ಆ್ಯಪ್ನಗರ

ಹೊಸ ಕೋರ್ಸ್‌ ಆರಂಭಕ್ಕೂ ಮುನ್ನ ಚರ್ಚಿಸಿ

ಯಾವುದೇ ಕೋರ್ಸ್‌ ಆರಂಭಿಸುವ ಮೊದಲು ವಿವಿ.ವ್ಯಾಪಿಯ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಸಿಂಡಿಕೇಟ್‌ ಸದಸ್ಯರ ಸಭೆ ನಡೆಸಿ ಸಾಧಕ ಭಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

Vijaya Karnataka 26 Feb 2019, 5:00 am
ಕೋಲಾರ : ಯಾವುದೇ ಕೋರ್ಸ್‌ ಆರಂಭಿಸುವ ಮೊದಲು ವಿವಿ.ವ್ಯಾಪಿಯ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಸಿಂಡಿಕೇಟ್‌ ಸದಸ್ಯರ ಸಭೆ ನಡೆಸಿ ಸಾಧಕ ಭಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.
Vijaya Karnataka Web discuss before starting a new course
ಹೊಸ ಕೋರ್ಸ್‌ ಆರಂಭಕ್ಕೂ ಮುನ್ನ ಚರ್ಚಿಸಿ


ನಗರದ ಬೆಂಗಳೂರು ಉತ್ತರ ವಿವಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೆ ಬ್ರಿಟಿಷರು ವ್ಯಾಪಾರಕ್ಕೆ ಪೂರಕವಾದ ಶಿಕ್ಷ ಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಅದೇ ಪದ್ಧತಿಯನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಪದವಿ ಹಂತದಲ್ಲಿ ಬಿಎಸ್ಸಿ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಇರುವ ಕೋರ್ಸ್‌ಗಳೇ ಈಗಲು ಮುಂದುವರಿದಿವೆ. ಅನೇಕ ಮಂದಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿಗಳು ಪದವಿ ಮುಗಿಸಿದ ತಕ್ಷ ಣ ಉದ್ಯೋಗ ದೊರೆಯುವಂತಹ ಕೋರ್ಸ್‌ಗಳನ್ನು ವೈಜ್ಞಾನಿಕವಾಗಿ ಆರಂಭಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು.

ಶಿಕ್ಷ ಣ ತಜ್ಞ ಆರ್‌.ಎಂ.ರಂಗನಾಥ್‌ ಮಾತನಾಡಿ, ಪದವಿ ಮುಗಿಸಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪದವಿ ಹಂತದಲ್ಲಿ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಆರಂಭಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಪದವಿ ಹಂತದಲ್ಲಿ ಬಿಎ, ಕಲಾ, ವಾಣಿಜ್ಯ ವಿಭಾಗಗಳಲ್ಲಿ ಅನೇಕ ಕಾರ್ಸ್‌ಗಳಿವೆ. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಇದೇ ಕೋರ್ಸ್‌ ಪದವಿ ಮಾಡುವುದರಿಂದ ಕೆಲಸ ಸಿಗುವುದು ಕಷ್ಟವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಬೇಗ ಕೆಲಸ ದೊರೆಯುವಂತಹ ದೈಹಿಕ ಶಿಕ್ಷ ಣ, ಪರಿಸರ ಅಧ್ಯಯ, ಭಾರತ ಸಂವಿಧಾನ, ಗಾಂಧಿ ಮತ್ತು ಅಂಬೇಡ್ಕರ್‌ ಅಲೋಚನೆ, ಸಾಮಾಜಿಕ ನಾಯಕತ್ವ ಕೋರ್ಸ್‌ಗಳನ್ನು ಹೊಸದಾಗಿ ಜಾರಿಗೆ ತರುವ ಬಗ್ಗೆ ಸಭೆಯ ಗಮನ ಸೆಳೆದರು.

ಮಧ್ಯ ಪ್ರವೇಶ ಮಾಡಿದ ರಮೇಶ್‌ಕುಮಾರ್‌, ಸಮಾಜ ಬಹಳ ಮುಂದುವರಿದಿದ್ದು, ಸ್ವಾಮಿ ವಿವೇಕಾನಂದರ ಹೆಸರನ್ನು ಬಳಸಿಕೊಂಡು ಓಟು ಕೇಳುತ್ತಿರುವ ಇಂದಿನ ವಿವೇಕಾನಂದರಿಗೂ, ಹಿಂದಿನ ವಿವೇಕಾನಂದರಿಗೂ ವ್ಯತ್ಯಾಸವಿದೆ. ನಮ್ಮ ಸಮಾಜಕ್ಕೆ ಆದರ್ಶವಾಗಿದ್ದ ಸ್ವಾಮಿ ವಿವೇಕಾನಂದರ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮಿಂದಾದರೂ ಅಗಬೇಕಿದ್ದು, ಕಾರ್ಲ್‌ ಮಾರ್ಕ್ಸ್‌ ಮತ್ತು ಸ್ವಾಮಿ ವಿವೇಕಾನಂದರ ಅಧ್ಯಯನ ಕುರಿತು ಕೋರ್ಸ್‌ ಆರಂಭಿಸಿ ಎಂದು ಸೂಚಿಸಿದರು.

ಜಿಲ್ಲೆ, ತಾಲೂಕು ಬಳಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಪದವಿ ಮಾಡಿದರೂ ಕೆಲಸ ಸಿಕ್ಕಿಲ್ಲವೆಂದರೆ ಬೇಸರವಾಗುತ್ತದೆ. ಹಿಂದೆ ಕೃಷಿ, ರೇಷ್ಮೆ, ಪ್ರವಾಸೋದ್ಯಮ, ತೋಟಗಾರಿಕೆಗೆ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಅದಕ್ಕೆ ಪ್ರತ್ಯೇಕ ಮಹಾ ವಿದ್ಯಾಲಯಗಳನ್ನು ಆರಂಭಿಸಲಾಯಿತು. ಅದೀಗ ಪ್ರಮುಖ್ಯತೆ ಪಡೆದುಕೊಂಡಿದೆ ಎಂದು ತಿಳಿಸಿದರು.

ಸಿಂಡಿಕೇಟ್‌ ಸದಸ್ಯರ ಆಯ್ಕೆ ಪಾರದರ್ಶಕವಾಗಿರಬೇಕು. ಗುತ್ತಿಗೆದಾರರಿಗೆ, ಖಾಸಗಿ ಶಿಕ್ಷ ಣ ಸಂಸ್ಥೆಗಳಿಗೆ ಅನುಕೂಲ ಮಾಡುವ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಬೇಡಿ. ಈ ಕುರಿತು ಉನ್ನತ ಶಿಕ್ಷ ಣ ಸಚಿವ ಬಳಿ ಚರ್ಚಿಸುತ್ತೇನೆ ಎಂದರು.

ಇದೇ ಶೈಕ್ಷ ಣಿಕ ವರ್ಷದಿಂದ ಹೊಸ ಕೋರ್ಸ್‌ ಆರಂಭವಾಗಬೇಕು. ಯಾವ ಕೋರ್ಸ್‌ ಆರಂಭವಾಗುತ್ತದೆ ಎಂಬುದರ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗೆ ಅಗುವ ಅನುಕೂಲದ ಬಗ್ಗೆಯೂ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಉಪ ಕುಲಪತಿ ಪ್ರೊ.ಎಂ.ಎನ್‌.ರೆಡ್ಡಿ, ಮೌಲ್ಯ ಮಾಪನ ಕುಲಪತಿ ಸುಂದರರಾಜ್‌ ಅರಸು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ