ಆ್ಯಪ್ನಗರ

ದೇವರ ಹುಂಡಿಯಲ್ಲಿ ಭಕ್ತನ ವಿಶೇಷ ಹರಕೆ ಪತ್ರ

ದೇವರ ಮುಂದೆ ಭಕ್ತರು ನಾನಾ ರೀತಿಯ ಹರಕೆಗಳನ್ನು ಹೊರುವುದು, ಅವು ಈಡೇರಿದಾಗ ಹರಕೆ ತೀರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭಕ್ತ ಮಹಾಶಯ ದೇವರಿಗೆ ಪತ್ರದಲ್ಲಿ ತನ್ನ ಬೇಡಿಕೆಗಳನ್ನು ಬರೆದು ವಿನಂತಿಕೊಂಡಿರುವ ಘಟನೆ ಕೋಲಾರದ ಪ್ರಸಿದ್ಧ ಯಾತ್ರಾಸ್ಥಳ ಚಿಕ್ಕ ತಿರುಪತಿಯಲ್ಲಿ ನಡೆದಿದೆ.

ವಿಕ ಸುದ್ದಿಲೋಕ 25 Jul 2017, 10:03 pm
ಕೋಲಾರ: ದೇವರ ಮುಂದೆ ಭಕ್ತರು ನಾನಾ ರೀತಿಯ ಹರಕೆಗಳನ್ನು ಹೊರುವುದು, ಅವು ಈಡೇರಿದಾಗ ಹರಕೆ ತೀರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭಕ್ತ ಮಹಾಶಯ ದೇವರಿಗೆ ಪತ್ರದಲ್ಲಿ ತನ್ನ ಬೇಡಿಕೆಗಳನ್ನು ಬರೆದು ವಿನಂತಿಕೊಂಡಿರುವ ಘಟನೆ ಕೋಲಾರದ ಪ್ರಸಿದ್ಧ ಯಾತ್ರಾಸ್ಥಳ ಚಿಕ್ಕ ತಿರುಪತಿಯಲ್ಲಿ ನಡೆದಿದೆ.
Vijaya Karnataka Web different vow letter found in temple offering box
ದೇವರ ಹುಂಡಿಯಲ್ಲಿ ಭಕ್ತನ ವಿಶೇಷ ಹರಕೆ ಪತ್ರ


ಜಿಲ್ಲೆಯ ಪ್ರಸಿದ್ಧ ಚಿಕ್ಕ ತಿರುಪತಿ ದೇಗುಲದ ಹುಂಡಿ ಎಣೆಕೆ ವೇಳೆ ಈ ವಿಶೇಷ ಕೋರಿಕೆ ಪತ್ರ ಪತ್ತೆಯಾಗಿದೆ. ಈ ಪತ್ರದಲ್ಲಿ ನಂಬರ್ ಸಹಿತ ಐದು ಕೋರಿಕೆಗಳನ್ನು ದೇವರ ಮುಂದಿಟ್ಟಿದ್ದಾನೆ ತಿಮ್ಮಪ್ಪನ ಭಕ್ತ.

ಕೋರಿಕೆ ಈಡೇರಿದರೆ ಅಭಿಷೇಕ ಮಾಡಿಸುವುದಾಗಿ, ಉಚಿತವಾಗಿ ಜಾಗ, ಮನೆ, ಉದ್ಯೋಗ, ಮಗನಿಗೆ ಒಳ್ಳೆಯ ಸಂಬಂಧ ಸಿಗಬೇಕೆಂದು ತನ್ನ ಕೋರಿಕೆಗಳ ಪಟ್ಟಿಯನ್ನು ದೇವರಿಗೆ ಪತ್ರದಲ್ಲಿ ಅರ್ಪಿಸಿದ್ದಾನೆ. ಇನ್ನು ಮನೆಯ ಮಾಲೀಕ ಅಡ್ವಾನ್ಸ್ ಹಣ ನೀಡದೆ ಸತಾಯಿಸುತ್ತಿರುವ ವಿಚಾರವನ್ನೂ ಬರೆದಿದ್ದಾನೆ.

ಭಕ್ತನ ಈ ವಿಭಿನ್ನ ಕೋರಿಕೆಯ ಪತ್ರವನ್ನು ಕಂಡು ದೇವಾಲಯದ ಆಡಳಿತ ಸಿಬ್ಬಂಧಿ ಬೆರಗಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿರುವ ಈ ಪ್ರಸಿದ್ಧ ಚಿಕ್ಕ ತಿರುಪತಿ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ