ಆ್ಯಪ್ನಗರ

Kolar Crime News: ಸುಳ್ಳು ಲೈಂಗಿಕ ಕಿರುಕುಳ ಕೇಸ್‌! ವಿದ್ಯಾರ್ಥಿನಿ, ಪಾದ್ರಿ ಸೇರಿ ನಾಲ್ವರ ಬಂಧನ

ಕೋಲಾರ ಮಹಿಳಾ ಠಾಣೆಯಲ್ಲಿ ಆಗಸ್ವ್‌ 30 ರಂದು ಇಬ್ಬರು ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ನೂರು ವರ್ಷಗಳ ಇತಿಹಾಸ ಹೊಂದಿರುವ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್‌ ಕುಂದರ್‌ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಸುಳ್ಳು ದೂರು ನೀಡಲಾಗಿತ್ತು. ಜತೆಗೆ ನ್ಯಾಯಾಧೀಶರ ಎದುರು ನಕಲಿ ವಿದ್ಯಾರ್ಥಿನಿಯರಿಂದ ಹೇಳಿಕೆ ದಾಖಲು ಸಹ ಮಾಡಿಸಲಾಗಿತ್ತು. ಈ ಸಂಬಂಧ ಲೆಕ್ಕಾಧಿಕಾರಿ ಜಾನ್ಸನ್‌ ಕುಂದರ್‌ ಪತ್ನಿ ಸವಿತಾ ಜಾನ್‌ ಎಸ್ಪಿ ದೇವರಾಜ್‌ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಸುಳ್ಳು ದೂರು ನೀಡಿರುವುದು ಸಾಬೀತಾಗಿದೆ.

Edited byದಿಲೀಪ್ ಡಿ. ಆರ್. | Vijaya Karnataka 19 Sep 2022, 11:00 am

ಹೈಲೈಟ್ಸ್‌:

  • ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್‌ ಹಾಗೂ ಮಂಜು ಬಂಧನ
  • ಹಾಸ್ಟೆಲ್‌ ವಾರ್ಡನ್‌ ಶೀಲಾ ಕೂಡಾ ಪೊಲೀಸ್ ಬಲೆಗೆ
  • ಕುಮ್ಮಕ್ಕು ನೀಡಿದ ಮೆಥೋಡಿಸ್ವ್‌ ಚರ್ಚ್ ಪಾದ್ರಿ ರೆವರೆಂಡ್‌ ಶಾಂತಕುಮಾರ್‌ ಬಂಧನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sexual harrasment
ಸುಳ್ಳು ಲೈಂಗಿಕ ಕಿರುಕುಳ ಕೇಸ್‌! ವಿದ್ಯಾರ್ಥಿನಿ, ಪಾದ್ರಿ ಸೇರಿ ನಾಲ್ವರ ಬಂಧನ
ಕೋಲಾರ: ನಗರದ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ನಕಲಿ ವಿದ್ಯಾರ್ಥಿನಿಯರಿಂದ ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಮೆಥೋಡಿಸ್ವ್‌ ಚರ್ಚ್ ಪಾದ್ರಿ ರೆವರೆಂಡ್‌ ಶಾಂತಕುಮಾರ್‌ ಸೇರಿ ನಾಲ್ವರನ್ನು ಬಂಧಿಸಿದ್ದು, ಆರೋಪಿಗಳು ಜಾಮೀನು ಪಡೆದಿದ್ದಾರೆ.
ಕೋಲಾರ ಮಹಿಳಾ ಠಾಣೆಯಲ್ಲಿ ಆಗಸ್ವ್‌ 30 ರಂದು ಇಬ್ಬರು ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ನೂರು ವರ್ಷಗಳ ಇತಿಹಾಸ ಹೊಂದಿರುವ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್‌ ಕುಂದರ್‌ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಸುಳ್ಳು ದೂರು ನೀಡಲಾಗಿತ್ತು. ಜತೆಗೆ ನ್ಯಾಯಾಧೀಶರ ಎದುರು ನಕಲಿ ವಿದ್ಯಾರ್ಥಿನಿಯರಿಂದ ಹೇಳಿಕೆ ದಾಖಲು ಸಹ ಮಾಡಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ಪ್ರಯತ್ನ ವಿಫಲ: ಮಹಿಳೆಯನ್ನು ರೈಲಿನಿಂದ ತಳ್ಳಿ ಕೊಂದ ಕಿರಾತಕ
ಈ ಸಂಬಂಧ ಲೆಕ್ಕಾಧಿಕಾರಿ ಜಾನ್ಸನ್‌ ಕುಂದರ್‌ ಪತ್ನಿ ಸವಿತಾ ಜಾನ್‌ ಎಸ್ಪಿ ದೇವರಾಜ್‌ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಸುಳ್ಳು ದೂರು ನೀಡಿರುವುದು ಸಾಬೀತಾಗಿದೆ.

ಆ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್‌ ಹಾಗೂ ಮಂಜು, ಹಾಸ್ಟೆಲ್‌ ವಾರ್ಡನ್‌ ಶೀಲಾ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ ಮೆಥೋಡಿಸ್ವ್‌ ಚರ್ಚ್ ಪಾದ್ರಿ ರೆವರೆಂಡ್‌ ಶಾಂತಕುಮಾರ್‌ ಅವರನ್ನು ಕೋಲಾರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅದರಂತೆ ಬಂಧಿತರು ಜಾಮೀನು ಪಡೆದು ಹೊರಬಂದಿದ್ದಾರೆ.


ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಆರೋಪ ಮಾಡಿದ ಮಕ್ಕಳಿಗೆ ಸಾಂತ್ವನದ ಸೌಲಭ್ಯ ಅಗತ್ಯ

ಇತ್ತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಕ್ಕಳನ್ನು ಕಲ್ಯಾಣ ಸಮಿತಿಯವರು ಚನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಇದು ಅಕ್ಷಮ್ಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಮುಖಂಡರು ಖಂಡಿಸಿದ್ದಾರೆ.

ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಮೇಲಿನ ಲೈಂಗಿಕ ಕಿರುಕುಳದ ಆರೋಪ ತನಿಖೆ ಹಂತದಲ್ಲಿದೆ. ಮಕ್ಕಳನ್ನು ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಆದರೆ, ಇತ್ತೀಚೆಗೆ ಕೇಳಿ ಬರುತ್ತಿರುವ ಸಂಗತಿಗಳು ಕಳವಳಕಾರಿಯಾಗಿದೆ. ಆ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಮತ್ತು ಅವರಿಗೆ ಅಗತ್ಯವಿರುವ ಕೌನ್ಸೆಲಿಂಗ್‌ ಮುಂತಾದ ಸಾಂತ್ವನದ ಸೌಲಭ್ಯಗಳನ್ನು ಒದಗಿಸಿ ಅವರಿಗೆ ಭರವಸೆ ಮೂಡಿಸುವ ರೀತಿಯ ವಾತಾವರಣ ಒದಗಿಸುವುದು ಮಕ್ಕಳ ಕಲ್ಯಾಣ ಸಮಿತಿಯ ಕರ್ತವ್ಯ ಎಂದು ತಿಳಿಸಿದ್ದಾರೆ.


ಮಕ್ಕಳ ಪರ ವಕೀಲರಿಗೂ ಮಕ್ಕಳನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಮಕ್ಕಳು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ನಿಮ್ಯಾನ್ಸ್‌ಗೆ ಕಳಿಸಲಾಗುವುದು ಎಂದು ಹೇಳಲಾಗುತ್ತಿರುವುದು ತುಂಬಾ ಆಘಾತಕಾರಿ ಸಂಗತಿ ಎಂದು ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಜಿಲ್ಲಾ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ