ಆ್ಯಪ್ನಗರ

ತಪ್ಪು ತಿದ್ದಿಕೊಂಡರೆ ಉತ್ತಮ ಫಲಿತಾಂಶ

ಫೆ.25ರಿಂದ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಆರಂಭವಾಗುತ್ತಿದೆ. ಕಳೆದ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ಈ ಪರೀಕ್ಷೆಯಲ್ಲೇ ತಿದ್ದಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಡಿಡಿಪಿಐ ಕೆ.ರತ್ನಯ್ಯ ಸಲಹೆ ನೀಡಿದರು.

Vijaya Karnataka 21 Feb 2019, 4:47 pm
ಕೋಲಾರ : ಫೆ.25ರಿಂದ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಆರಂಭವಾಗುತ್ತಿದೆ. ಕಳೆದ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ಈ ಪರೀಕ್ಷೆಯಲ್ಲೇ ತಿದ್ದಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಡಿಡಿಪಿಐ ಕೆ.ರತ್ನಯ್ಯ ಸಲಹೆ ನೀಡಿದರು.
Vijaya Karnataka Web failure to get a good result
ತಪ್ಪು ತಿದ್ದಿಕೊಂಡರೆ ಉತ್ತಮ ಫಲಿತಾಂಶ


ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷ ಣ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆ ಸಭಾಂಗಣದಲ್ಲಿ 15 ಪ್ರೌಢಶಾಲೆಗಳ 700ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರೀಕ್ಷೆ ಕುರಿತು ಚಿಂತೆ ಮಾಡದೇ ಚಿಂತನೆ ಮಾಡಿ, ಆತಂಕಕ್ಕೆ ಒಳಗಾಗದೇ ಕಲಿಕಾಸಕ್ತಿಯಿಂದ ಗುಂಪು ಅಧ್ಯಯನ ನಡೆಸಿ ನಿಮ್ಮ ಗೊಂದಲ ಪರಿಹರಿಸಿಕೊಳ್ಳಿ ಎಂದು ಕರೆ ನೀಡಿದರು.

ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. ನಿಮಗೆ ನಿಮ್ಮ ಬಗ್ಗೆ ವಿಶ್ವಾಸ ಇರಬೇಕು. ಅದಕ್ಕಾಗಿ ನೀವು ಇಲಾಖೆ ನೀಡಿರುವ 6 ಸೆಟ್‌ ಪ್ರಶ್ನೆಪತ್ರಿಕೆ, 'ನನ್ನನ್ನೊಮ್ಮೆ ಗಮನಿಸಿ' ಪ್ರಶ್ನೆ ಕೋಠಿಯನ್ನು ನೋಡಿ ಬರೆದು ಅಭ್ಯಾಸ ಮಾಡಿ ಮನನವಾದ ನಂತರ ನೋಡದೇ ಬರೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದರು.

ಜನತಾ ಪ್ರೌಢಶಾಲೆ ಸಂಸ್ಥಾಪಕ ಕಾರ್ಯದರ್ಶಿ ಬಿಸಪ್ಪಗೌಡ, ಶಾಲೆಗೆ ಗೈರಾಗದ ಮಕ್ಕಳು ಖಂಡಿತಾ ಪಾಸಾಗುತ್ತಾರೆ. ಪರೀಕ್ಷೆಗೆ ಇರುವ 28 ದಿನ ಕಷ್ಟಪಟ್ಟರೆ ಗೆಲುವು ನಿಶ್ಚಿತ. ಚೆನ್ನಾಗಿ ಓದುವ ಮಕ್ಕಳು ಉತ್ತಮ ಅಂಕ ಗಳಿಸಿ, ಆದರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪಾಸಾಗುವ ಮಟ್ಟಕ್ಕೆ ತರಲು ಶಿಕ್ಷ ಕರು ಶ್ರಮವಹಿಸಿ ಎಂದು ಕೋರಿದರು.

ಪರೀಕ್ಷಾ ನೋಡೆಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಮಾ.21ರಿಂದ ಪರೀಕ್ಷೆ ಆರಂಭಗೊಳ್ಳುತ್ತಿದೆ. ನಿಮಗೆ ಉಳಿದಿರೋದು ಕೇವಲ 28 ದಿನ ಮಾತ್ರ. ಈ ಅವಧಿಯಲ್ಲಿ ನೀವು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಜೀವನದಲ್ಲಿ ಕಷ್ಟಗಳಿಗೆ ಗುರಿಯಾಗುತ್ತೀರಿ ಎಂದು ಎಚ್ಚರಿಸಿದರು.

ಗಣಿತ ವಿಷಯದ ಕುರಿತು ವಿಷಯ ಪರಿವೀಕ್ಷ ಕ ಕೃಷ್ಣಪ್ಪ ಮತ್ತು ಜನತಾ ಪ್ರೌಢಶಾಲೆ ಪ್ರಾಂಶುಪಾಲ ಕೆ.ಗೋಪಾಲರೆಡ್ಡಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಿದರು.

ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿಷಯ ಪರಿವೀಕ್ಷ ಕರಾದ ಶಶಿವದನ, ಸಮಾಜ ವಿಜ್ಞಾನಕ್ಕೆ ವಿಷಯಪರಿವೀಕ್ಷ ಕರಾದ ಗಾಯತ್ರಿ, ಇಂಗ್ಲಿಷ್‌ ವಿಷಯಕ್ಕೆ ಸಹಶಿಕ್ಷ ಕರ ಸಂಘದ ಅಧ್ಯಕ್ಷ ಶಂಕರಪ್ಪ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರ ಗೊಂದಲ ಪರಿಹರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷ ಣಾಧಿಕಾರಿ ರಾಮಕೃಷ್ಣಪ್ಪ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷ ಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಶಿಕ್ಷ ಕ ಕೆ.ವಿ.ರಾಜಣ್ಣ ನಿರೂಪಿಸಿ, ಗಣೇಶ್‌ ಪ್ರಸಾದ್‌, ಶಿಕ್ಷ ಣ ಸಂಯೋಜಕ ಮುನಿರತ್ನಯ್ಯಶೆಟ್ಟಿ, ಈ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷ ಕರಾದ ನಾರಾಯಣಸ್ವಾಮಿ, ನಾಗರಾಜ್‌, ಸುಜಾತಾ, ಈಶ್ವರಪ್ಪ, ಸುಬ್ರಮಣಿ, ಶಿಕ್ಷ ಕರಾದ ಶ್ರೀನಿವಾಸಗೌಡ, ಗಣೇಶ್‌, ರವಿ, ಮಲ್ಲಿಕಾರ್ಜುನ್‌ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ