ಆ್ಯಪ್ನಗರ

150 ವರ್ಷಗಳಿಂದ ಇರುವ ಕೆಜಿಎಫ್‌ ಪೊಲೀಸ್‌ ಜಿಲ್ಲೆ ಸ್ಥಳಾಂತರ ಬೇಡ: ಶಾಸಕಿ ರೂಪಕಲಾ ಶಶಿಧರ್‌

​​ಇಡೀ ಪ್ರಂಪಚಕ್ಕೆ ಚಿನ್ನವನ್ನು ನೀಡಿದ್ದ ನಗರಕ್ಕೆ ಅಂದಿನ ರಾಷ್ಟ್ರಪತಿಗಳು ಕೆಜಿಎಫ್‌ ನಗರಕ್ಕೆ ಪೊಲೀಸ್‌ ವರಿಷ್ಠಾಧಿಕಾರಿಗಳ ಸ್ಥಾನಮಾನ ನೀಡಿದ್ದರು. ಅದರಂತೆ 150 ವರ್ಷಗಳಿಂದ ಕೆಜಿಎಫ್‌ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗಿತ್ತು.

Vijaya Karnataka 16 Oct 2021, 6:51 pm
ಕೆಜಿಎಫ್‌: ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದೆಂದು ಶಾಸಕಿ ರೂಪಕಲಾ ಶಶಿಧರ್‌ ಗಾಂಧಿ ವೃತ್ತದ ಬಳಿ ನಿರಶನವನ್ನು ಆರಂಭಿಸಿದ್ದಾರೆ.
Vijaya Karnataka Web ಕೆಜಿಎಫ್‌
ಕೆಜಿಎಫ್‌


ರಾಜ್ಯಕ್ಕೆ ಮೊಟ್ಟಮೊದಲು ಕೆಜಿಎಫ್‌ ನಗರಕ್ಕೆ ವಿಶೇಷ ಪೊಲೀಸ್‌ ಜಿಲ್ಲೆಯನ್ನಾಗಿ ಕೊಟ್ಟು 150 ವರ್ಷಗಳು ಕಳೆದಿದ್ದು, ಸರಕಾರ ಏಕಾಏಕಿ ಪೊಲೀಸ್‌ ಜಿಲ್ಲೆಯನ್ನು ಎತ್ತಂಗಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್‌ ನಗರದಲ್ಲಿ ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಶಾಸಕಿ ಶನಿವಾರ ಬೆಳಗ್ಗೆ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ನಿರಶನ ಆರಂಭಿಸಿದರು.

ಸಂಘ ಸಂಸ್ಥೆಗಳ ಬೆಂಬಲ

ನಗರದ ಕನ್ನಡ ಪರ ಹೋರಾಟಗಾರರು, ವಕೀಲರ ಸಂಘ, ಎಂ.ಜಿ.ಮಾರುಕಟ್ಟೆಯ ವರ್ತಕರ ಸಂಘ, ತಮಿಳು ಸಂಘ, ರೈತಪರ ಹೋರಾಟಗಾರರ ಸಂಘ, ಬಸ್‌ ಮಾಲೀಕರ ಸಂಘ, ಆಟೋಚಾಲಕರ ಸಂಘ, ಹೂ ಮಾಲಿಗಳ ಸಂಘ, ಓಕ್ಕಲಿಗರ ಸಂಘ, ದಲಿತರಪರ ಸಂಘಟನೆಗಳು ಶಾಸಕರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಕೆಜಿಎಫ್‌ ನಗರದಲ್ಲಿರುವ ಬಿಜೆಪಿ ಸರಕಾರ 2001ರಲ್ಲಿಚಿನ್ನದ ಗಣಿಗಳನ್ನು ಮುಚ್ಚಿವೆ, ಈಗಾಗಲೇ ಬೆಮೆಲ್‌ ಕಾರ್ಖಾನೆಗೂ ಕೊನೆ ಮಳೆ ಹೊಡೆಯಲು ಕೇಂದ್ರ ಸರಕಾರ ಎಲ್ಲಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೇ ರೀತಿ ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನು ಸ್ಥಳಾಂತರಿಸಲು ಪೊಲೀಸ್‌ ಅಧಿಕಾರಿಗಳು ಸಂಚು ರೂಪಿಸಿದ್ದಾರೆಂದು ಸಾರ್ವಜನಿಕ ವಲಯದಲ್ಲಿವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಕೆಜಿಎಫ್‌ ನಗರದಲ್ಲಿರೌಡಿ ಚಟುವಟಿಕೆಗಳನ್ನು ತಡೆಗಟ್ಟಲು ಕೆಜಿಎಫ್‌ ನಗರಕ್ಕೆ ವಿಶೇಷ ಪೊಲೀಸ್‌ ಜಿಲ್ಲೆಯ ಸ್ಥಾನಮಾನ ನೀಡಿ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು 150 ವರ್ಷಗಳ ಹಿಂದೆ ನೇಮಿಸಿದ್ದರು. ಬಿಜೆಪಿ ಸರಕಾರ ಪೊಲೀಸ್‌ ಕಚೇರಿಯನ್ನು ಸ್ಥಳಾಂತರಿಸಲು ಸಂಚು ನಡೆಸಿದೆ ಎಂದರು, ಕೂಡಲೇ ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನು ಸ್ಥಳಾಂತರ ಮಾಡುವುದನ್ನು ಕೈಬಿಡಬೇಕೆಂದು ಸರಕಾವನ್ನು ರಾಜಗೋಪಾಲಗೌಡ ಒತ್ತಾಯಿಸಿದರು.

ನಮ್ಮ ಸರಕಾರ ಎಲ್ಲಿ ಹೋಗಿದೆ

ಮಾಜಿ ಶಾಸಕ ವೈ.ಸಂಪಂಗಿ ತಾಲೂಕಿನ ಎಲ್ಲಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ, ನಮ್ಮ ಸರಕಾರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳ ಮೇಲೆ ಒತ್ತಾಯಿಸುತ್ತಿದ್ದ ಮಾಜಿ ಶಾಸಕ ಸಂಪಂಗಿ ಎಲ್ಲಿ ಹೋಗಿದ್ದಾರೆಂದು ಕಮ್ಮಸಂದ್ರ ಮಾಜಿ ಉಪಾಧ್ಯಕ್ಷ ರಾಘವರೆಡ್ಡಿ ಪ್ರಶ್ನೆ ಮಾಡಿದ್ದಾರೆ. ನಮ್ಮ ಸರಕಾರ ಎಂದು ಹೇಳುವ ಮಾಜಿ ಶಾಸಕರು ಮುಖ್ಯಮಂತ್ರಿಗಳ ಬಳಿ ಹೋಗಿ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯನ್ನು ಕೆಜಿಎಫ್‌ ನಗರದಲ್ಲಿ ಉಳಿಸುವಂತೆ ಮಾಡಬೇಕಿದೆ ಎಂದರು.

ಸಂಸದ ಮುನಿಸ್ವಾಮಿ ಎಲ್ಲಿದ್ದೀಯಪ್ಪ?

ಕಳೆದ 15 ದಿನಗಳಿಂದ ಕಚೇರಿಯ ಸ್ಥಳಾಂತರದ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದರೂ ಸಂಸದ ಮುನಿಸ್ವಾಮಿ ಮಾತ್ರ ತುಟ್ಟಿ ಬಿಚ್ಚುತ್ತಿಲ್ಲಅಂದರೆ ಕೆಜಿಎಫ್‌ ಪೊಲೀಸ್‌ ಜಿಲ್ಲೆಯನ್ನು ಸ್ಥಳಾಂತರ ಮಾಡಲು ಸಂಸದರ ಕೈವಾಡವಿದೆಯೇ ಎಂಬ ಅನುಮಾನುಗಳು ಮೂಡುತ್ತಿವೆ ಎಂದು ನಗರಸಭೆ ಸದಸ್ಯ ಮಾಣಿಕ್ಯಂ ಹೇಳಿದರು.

ಕೆಜಿಎಫ್‌ ಪೊಲೀಸ್‌ ಜಿಲ್ಲೆ ಇತಿಹಾಸ

ಇಡೀ ಪ್ರಂಪಚಕ್ಕೆ ಚಿನ್ನವನ್ನು ನೀಡಿದ್ದ ನಗರಕ್ಕೆ ಅಂದಿನ ರಾಷ್ಟ್ರಪತಿಗಳು ಕೆಜಿಎಫ್‌ ನಗರಕ್ಕೆ ಪೊಲೀಸ್‌ ವರಿಷ್ಠಾಧಿಕಾರಿಗಳ ಸ್ಥಾನಮಾನ ನೀಡಿದ್ದರು. ಅದರಂತೆ 150 ವರ್ಷಗಳಿಂದ ಕೆಜಿಎಫ್‌ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗಿತ್ತು. ಚಿನ್ನದ ಗಣಿಗಳನ್ನು ಮುಚ್ಚಿ ನಂತರವು ಕೆಜಿಎಫ್‌ ನಗರದಲ್ಲಿಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕಿದ್ದರು. ಕೆಜಿಎಫ್‌ ನಗರದಲ್ಲಿ 14 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೆಂದ್ರ ಮತ್ತು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕೆಜಿಎಫ್‌ ಪೊಲೀಸ್‌ ಜಿಲ್ಲೆ ಕೆಜಿಎಫ್‌ ನಗರಕ್ಕೆ ಅವಶ್ಯವಿದ್ದು ಪೊಲೀಸ್‌ ಜಿಲ್ಲೆಯನ್ನು ಸಂಸದ ಮುನಿಸ್ವಾಮಿ ಉಳಿಸಿಕೊಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ