ಆ್ಯಪ್ನಗರ

ಕೊಳವೆಬಾವಿ ಕೊರೆಸಿ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಿ

ಫ್ಲೋರೈಡ್‌ ಅಂಶವುಳ್ಳ ನೀರು ಕುಡಿಯುವುದರಿಂದ ಬರುವ ಮೂಳೆ, ಹಲ್ಲು ಸವೆತ ಸೇರಿ ನಾನಾ ಕಾಯಿಲೆಗಳನ್ನು ತಪ್ಪಿಸಲು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ಬೇಸಿಗೆಯಲ್ಲಿ ನೀರು ಕೊರತೆಯಾಗದಂತೆ ಮತ್ತಷ್ಟು ಕೊಳವೆಬಾವಿ ನಿರ್ಮಿಸಿ ಟ್ಯಾಂಕರ್‌ ಮೂಲಕ ಸಮರ್ಪಕ ನೀರು ಸರಬರಾಜು ಮಾಡಬೇಕೆಂದು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

Vijaya Karnataka 23 Feb 2019, 5:00 am
ಶ್ರೀನಿವಾಸಪುರ : ಫ್ಲೋರೈಡ್‌ ಅಂಶವುಳ್ಳ ನೀರು ಕುಡಿಯುವುದರಿಂದ ಬರುವ ಮೂಳೆ, ಹಲ್ಲು ಸವೆತ ಸೇರಿ ನಾನಾ ಕಾಯಿಲೆಗಳನ್ನು ತಪ್ಪಿಸಲು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ಬೇಸಿಗೆಯಲ್ಲಿ ನೀರು ಕೊರತೆಯಾಗದಂತೆ ಮತ್ತಷ್ಟು ಕೊಳವೆಬಾವಿ ನಿರ್ಮಿಸಿ ಟ್ಯಾಂಕರ್‌ ಮೂಲಕ ಸಮರ್ಪಕ ನೀರು ಸರಬರಾಜು ಮಾಡಬೇಕೆಂದು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.
Vijaya Karnataka Web drain the pond and avoid the water flowing in the summer
ಕೊಳವೆಬಾವಿ ಕೊರೆಸಿ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಿ


ಪಟ್ಟಣದ ವಲ್ಲಭಭಾಯಿ ರಸ್ತೆಯ ಕಟ್ಟೆ ಕೆಳಗಿನಪಾಳ್ಯ ಮತ್ತು ಸಂತೆ ಮೈದಾನದಲ್ಲಿ ಪುರಸಭೆಯಿಂದ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರ ಆರೋಗ್ಯದ ಸುರಕ್ಷ ತೆಯ ದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲಾ ಊರುಗಳಲ್ಲಿ ಹಂತಹಂತವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ಕಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಪಟ್ಟಣದಲ್ಲಿ ಕಟ್ಟೆ ಕೆಳಗಿನ ಪಾಳ್ಯ ಮತ್ತು ಸಂತೆ ಮೈದಾನ ವ್ಯಾಪ್ತಿಯಲ್ಲೇ ಬಡವರು, ಕೂಲಿ ಕಾರ್ಮಿಕರು, ರೈತರು ಇರುವ ಈ ಭಾಗದಲ್ಲಿ ಸದ್ಯ 2 ನೀರಿನ ಘಟಕಗಳು ಸ್ಥಾಪಿಸಲಾಗುತ್ತಿದೆ. ಇದಕ್ಕೆ ತಲಾ 11.50 ಲಕ್ಷ ರೂ. ಸರಕಾರ ಬಿಡುಗಡೆ ಮಾಡಿದೆ. ಇಂದು ಪುರಸಭೆ ವ್ಯಾಪ್ತಿಯ 3ನೇ ಘಟಕ ಇದಾಗಿದೆ. ನಾಗರಿಕರು ಅಡುಗೆ ಮತ್ತು ಕುಡಿಯಲು ಇದೇ ನೀರನ್ನು ಬಳಸಿಕೊಂಡು ಆರೋಗ್ಯವಂತರಾಗಬೇಕು ಎಂದರು.

ನಾವು 1 ಲೀಟರ್‌ ನೀರು ಬಾಟಲ್‌ ಖರೀದಿಸಿದರೆ 20 ರೂ. ತೆರಬೇಕು. ಆದರೆ ಸರಕಾರ ಕೊಡುವ 20 ಲೀಟರ್‌ ನೀರಿಗೆ ಕೇವಲ 2 ರೂ. ನೀರಿನ ಸಂಸ್ಕರಣ ವೆಚ್ಚ ಮಾತ್ರ ಕೊಡಲಾಗುತ್ತಿದೆ. ಈ ಮೊದಲು ಕೋಳ್ಳೂರು ಬಡಾವಣೆಯಲ್ಲಿ ನಿರ್ಮಿಸಲಾಗಿತ್ತು. ಇನ್ನು ಅಗತ್ಯ ಇರುವ ಕಡೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಕುಂದು ಕೊರತೆ ಸಭೆ: ನಂತರ ಪುರಸಭೆ ಸಭಾಂಗಣದಲ್ಲಿ ಸಾರ್ವಜನಿಕರು ಮತ್ತು ಪುರಪಿತೃಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ರಮೇಶ್‌ ಕುಮಾರ್‌ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲು ಇನ್ನೂ 35 ಹೊಸ ಕೊಳವೆಬಾವಿಗಳು ಕೊರೆಯಲು ಯೋಜನೆ ಹಾಕಿಕೊಳ್ಳಿ. ಸರಕಾರದಿಂದ ಹಣ ಮಂಜೂರು ಮಾಡಿಸಲಾಗುವುದು ಎಂದು ಮುಖ್ಯಾಧಿಕಾರಿ ಮೋಹನ್‌ ಕುಮಾರ್‌ಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷ ಮುಕ್ತಿಯಾರ್‌ ಆಹ್ಮದ್‌, ಸದಸ್ಯ ಬಿ.ಎಂ.ಪ್ರಕಾಶ್‌, ವಿ.ಶಂಕರ್‌, ಎಂ.ಸತ್ಯನಾರಾಯಣ, ಮುನಿರಾಜು, ಮಾಜಿ ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಇಲಾಹಿ ಸರ್ದಾರ್‌, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ್‌ ಅಶೋಕ್‌, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್‌, ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ಜಯಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ