ಆ್ಯಪ್ನಗರ

ಭೂಕಂಪದ ಅನುಭವ, ಬಿರುಕುಬಿಟ್ಟ ಮಹಾವಿದ್ಯಾಲಯ ಗೋಡೆ

ನಗರದ ಹೊರವಲಯ ಟಮಕದಲ್ಲಿನ ತೋಟಗಾರಿಕಾ ಮಹಾವಿದ್ಯಾಲಯ ಭಾಗದಲ್ಲಿ ಗುರುವಾರ ಭೂಕಂಪದ ಅನುಭವಾಗಿದ್ದು, ಕಟ್ಟಡದ ಗೋಡೆಯೂ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ.

Vijaya Karnataka 26 Apr 2019, 5:00 am
ಕೋಲಾರ: ನಗರದ ಹೊರವಲಯ ಟಮಕದಲ್ಲಿನ ತೋಟಗಾರಿಕಾ ಮಹಾವಿದ್ಯಾಲಯ ಭಾಗದಲ್ಲಿ ಗುರುವಾರ ಭೂಕಂಪದ ಅನುಭವಾಗಿದ್ದು, ಕಟ್ಟಡದ ಗೋಡೆಯೂ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ.
Vijaya Karnataka Web earth quake experience in kolar
ಭೂಕಂಪದ ಅನುಭವ, ಬಿರುಕುಬಿಟ್ಟ ಮಹಾವಿದ್ಯಾಲಯ ಗೋಡೆ


ನಗರದ ಮುಳಬಾಗಿಲು ರಸ್ತೆಯ ಟಮಕದಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 1ರ ವೇಳೆಗೆ 3ರಿಂದ 4 ಸೆಕೆಂಡ್‌ ಕಾಲ ಬಾಗಿಲು, ಕಿಟಕಿ ಅಲುಗಾಡಿದ್ದಲ್ಲದೆ, ಕಟ್ಟಡವೂ ನಡುಗಿದ ಅನುಭವಾಗಿದೆ. ಭೂಕಂಪದ ಈ ಅನುಭವದಿಂದ ವಿದ್ಯಾಲಯದ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿತ್ತು.

ಈ ಕುರಿತು ಮಾಹಿತಿ ನೀಡಿದ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್‌ ಅವರು, ಮಧ್ಯಾಹ್ನ ವೇಳೆಗೆ ಮೂರ್ನಾಲ್ಕು ಸೆಕೆಂಡ್‌ ಕಾಲ ವಿದ್ಯಾಲಯದ ಕಟ್ಟಡ ನಡುಗಿದ, ಬಾಗಿಲುಗಳು ತನ್ನಷ್ಟಕ್ಕೆ ಅಲುಗಾಡಿದ ಅನುಭವವಾಯಿತು. ಕ್ರಷರ್‌, ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಸ್ಫೋಟಕ ಬಳಸಿದರೆ, ಸಮೀಪದ ಕಟ್ಟಡವು ಅಲುಗಾಡುವಂತಾಗಲಿದೆ. ಆದರೆ, ವಿದ್ಯಾಲಯದ ಬಳಿ ಇಂತಹ ಕ್ರಷರ್‌ಗಳಿಲ್ಲ, ಗಣಿಗಾರಿಕೆಯೂ ನಡೆಯುತ್ತಿಲ್ಲ. ಆದರೆ ನಡುಗಿದ ಅನುಭವವಾಗಿದೆ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಜೆಯಲ್ಲಿದ್ದಾರೆ. ಭೂಕಂಪದ ಅನುಭವವಾದ ಸಮಯದಲ್ಲಿ ಸಿಬ್ಬಂದಿ ಸೇರಿದಂತೆ ನಾವೆಲ್ಲರೂ ಇದ್ದೆವು. ಭಯದಿಂದ ಹೊರಗೆ ಹೋದೆವು. ಕಟ್ಟಡ ನಡುಗಿದ ಹಿನ್ನೆಲೆಯಲ್ಲಿ ನನ್ನ ಕಚೇರಿಯ ಗೋಡೆಯೂ ಬಿರುಕು ಬಿಟ್ಟಿದೆ ಎಂದು ತಿಳಿಸಿದರು.

ಸುತ್ತಮುತ್ತ ಗ್ರಾಮದಲ್ಲೂ ಶಬ್ದ: ಮಹಾವಿದ್ಯಾಲಯದ ಸುತ್ತಮುತ್ತಲ ಗ್ರಾಮದಲ್ಲೂ ಇದರ ಅನುಭವಾಗಿದೆ. ವಡಗೂರು, ಭಟ್ರಹಳ್ಳಿ ಮತ್ತಿತರ ಗ್ರಾಮಸ್ಥರಿಗೆ ಭೂಮಿಯಿಂದ ಶಬ್ದ ಕೇಳಿಬಂದಿದೆ. ಈ ಗ್ರಾಮದ ಕೆಲವರು ಮಹಾವಿದ್ಯಾಲಯದಲ್ಲಿ ಕಟ್ಟಡ ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿದರು.

ಕೆಎಸ್‌ಎನ್‌ಎಂಡಿಸಿ ತಂಡ ಭೇಟಿ ಸಾಧ್ಯತೆ: ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಏ.26ರಂದು ಕೆಎಸ್‌ಎನ್‌ಡಿಎಂಸಿ(ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ)ದ ತಜ್ಞರ ತಂಡ ಭೇಟಿ ನೀಡುವ ಸಾಧ್ಯತೆ ಇದೆ.

ಭೂಕಂಪದ ಅನುಭವದ ಕುರಿತು ಮಾಹಿತಿ ಹರಡುತ್ತಿದ್ದಂತೆ, ಜಿಲ್ಲಾಧಿಕಾರಿ ಕಚೇರಿಯಿಂದಷ್ಟೆ ಅಲ್ಲದೆ, ಕೆಎಸ್‌ಎನ್‌ಡಿಎಂಸಿಯ ತಜ್ಞರು ಮಹಾವಿದ್ಯಾಲಯದವರನ್ನು ಸಂಪರ್ಕಿಸಿದ್ದರು. ಒಂದುವೇಳೆ ಸ್ವಲ್ಪ ಪ್ರಮಾಣದಲ್ಲಿ ಭೂಕಂಪವಾದರೆ, ಅದು ದಾಖಲಾಗುವುದಿಲ್ಲವೆಂದು ತಿಳಿಸಿರುವ ಅವರು, ಪರಿಶೀಲಿಸಲು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ