ಆ್ಯಪ್ನಗರ

ಜುಗುಪ್ಸೆ: ವ್ಯಕ್ತಿ ನೇಣಿಗೆ ಶರಣು

ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಗೆ ಶರಣಾಗಿದ್ದಾರೆ. ಬೈರಕೂರು ಹೋಬಳಿಯ ಕಾಡೇನಹಳ್ಳಿ ಗ್ರಾಮದ ಕೆ.ಸಿ.ಕೋದಂಡರಾಮಪ್ಪ (ಕೆಸಿಕೆ) (55) ಎಂಬುವರು ಜ.19ರಂದು ಮನೆಯಿಂದ ಕಾಣೆಯಾಗಿದ್ದರು.

Vijaya Karnataka 26 Jan 2019, 5:00 am
ನಂಗಲಿ : ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಗೆ ಶರಣಾಗಿದ್ದಾರೆ.
Vijaya Karnataka Web disgust a person hangs on the hanging
ಜುಗುಪ್ಸೆ: ವ್ಯಕ್ತಿ ನೇಣಿಗೆ ಶರಣು

ಬೈರಕೂರು ಹೋಬಳಿಯ ಕಾಡೇನಹಳ್ಳಿ ಗ್ರಾಮದ ಕೆ.ಸಿ.ಕೋದಂಡರಾಮಪ್ಪ (ಕೆಸಿಕೆ) (55) ಎಂಬುವರು ಜ.19ರಂದು ಮನೆಯಿಂದ ಕಾಣೆಯಾಗಿದ್ದರು.

ಕುಟುಂಬದವರು ಅಕ್ಕ ಪಕ್ಕದ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಾಗ ಸುಳಿವು ಸಿಕ್ಕಿರಲಿಲ್ಲ. ಆದರೆ ಅದೇ ವ್ಯಕ್ತಿ ತೆಲಂಗಾಣ ರಾಜ್ಯದ ಮೇದಕ್‌ ಜಿಲ್ಲೆಯ ಶಂಕರ್‌ಪೇಟೆ ಬಳಿ ಉಣಸೇ ಮರಕ್ಕೆ ನೇಣು ಬಿಗಿದುಕೊಂಡು ಅತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ಅಲ್ಲಿನ ಶಂಕರ್‌ಪೇಟೆಯ ಪೊಲೀಸರು ನಂಗಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು.

ಮೃತನು ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ವಿರಕ್ತಿ ಹೊಂದಿ ಸಾಯುತ್ತಿದ್ದೇನೆ ಎಂದು ಬರೆದಿದ್ದಾನೆ. ಸ್ವವಿಳಾಸ, ನಂಗಲಿ ಪೊಲೀಸ್‌ ಠಾಣಾ ವಿಳಾಸ ನಮೂದಿಸಿದ್ದು ಇದರಿಂದ ಸುಲಭವಾಗಿ ಅಲ್ಲಿನ ಪೊಲೀಸರು ವಿಳಾಸ ಪತ್ತೆಹಚ್ಚಲು ಸಹಾಯವಾಯಿತು.

ಕೂಡಲೇ ಸಂಬಂಧಿಕರು ಘಟನಾ ಸ್ಥಳಕ್ಕೆ ತೆರಳಿ ಅಲ್ಲಿನ ಪೊಲೀಸರ ನೆರವು ಪಡೆದು ಮೃತದೇಹವನ್ನು ಪಡೆದು ಸ್ವಗ್ರಾಮಕ್ಕೆ ತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ