ಆ್ಯಪ್ನಗರ

ಸರಕಾರಿ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ: ವೈದ್ಯಾಧಿಕಾರಿಗಳ ಮೇಲೆ ಸ್ಪೀಕರ್‌ ಸಿಡಿಮಿಡಿ

ನೀವೆಲ್ಲಾ ಸ್ಕೌಂಡ್ರಲ್ಸ್‌, ನಿಮ್ಮನ್ನೆಲ್ಲ ಮನುಷ್ಯರು ಅಂತ ಕರೆದೋರು ಯಾರು, ಮಾನವೀಯತೆ ಇದೆಯಾ ನಿಮ್ಗೆ?, ಬಡತನದ ಬಗ್ಗೆ ನಯಾಪೈಸೆ ಕರುಣೆ ಇದೆಯೇ, ಭಗವಂತ ಅನ್ನೊವ್ನು ಇದ್ರೆ ತಕ್ಷಣವೇ ನಿಮಗೇನಾದರೂ ತೊಂದರೆ ಆಗಬೇಕು, ಯಾಕ್ರಿ ಬದುಕಿದ್ದೀರಿ, ಡೋಂಟ್‌ ಶೋ ಯುವರ್‌ ಫೇಸಸ್‌...

Vijaya Karnataka 17 Jul 2019, 10:32 pm
ಕೋಲಾರ: ಶಟ್‌ ಅಫ್‌... ನೀವೆಲ್ಲಾ ಸ್ಕೌಂಡ್ರಲ್ಸ್‌, ನಿಮ್ಮನ್ನೆಲ್ಲ ಮನುಷ್ಯರು ಅಂತ ಕರೆದೋರು ಯಾರು, ಮಾನವೀಯತೆ ಇದೆಯಾ ನಿಮ್ಗೆ?, ಬಡತನದ ಬಗ್ಗೆ ನಯಾಪೈಸೆ ಕರುಣೆ ಇದೆಯೇ, ಭಗವಂತ ಅನ್ನೊವ್ನು ಇದ್ರೆ ತಕ್ಷಣವೇ ನಿಮಗೇನಾದರೂ ತೊಂದರೆ ಆಗಬೇಕು, ಯಾಕ್ರಿ ಬದುಕಿದ್ದೀರಿ, ಡೋಂಟ್‌ ಶೋ ಯುವರ್‌ ಫೇಸಸ್‌...
Vijaya Karnataka Web drug shortage in a government hospital speaker cdmd on doctors
ಸರಕಾರಿ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ: ವೈದ್ಯಾಧಿಕಾರಿಗಳ ಮೇಲೆ ಸ್ಪೀಕರ್‌ ಸಿಡಿಮಿಡಿ


ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಗಳನ್ನು ಸಮರ್ಪಕವಾಗಿ ಪೂರೈಕೆ ಮಾಡದ ಜಿಲ್ಲಾ ವೈದ್ಯಾಧಿಕಾರಿಗಳ ಹಾಗೂ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ವಿಧಾನಸಭಾಧ್ಯಕ್ಷರೂ ಆದ ಶ್ರೀನಿವಾಸಪುರ ಶಾಸಕ ರಮೇಶ್‌ ಕುಮಾರ್‌ ಆಕ್ರೋಶಗೊಂಡ ಪರಿಯಿದು.

ಅಪಘಾತದಲ್ಲಿ ಮೃತಪಟ್ಟಿದ್ದ ಬೆಂಬಲಿಗರ ಅಂತಿಮ ದರ್ಶನ ಪಡೆಯಲು ಮಂಗಳವಾರ ಬೆಳಗ್ಗೆ ರಮೇಶ್‌ ಕುಮಾರ್‌ ಅವರು ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಆಸ್ಪತ್ರೆಯಲ್ಲಿನ ಸ್ಪಚ್ಛತೆ ಹಾಗೂ ಔಷಧಗಳ ಲಭ್ಯತೆಯ ಕುರಿತು ಪರಿಶೀಲಿಸಿದಾಗ ಸಮರ್ಪಕವಾಗಿ ಪೂರೈಕೆಯಾಗದಿರುವುದು ಬೆಳಕಿಗೆ ಬಂದಿದೆ.

ಇದರಿಂದ ಸಿಟ್ಟಾಟ ಅವರು, ನಂಬಿಕಸ್ಥರು ಎಂಬ ಕಾರಣದಿಂದ ನಿಮ್ಮನ್ನು ನೇಮಿಸಿಕೊಂಡಿರುತ್ತಾರೆ. ಔಷಧಗಳು ಸಮರ್ಪಕವಾಗಿ ಪೂರೈಕೆಯಾಗದಿದ್ದರೆ ನಮ್ಮ ಗಮನಕ್ಕೆ ತರಬೇಕು. ಆಗ ಆರೋಗ್ಯ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರಿಗೆ ನಾನು ಸೂಚನೆ ನೀಡುತ್ತೇನೆ. ಅದು ಬಿಟ್ಟು ನೀವೇ ಸಚಿವರ ಕಾರ್ಯನಿರ್ವಹಿಸಲಾಗುತ್ತದೆ ಎಂದು ಪ್ರಶ್ನಿಸಿದರು.

ಔಷಧಗಳು ಖಾಲಿಯಾದಾಗ ಕೂಡಲೇ ಸರಕಾರದ ಗಮನಕ್ಕೆ ತರಬೇಕು. ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಗಮನಿಸಿದರೆ ಲಾಭಕ್ಕಾಗಿಯೇ ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿರುವಂತೆ ಕಾಣುತ್ತದೆ. ಸೂಕ್ತ ಚಿಕಿತ್ಸೆ ಸಿಗದೆ ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಲಿ ಎಂಬುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ವೈದ್ಯರಾದ ಶ್ರೀನಿವಾಸ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ