ಡಾಯವಾಗಿ ಶಿಕ್ಷ ಣ ನೀಡುವ ಅನುಕೂಲಗಳನ್ನು ಕಲ್ಪಿಸಬೇಕಾಗಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ತಪ್ಪಿತಸ್ಥ ಮಾಲೀಕರುಗಳಿಗೆ 6 ತಿಂಗಳಿಂದ 2 ವರ್ಷ ಜೆಲು ಅಥವಾ 20 ಸಾವಿರ ದಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ಸಹ ನ್ಯಾಯಾಲಯ ವಿಧಿಸಿಬಹುದಾಗಿರುತ್ತದೆ. ಈ ವಿಷಯಲ್ಲಿ ನೆರವು ನೀಡಿದ ಪಾಲಕರ ಮೇಲೂ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ ಅವರು ಬಾಲ ಕಾರ್ಮಿಕ ಪದ್ಧತಿ ಅಳಿಸಿ-ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸಲಹೆ ನೀಡಿದರು.

ಬಿಇಒ ಮಾದವರೆಡ್ಡಿ, ಪಿಎಸ್‌ಐ ರಂಗಸ್ವಾಮಿ, ಉಪಾಧÜ್ಯಕ್ಷ ಅಮರನಾರಾಯಣ, ಕಾರ‍್ಯದರ್ಶಿ ಅಶ್ವತ್‌ನಾರಾಯಣ್‌, ಕಾರ್ಮಿಕ ನಿರೀಕ್ಷ ಕ ಲೋಕೇಶ್‌, ರಾಮಕೃಷ್ಣ ವಿದ್ಯಾಸಂಸ್ಥೆಯ ಮುಖ್ಯೋಪಾಧ'Ü್ಯಯ ಸೋಮಶೇಖರ್‌, ಹಿರಿಯ ವಕೀಲ ಮಂಜುನಾಥ್‌ ಹಾಜರಿದ್ದರು.

20 ಮಾಲೂರು ಪೋಟೊ 4. ಮಾಲೂರು ಪಟ್ಟಣದ ದೊಡ್ಡಪೇಟೆಯ ವಾಸವಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ವಕೀಲರ ಸಂಘ ಕಾನೂನು ಸೇವಾ ಪ್ರಾಧಿಕಾರ ವಿವಿದ ಇಲಾಖೆಯಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿಯ ವಿರೋದಿ ದಿನಾಚಾರಣೆ ಕಾರ‍್ಯಕ್ರಮದ ಉದ್ಘಾಟನೆಯನ್ನು ನ್ಯಾ.ಕೆ.ಪುಷ್ಪಲತಾ, ಟಿ.ಬಿ.ಕೃಷ್ಣಪ್ಪ, ಪಿಎಸ್‌ಐ ರಂಗಸ್ವಾಮಿ, ಮಾದವರೆಡ್ಡಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ