ಆ್ಯಪ್ನಗರ

ವಿದ್ಯುತ್‌ ಹರಿದು ಲೈನ್‌ಮ್ಯಾನ್‌ ಸಾವು

ವಿದ್ಯುತ್‌ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಹರಿದ ಪರಿಣಾಮ ಲೈನ್‌ಮ್ಯಾನ್‌ ನೆಲಕ್ಕೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಿಂಡಹಳ್ಳಿ ಸಮೀಪ ಭಾನುವಾರ ನಡೆದಿದೆ.

Vijaya Karnataka 5 Aug 2019, 5:00 am
ಮಾಲೂರು: ವಿದ್ಯುತ್‌ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಹರಿದ ಪರಿಣಾಮ ಲೈನ್‌ಮ್ಯಾನ್‌ ನೆಲಕ್ಕೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಿಂಡಹಳ್ಳಿ ಸಮೀಪ ಭಾನುವಾರ ನಡೆದಿದೆ.
Vijaya Karnataka Web electrocution lineman dead
ವಿದ್ಯುತ್‌ ಹರಿದು ಲೈನ್‌ಮ್ಯಾನ್‌ ಸಾವು


ಮೃತ ವ್ಯಕ್ತಿಯನ್ನು ಮಹದೇವ್‌ (28) ಎಂದು ಗುರುತಿಸಲಾಗಿದೆ. ಬೆಸ್ಕಾಂ ಇಲಾಖೆಯಿಂದ ತಿಂಗಳ ಮೊದಲ ಭಾನುವಾರ ವಿದ್ಯುತ್‌ ದುರಸ್ತಿ ಕಾರ್ಯ ನಡೆಯುತ್ತದೆ. ಅದರಂತೆ ಭಾನುವಾರ ತಾಲೂಕಿನ ಕಸಬಾ ಹೋಬಳಿಯ ಶಿವಾರಪಟ್ಟಣ ಉಪ ವಿದ್ಯುತ್‌ ಕೇಂದ್ರದಿಂದ ದುರಸ್ತಿ ನಡೆಯುತ್ತಿದ್ದ ವೇಳೆ ಸ್ಥಗಿತಗೊಂಡಿದ್ದ ವಿದ್ಯುತ್‌ ಏಕಾಏಕಿ ಹರಿದ ಪರಿಣಾಮ ಲೈನ್‌ಮ್ಯಾನ್‌ ಶಾಕ್‌ಗೆ ಒಳಗಾಗಿ ನೆಲಕ್ಕೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮಹದೇವ್‌ ಮೂಲತಃ ಬಾಗಲಕೋಟೆಯ ವಾಸಿಯಾಗಿದ್ದು, ಬೆಸ್ಕಾಂ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಮಿಂಡಹಳ್ಳಿ ಸಮೀಪದ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಸಂಪರ್ಕ ಕಡಿತದ ಅನುಮತಿ ಪಡೆದು ಕೆಲಸ ಮಾಡುತ್ತಿರುವ ಸಮಯದಲ್ಲಿ ಈ ಭಾಗದ ಖಾಸಗಿ ಕಾರ್ಖಾನೆಗಳಿಂದ ಹರಿದಂತಹ ವಿದ್ಯುತ್‌ನಿಂದ ದುರಂತ ಸಂಭವಿಸಿದೆ.

ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಕೆಜಿಎಫ್‌ ವಲಯದ ಇಇ ಅಶೋಕ್‌ ಕುಮಾರ್‌, ಎಸ್‌ಇ. ಸತೀಶ್‌, ಪಟ್ಟಣದ ಎಇಇ, ಅನ್ವರ್‌ ಪಾಷ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ