ಆ್ಯಪ್ನಗರ

ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಕೊನೆಗೊಂಡರೂ ರಸ್ತೆಗಿಳಿಯದ ಜನ!

ಸರಕಾರ ಶುಕ್ರವಾರ ಮಧ್ಯಾಹ್ನವೇ ಸರಕಾರ ವಾರಾಂತ್ಯ ಕರ್ಫ್ಯೂ ಆದೇಶ ಹಿಂಪಡೆದು ರಾತ್ರಿ ಕರ್ಫ್ಯೂ ಎಂದಿನಂತೆ ಮುಂದುವರಿಸಿದ್ದರೂ ಶನಿವಾರ, ಭಾನುವಾರ ಜನರ ಸಂಚಾರ ಕ್ಷೀಣಿಸಿತ್ತು. ನಾಲ್ಕನೇ ಶನಿವಾರ ಕಾರಣಕ್ಕೆ ಕಚೇರಿಗಳು ಬಂದ್‌ ಆಗಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬರಲಿಲ್ಲ.

Vijaya Karnataka Web 23 Jan 2022, 9:01 pm
ಕೆಜಿಎಫ್‌: ಸರಕಾರ ಶುಕ್ರವಾರ ಮಧ್ಯಾಹ್ನವೇ ಸರಕಾರ ವಾರಾಂತ್ಯ ಕರ್ಫ್ಯೂ ಆದೇಶ ಹಿಂಪಡೆದು ರಾತ್ರಿ ಕರ್ಫ್ಯೂ ಎಂದಿನಂತೆ ಮುಂದುವರಿಸಿದ್ದರೂ ನಗರದಲ್ಲಿ ಶನಿವಾರ, ಭಾನುವಾರ ಜನರ ಸಂಚಾರ ಕ್ಷೀಣಿಸಿತ್ತು. ನಾಲ್ಕನೇ ಶನಿವಾರ ಕಾರಣಕ್ಕೆ ಕಚೇರಿಗಳು ಬಂದ್‌ ಆಗಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬರಲಿಲ್ಲ. ಭಾನವಾರವೂ ಇದೇ ಸ್ಥಿತಿ ನಗರದಲ್ಲಿ ಮುಂದುವರಿದಿತ್ತು.
Vijaya Karnataka Web weekend curfew


ನಗರದ ಗಾಂಧಿವೃತ್ತ, ಸೂರಜ್‌ಮಲ್‌ ವೃತ್ತ, ರಾಜ್‌ಕುಮಾರ್‌ ವೃತ್ತ, ಸಲ್ಡಾನ ವೃತ್ತ, ಅಂಡ್ರಸನ್‌ಪೇಟೆ ವೃತ್ತ, ನಗರಸಭೆ ಬಸ್‌ ನಿಲ್ದಾಣ ಎಂ.ಜಿ.ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳು ಬಹುತೇಕ ಬಿಕೋ ಎನ್ನುತ್ತಿದ್ದವು.

ಕೆಜಿಎಫ್‌ ನಗರದಲ್ಲಿ ದಿನಕ್ಕೆ 200ರಿಂದ 280ರ ತನಕ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಿರುವ ಕಾರಣ ಅತಂಕಗೊಂಡ ಬಹುತೇಕ ಜನರು ಮನೆಗಳಲ್ಲೇ ಉಳಿದಿದ್ದರು. ಇದರಿಂದ ವಾರಾತ್ಯಂದ ಕರ್ಫ್ಯೂ ಇಲ್ಲದಿದ್ದರೂ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ವೀಕೆಂಡ್‌ ಕರ್ಫ್ಯೂ ರದ್ಧು, ವ್ಯಾಪಾರ ವಹಿವಾಟಿಗೆ ಕಳೆ; ಹುಬ್ಬಳ್ಳಿ -ಧಾರವಾಡ ಮಾರ್ಕೆಟ್ ನಲ್ಲಿ ಭಾರಿ ಜನಸಂದಣಿ!

ಬಸ್‌ ಆಟೋ ಸಂಚಾರ: ಕಳೆದ ವಾರ ನಿಲುಗಡೆಗೊಂಡಿದ್ದ ಖಾಸಗಿ, ಬಸ್‌ಗಳು ಈ ವಾರ ಸಂಚಾರ ಪ್ರಾರಂಭಿಸಿದ್ದವು. ಆದರೆ ಪ್ರಯಾಣಿಕರ ಸಂಖ್ಯೆ ಅಷ್ಟಾಗಿ ಕಾಣಿಸಲಿಲ್ಲ. ಇನ್ನೂ ಕೆಎಸ್ಸಾರ್ಟುಸಿ ಬಸ್‌ ನಿಲ್ದಾಣ ಸ್ಥಿತಿ ಇದಕ್ಕೆ ಹೊರತಾಗಿರಲಿಲ್ಲ. ಪ್ರಯಾಣಿಕರಿಲ್ಲದೆ ಆಟೊ ಚಾಲಕರು ನಿರಾಸೆ ಹೊಂದಿದ್ದರು. ಎಂ.ಜಿ.ಮಾರುಕಟ್ಟೆ, ಒಂದನೇ ಆಡ್ಡ ರಸ್ತೆ ಹಾಗೂ ಪ್ರಮುಖ ಗೀತಾ ರಸ್ತೆಗಳ ಅಂಗಡಿಗಳ ಮುಂದೆ ಗ್ರಾಹಕರು ಬೆರಳಣಿಕೆಯಷ್ಟಿದ್ದರು.

ಎಂ.ಜಿ.ಮಾರುಕಟ್ಟೆಯಲ್ಲಿ ಭಾನುವಾರ ಸಂತೆ ದಿನ ಹಾಗೂ ಖಾಸಗಿ ಬಸ್‌ ನಿಲ್ದಾಣ ಸಮೀಪದ ತರಕಾರಿ ಮಾರುಕಟ್ಟೆಗಳಲ್ಲಿ ಬೆಳಗ್ಗೆ ಕೊಂಚ ಜೋರಾಗಿ ನಡೆದ ವ್ಯಾಪಾರ 10 ಗಂಟೆ ವೇಳೆಗೆ ನಿಧಾನಗತಿಯತ್ತ ಮುಖ ಮಾಡಿತು. ಎರಡು ವಾರ ಬಂದ್‌ ಮಾಡಿದಕ್ಕೆ ಜನರು ಮಾರುಕಟ್ಟೆಗೆ ಬರುವುದನ್ನೇ ಮರೆತಿದ್ದಾರೆ, ಇದು ಮೊದಲಿನ ಸ್ಥಿತಿಗೆ ಬರಲು ಇನ್ನೊಂದು ವಾರ ಬೇಕಾಗುತ್ತದೆ. ನಮಗೆ ಆಗುವ ನಷ್ಟ ಮಾತ್ರ ಯಾರು ಭರಿಸುವುದಿಲ್ಲಎಂದು ತರಕಾರಿ ವ್ಯಾಪಾರಿ ವೇಣು ತಮ್ಮ ಅಳಲು ತೋಡಿಕೊಂಡರು.

ಕೋವಿಡ್ ಹೆಸರಲ್ಲಿ ದುಡ್ಡು ಹೊಡೆದಿದ್ದು ಸಾಕು, ಇನ್ಮುಂದೆ ಯಾವ ರೂಲ್ಸ್ ಬೇಡ: ಕುಟುಕಿದ ಹಳ್ಳಿಹಕ್ಕಿ

ಬೀದಿ ಬದಿ ವ್ಯಾಪಾರಿಗಳ ಗೋಳು ಹೇಳತೀರದು, ಪ್ರತಿ ದಿನ ವ್ಯಾಪಾರ ಮಾಡಿದರಷ್ಟೇ ಮನಯವರ ಹೊಟ್ಟೆ ತುಂಬಿಸಲು ಸಾಧ್ಯ. ವ್ಯಾಪಾರವೇ ಇಲ್ಲದೆ ಹೋದರೆ ಮನೆಯಲ್ಲಿರುವ ಹೊಟ್ಟೆ ತುಂಬಿಸುವುದು ಹೇಗೆ ಎಂದು ಬೀದಿ ಬದಿ ವ್ಯಾಪಾರಿ ಮಣಿಕಂಠ ಪ್ರಶ್ನಿಸಿದರು, ಮನೆಯಲ್ಲಿ ವಯೋವೃದ್ಧರು ಮತ್ತು ಕುಟಂಬದ ಇಬ್ಬರನ್ನು ಪೋಷಣೆ ಮಾಡುವುದು ಕಷ್ಟವಾಗಿದೆ ಎಂದರು.

ಹೋಟೆಲ್‌, ಬೀದಿ ಬದಿಯ ಫಾಸ್ಟ್‌ ಫುಡ್‌ಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಸಂಜೆ ವೇಳೆಗೆ ಪಾನಿಪುರಿ, ಖಾರ ಮಂಡಕ್ಕಿ ಅಂಗಡಿಗಳ ಮುಂದೆ ಜನರಿದ್ದರೂ ಬಹುತೇಕರು ಕೊರೊನಾ ಭಯದಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿರುವುದಾಗಿ ವ್ಯಾಪಾರಿ ಶಿವಸುಂದರ್‌ ಹೇಳಿದರು.

ಇನ್ನೂ ನಗರಸಭೆ ಬಸ್‌ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ ಖಾಸಗಿ ಬಸ್‌ಗಳು ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಪ್ರಯಾಣಿಕರು ಇಲ್ಲದೆ ಹಲವು ಟ್ರಿಪ್‌ಗಳನನ್ನು ಕ್ಯಾನ್ಸಲ್‌ ಮಾಡಿರುವುದಾಗಿ ಕೆಎಸ್ಸಾರ್ಟಿಸಿ ವ್ಯವಾಸ್ಥಾಪಕರು ತಿಳಿಸಿದ್ದಾರೆ. ಭಾನುವಾರ ನಗರಸಭೆ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಪ್ರಯಾಣಿಕರು ಮುಗಿ ಬೀಳುತ್ತಿದ್ದುದು ಕಂಡುಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ