ಆ್ಯಪ್ನಗರ

ಕೋಲಾರ: ಆನೆಗಳ ಹಿಂಡು ದಾಳಿ, ಸಾವಿರಾರು ರೂ. ಮೌಲ್ತದ ಬೆಳೆ ನಾಶ

ಆನೆಗಳ ದಾಳಿಯಿಂದ ನಾಶವಾಗಿರುವ ರೈತರ ತೋಟಗಳಿಗೆ ಶೀಘ್ರವಾಗಿ ಆರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರಕಾರದಿಂದ ಪರಹಾರ ಕಲ್ಪಿಸಬೇಕೆಂದು ರಾಯಸಂದ್ರ ಗ್ರಾಮದ ಯುವ ರೈತ ಶ್ರೀನಿವಾಸ್‌ ರೆಡ್ಡಿ ಆಗ್ರಹಿಸಿದ್ದಾರೆ.

Vijaya Karnataka Web 23 Dec 2020, 11:04 pm
ಬೇತಮಂಗಲ: ಇಲ್ಲಿನ ಸುಂದರಪಾಳ್ಯ ಹಾಗೂ ರಾಯಸಂದ್ರ ಗ್ರಾಮಗಳ ಹೊರ ವಲಯದಲ್ಲಿಮಂಗಳವಾರ ರಾತ್ರಿ ಆನೆಗಳ ದಾಳಿಯಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ರೈತರಿಗೆ ನಷ್ಟವಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಮಂಗಳವಾರ ರಾತ್ರಿ ವೇಳೆ ಸುಮಾರು 10ಕ್ಕೂ ಹೆಚ್ಚು ಆನೆಗಳ ಗುಂಪು ರಾಮಸಾಗರ ಕಡೆಯಿಂದ ಸುಂದರಪಾಳ್ಯ ಮೂಲಕ ತಾಯಲೂರು ಗ್ರಾಮಗಳ ಕಡೆಗೆ ಆನೆಗಳ ಹಿಂಡು ಸಂಚರಿಸಿದೆ.

ರಾಯಸಂದ್ರ ಗ್ರಾಮದ ಮುನಿಸ್ವಾಮಿ ರೆಡ್ಡಿಗೆ ಸೇರಿದ ಮುಸಿಕಿನ ಜೋಳದ ತೋಟವನ್ನು ಸುಮಾರು 1/2 ಎಕರೆಯಷ್ಟು ಸಂಪೂರ್ಣವಾಗಿ ನಾಶವಾಗಿದೆ. ಹರೀಶ್‌ ಎಂಬ ರೈತನಿಗೆ ಸೇರಿದ ಬಾಳೆ ತೋಟದಲ್ಲಿನ ಬಾಳೆ ಮರಗಳು ನೆಲಕ್ಕೆ ಉರುಳಿವೆ. ಮುನಿರಾಜ್‌ ಅವರ ಅಲೂಗಡ್ಡೆ ತೋಟ ಆನೆಗಳ ತುಳಿತದಿಂದ ಹಾಳಾಗಿದೆ.

ಸುಂದರಪಾಳ್ಯ ಗ್ರಾಮದ ಕಮಲ್‌ ಸಬ್‌ ಎಂಬ ರೈತನ ಮಾವಿನ ತೋಟದಲ್ಲಿ ಆನೆಗಳ ಸಂಚಾರದಿಂದ ಸುಮಾರು 120ಕ್ಕೂ ಹೆಚ್ಚು ಮವಿನ ಗಿಡಗಳು ನಾಶವಾಗಿವೆ. ಆನೆಗಳ ದಾಳಿಯಿಂದ ನಾಶವಾಗಿರುವ ರೈತರ ತೋಟಗಳಿಗೆ ಶೀಘ್ರವಾಗಿ ಆರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರಕಾರದಿಂದ ಪರಹಾರ ಕಲ್ಪಿಸಬೇಕೆಂದು ರಾಯಸಂದ್ರ ಗ್ರಾಮದ ಯುವ ರೈತ ಶ್ರೀನಿವಾಸ್‌ ರೆಡ್ಡಿ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ