ಆ್ಯಪ್ನಗರ

ಜೂ.13ಕ್ಕೆ ಶಾಸಕರ ಕಚೇರಿ ಮುತ್ತಿಗೆ

ತೀವ್ರವಾದ ಬರಗಾಲ ಹಾಗೂ ಆಲಿಕಲ್ಲು ಮಳೆ ಬಿರುಗಾಳಿಗೆ ರೈತರು ಕಂಗಲಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ಹಾಗೂ ತಾಲೂಕಾಡಳಿತ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಒತ್ತಾಯಿಸಿ ಜೂ.13 ರಂದು ಶಾಸಕರ ಕಚೇರಿ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಭೆಯಲ್ಲಿ ತೀರ್ಮಾನಿಸಲಾಯಿತು.

Vijaya Karnataka 11 Jun 2019, 5:00 am
ಮುಳಬಾಗಲು: ತೀವ್ರವಾದ ಬರಗಾಲ ಹಾಗೂ ಆಲಿಕಲ್ಲು ಮಳೆ ಬಿರುಗಾಳಿಗೆ ರೈತರು ಕಂಗಲಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ಹಾಗೂ ತಾಲೂಕಾಡಳಿತ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಒತ್ತಾಯಿಸಿ ಜೂ.13 ರಂದು ಶಾಸಕರ ಕಚೇರಿ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಭೆಯಲ್ಲಿ ತೀರ್ಮಾನಿಸಲಾಯಿತು.
Vijaya Karnataka Web demonstration in front of mlas house
ಜೂ.13ಕ್ಕೆ ಶಾಸಕರ ಕಚೇರಿ ಮುತ್ತಿಗೆ


ರೈತರ ಜಲ್ವಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದ ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದು ಕಡೆ ತೀವ್ರವಾದ ಬರಗಾಲದಿಂದ ಚೇತರಿಸಿಕೊಂಡಿರುವ ಹಾಗೂ ಅಲ್ಪ ಸಲ್ಪ ನೀರಿನಲ್ಲಿ ಖಾಸಗಿ ಸಾಲ ಮಾಡಿ ಬೆಳೆದಿದ್ದ ಕ್ಯಾಪ್ಸಿಕಾಂ, ಟೊಮೇಟೊ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಬಂದಿದ್ದು, ರೈತರ ಮೊಗದಲ್ಲಿ ನಗೆ ಕಾಣಿಸುವ ಸಮಯದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಲಿಕಲ್ಲು ಮತ್ತು ಬಿರುಗಾಳಿಗೆ ಪಾಲಿಹೌಸ್‌, ನೆಟ್‌ಹೌಸ್‌ ಸಮೇತ ಸಂಪೂರ್ಣವಾಗಿ ನಾಶವಾಗಿದ್ದು, ಅದನ್ನೇ ನಂಬಿದ್ದ ರೈತ ಕಣ್ಣು ಮುಂದೆಯೇ ನೋಡು ನೋಡುತ್ತಾ ಬೆಳೆಗಳ ನಾಶದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿಷ್ಕ್ರಿಯಗೊಂಡು ಖಾಸಗಿ ಸಾಲಕ್ಕೆ ಎದುರಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವ ರೈತರ ನೆರವಿಗೆ ಬರಬೇಕಾದ ತಾಲೂಕಾಡಳಿತದ ಅಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದಾರೆಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇರುವ ಬೆಳೆ ನಾಶವಾಗಿ ಸರಕಾರದಿಂದ ಬರುವ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೈತರನ್ನು ಕಡೆಗಣಿಸುತ್ತಿರುವ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಲುವಳ್ಳಿ ಪ್ರಭಾಕರ್‌ ಮಾತನಾಡಿ, ಪ್ರಜೆಗಳಿಂದ ಆಯ್ಕೆಯಾಗಿ ಪ್ರಜೆಗಳ ಸೇವಕರಾಗಿರಬೇಕಾದ ಶಾಸಕರು ಕಾಣೆಯಾಗಿದ್ದಾರೆ. ತೀವ್ರವಾದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ತಾಲೂಕಿನ ಜನ ತತ್ತರಿಸಿ ಖಾಸಗಿ ಸಾಲಕ್ಕೆ ಸಿಲುಕಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದ್ದರೂ ಅವರ ನೆರವಿಗೆ ಬರಬೇಕಾದ ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರು ನಗರ ಜೀವನಕ್ಕೆ ಹೊಂದಿಕೊಂಡು ಕ್ಷೇತ್ರದ ಜನರ ಸಮಸ್ಯೆಗಳನ್ನು ಮರೆತಿದ್ದಾರೆ. ಇನ್ನೂ ತಾಲೂಕಿನಾದ್ಯಂತ ಸರಕಾರ ಕಚೇರಿಗಳು ಲಂಚದ ಕಚೇರಿಗಳಾಗಿ ಮಾರ್ಪಟ್ಟು ಜನಸಾಮಾನ್ಯರ ಕೆಲಸ ಆಗಬೇಕಾದರೆ ದಲ್ಲಾಳಿಗಳ ನೆರವಿಲ್ಲದೆ ಆಗುತ್ತಿಲ್ಲ ಇನ್ನೂ ಬರ ಹಾಗೂ ಬೆಳೆ ನಷ್ಟ ಪರಿಹಾರ ಕೊಡಲು ಪರಿಶೀಲನೆ ಮಾಡಬೇಕದ ರೆವಿನ್ಯೂ ಅಧಿಕಾರಿಗಳು ಸರಕಾರಿ ಗೋಮಾಳ ಗುಂಡು ತೋಪು ಕೆರೆಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡುವ ದಂಧೆಯಲ್ಲಿದ್ದಾರೆ. ಎಂದು ಆರೋಪಿಸಿ ಮತ್ತು ಬೆಳೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹಾಗೂ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳನ್ನು ಹುಡುಕಿ ಕೊಡಿ ಎಂದು ಜೂ.13ರಂದು ಶಾಸಕರ ಕಚೇರಿ ಮುತ್ತಿಗೆ ಹಾಕಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್‌ ಶ್ರೀನಿವಾಸ್‌, ತಾ.ಅ ಪಾರುಕ್‌ಪಾಷ, ಕ್ಯಾಸಂಬಳ್ಳಿ ಪ್ರತಾಪ್‌, ವಿಜಯಪಾಲ್‌, ಮೇಲಾಗಣಿ ದೇವರಾಜ್‌, ರಂಜಿತ್‌, ಸಾಗರ್‌, ಆನಂದರೆಡ್ಡಿ, ಕೃಷ್ಣಪ್ಪ, ಅಂಬ್ಲಿಕಲ್‌ ಮಂಜುನಾಥ್‌, ನಾರಾಯಣಸ್ವಾಮಿ ಪುತ್ತೇರಿ ರಾಜು ಹಾಗೂ ನೊಂದ ರೈತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ