ಬಂಗಾರಪೇಟೆ: ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ ಸೇರಿದಂತೆ ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
ಪಟ್ಟಣದ ವಿಜಯನಗರ ನಿವಾಸಿ ಫಸೀನಾ ಸುಲ್ತಾನಾ ಎಂಬಾಕೆ 2016ರಂದು ಸೈಯದ್ ಇಮ್ರಾನ್ ಅಹ್ಮದ್ ಎಂಬುವರನ್ನು ವಿವಾಹ ಮಾಡಿಕೊಂಡಿದ್ದು ಅಂದು ವರದಕ್ಷಿಣೆಯಾಗಿ 5 ಲಕ್ಷ ರೂ ಬೆಲೆಬಾಳುವ ಬಂಗಾರದ ಒಡವೆಗಳು, ನಗದು 1 ಲಕ್ಷ ರೂ ನೀಡಲಾಗಿತ್ತು. ಏಳು ತಿಂಗಳ ನಂತರ ಪತಿ ಸೈಯದ್ ಇಮ್ರಾನ್ ಅಹ್ಮದ್, ಸೈಯದ್ ಅಹ್ಮದ್ ಹಾಗೂ ಪರ್ವಿನ್ ತಾಜ್ ಎಂಬುವರು ಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಆಗ 3 ಲಕ್ಷ ರೂ., ದ್ವಿಚಕ್ರ ವಾಹನ ನೀಡಿದ್ದರೂ ಪುನಃ 5 ಲಕ್ಷ ರೂ. ತರುವಂತೆ ತವರು ಮನೆಗೆ ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪಟ್ಟಣದ ವಿಜಯನಗರ ನಿವಾಸಿ ಫಸೀನಾ ಸುಲ್ತಾನಾ ಎಂಬಾಕೆ 2016ರಂದು ಸೈಯದ್ ಇಮ್ರಾನ್ ಅಹ್ಮದ್ ಎಂಬುವರನ್ನು ವಿವಾಹ ಮಾಡಿಕೊಂಡಿದ್ದು ಅಂದು ವರದಕ್ಷಿಣೆಯಾಗಿ 5 ಲಕ್ಷ ರೂ ಬೆಲೆಬಾಳುವ ಬಂಗಾರದ ಒಡವೆಗಳು, ನಗದು 1 ಲಕ್ಷ ರೂ ನೀಡಲಾಗಿತ್ತು. ಏಳು ತಿಂಗಳ ನಂತರ ಪತಿ ಸೈಯದ್ ಇಮ್ರಾನ್ ಅಹ್ಮದ್, ಸೈಯದ್ ಅಹ್ಮದ್ ಹಾಗೂ ಪರ್ವಿನ್ ತಾಜ್ ಎಂಬುವರು ಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಆಗ 3 ಲಕ್ಷ ರೂ., ದ್ವಿಚಕ್ರ ವಾಹನ ನೀಡಿದ್ದರೂ ಪುನಃ 5 ಲಕ್ಷ ರೂ. ತರುವಂತೆ ತವರು ಮನೆಗೆ ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.