ಕೋಲಾರ: ತೋಟಗಾರಿಕಾ ಬೆಳೆಗೆ ಜೈವಿಕ ಗೊಬ್ಬರ ಮಿಶ್ರಣ(ಎಎಂಸಿ)ಬಳಸಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭ ಗಳಿಸಿ ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಹಾಗೂ ಹಿರಿಯ ವಿಜ್ಞಾನಿ ಡಾ.ನಾಗರಾಜ್ ರೈತರಿಗೆ ಕರೆ ನೀಡಿದರು.
ತಾಲೂಕಿನ ರಘುಪತಿ ಹೊಸಹಳ್ಳಿಯ ಪ್ರಗತಿಪರ ರೈತ ಬಿ.ಮುನಿಯಪ್ಪ ಅವರ ತೋಟದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2019-20ನೇ ಸಾಲಿನ ಕ್ಷೇತ್ರ ಪಾಠಶಾಲೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾತ್ಯಕ್ಷಿಕೆ: ಬೆಳೆ ಕ್ಷೇತ್ರೋತ್ಸವದ ಉದ್ದೇಶ ರೈತರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ನಡೆಸಿ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ರೈತರ ಸಾಂಪ್ರದಾಯಿಕ ಪದ್ಧತಿ ಕೃಷಿಗಳಿಗೆ ಇರುವ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.
ತಾಲೂಕು ಕೃಷಿ ಪ್ರಶಸ್ತಿ ವಿಜೇತ ಗ್ರಾಮದ ಮುನಿಯಪ್ಪ ಅವರು ತಂತ್ರಜ್ಞಾನ ಬಳಸಿ ಬೆಳೆದಿರುವ ಟೊಮೇಟೊ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಇಂತಹ ಪದ್ಧತಿಗಳನ್ನು ಇತರೆ ರೈತರು ಅಳವಡಿಸಿಕೊಳ್ಳಲು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜೈವಿಕ ಗೊಬ್ಬರ ಬಳಸಿ: ರೈತರು ರೈವಿಕ ಗೊಬ್ಬರ ಮಿಶ್ರಣ ಬಳಸುವಂತೆ ಸಲಹೆ ನೀಡಿದ ಅವರು, ಬೆಳೆ ನಾಟಿ ಮಾಡಿದ 10 ದಿನದ ನಂತರ ಗಿಡದ ಬುಡದಲ್ಲಿ ಈ ಮಿಶ್ರಣ ಹಾಕುವುದರಿಂದ ಇದರಲ್ಲಿನ ಅಣುಜೀವಿಗಳು ಗಿಡಕ್ಕೆ ಉತ್ತಮ ಪೋಷಣೆ ಸಿಗುವಂತೆ ಮಾಡಿ ಹೆಚ್ಚಿನ ಇಳುವರಿ ಬರಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಇದೇ ರೀತಿ ಹಾಸನದ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ತರಕಾರಿ ವಿಶೇಷ ಎಂಬುದನ್ನು ಅಭಿವೃದ್ಧಿಪಡಿಸಿದ್ದು, ಇದು ಟೊಮೇಟೊ, ಕ್ಯಾಪ್ಸಿಕಂ, ಬದನೆ, ಮೆಣಸಿನಕಾಯಿ, ಆಲೂಗಡ್ಡೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಿದೆ ಎಂದರು.
ಇದನ್ನು ಆಲೂಗಡ್ಡೆಗೆಂದೇ ವಿಶೇಷವಾಗಿ ಸಿದ್ಧಪಡಿಸಿದ್ದು, ಗಡ್ಡೆಯ ಗುಣಮಟ್ಟ ವೃದ್ಧಿಗೆ ಇದು ಹೆಚ್ಚು ಸಹಕಾರಿ. ಇದರಲ್ಲಿ ಸಸ್ಯಕ್ಕೆ ಅಗತ್ಯವಾದ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಮ್ಯಾಂಗನೀಸ್ ಮತ್ತಿತರ ಅಂಶಗಳು ಇರುತ್ತವೆ ಎಂದು ಹೇಳಿದರು.
ಇದನ್ನು ನಾಟಿ ಮಾಡಿದ 45 ದಿನಗಳ ನಂತರ ಗಿಡಮೇಲೆ ಸಿಂಪಡಿಸಿದರೆ ಕಾಯಿಗಳ ಗಾತ್ರ ಹೆಚ್ಚಳವಾಗುತ್ತದೆ ಮತ್ತು ಅತಿ ಮುಖ್ಯವಾಗಿ ತೋಟಗಾರಿಕಾ ಬೆಳೆಗಳಿಗೆ ಬರುವ ಜಾಂಡೀಸ್ ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ವಿವರಿಸಿದರು.
ತಾಲೂಕು ಉತ್ತಮ ರೈತ ಪ್ರಶಸ್ತಿ ವಿಜೇತ ರೈತ ಬಿ.ಮುನಿಯಪ್ಪ ತಮ್ಮ ತೋಟದಲ್ಲಿ ತಾಂತ್ರಿಕತೆ ಬಳಸಿ ಟೊಮೇಟೊ ಬೆಳೆದಿರುವ ಕುರಿತು ಮತ್ತು ಕೈಗೊಂಡ ಕ್ರಮಗಳ ಕುರಿತು ಭಾಗವಹಿಸಿದ್ದ ರೈತರಿಗೆ ವಿವರಿಸಿದರು.
ಈ ರೈತರ ಕ್ಷೇತ್ರಪಾಠ ಶಾಲೆಗೆ 30ಕ್ಕೂ ಹೆಚ್ಚು ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಿಜ್ಞಾನಿಗಲಾದ ಡಾ.ಅಂಬಿಕಾ, ಆತ್ಮ ಸಲಹಾ ಸಮಿತಿ ಸದಸ್ಯ ಸೀತಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಂ.ಎನ್.ನರಸಿಂಹ, ಗ್ರಾಮದ ರೈತರಾದ ಆನಂದ್, ಮುನಿಯಪ್ಪ, ರವಿ, ಸೀನಪ್ಪ, ಮೇಡಿಹಾಳ ಮುನಿರೆಡ್ಡಿ, ನಾಗರಾಜ್ ಮತ್ತಿತರರು ಹಾಜರಿದ್ದರು.
ತಾಲೂಕಿನ ರಘುಪತಿ ಹೊಸಹಳ್ಳಿಯ ಪ್ರಗತಿಪರ ರೈತ ಬಿ.ಮುನಿಯಪ್ಪ ಅವರ ತೋಟದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2019-20ನೇ ಸಾಲಿನ ಕ್ಷೇತ್ರ ಪಾಠಶಾಲೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾತ್ಯಕ್ಷಿಕೆ: ಬೆಳೆ ಕ್ಷೇತ್ರೋತ್ಸವದ ಉದ್ದೇಶ ರೈತರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ನಡೆಸಿ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ರೈತರ ಸಾಂಪ್ರದಾಯಿಕ ಪದ್ಧತಿ ಕೃಷಿಗಳಿಗೆ ಇರುವ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.
ತಾಲೂಕು ಕೃಷಿ ಪ್ರಶಸ್ತಿ ವಿಜೇತ ಗ್ರಾಮದ ಮುನಿಯಪ್ಪ ಅವರು ತಂತ್ರಜ್ಞಾನ ಬಳಸಿ ಬೆಳೆದಿರುವ ಟೊಮೇಟೊ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಇಂತಹ ಪದ್ಧತಿಗಳನ್ನು ಇತರೆ ರೈತರು ಅಳವಡಿಸಿಕೊಳ್ಳಲು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜೈವಿಕ ಗೊಬ್ಬರ ಬಳಸಿ: ರೈತರು ರೈವಿಕ ಗೊಬ್ಬರ ಮಿಶ್ರಣ ಬಳಸುವಂತೆ ಸಲಹೆ ನೀಡಿದ ಅವರು, ಬೆಳೆ ನಾಟಿ ಮಾಡಿದ 10 ದಿನದ ನಂತರ ಗಿಡದ ಬುಡದಲ್ಲಿ ಈ ಮಿಶ್ರಣ ಹಾಕುವುದರಿಂದ ಇದರಲ್ಲಿನ ಅಣುಜೀವಿಗಳು ಗಿಡಕ್ಕೆ ಉತ್ತಮ ಪೋಷಣೆ ಸಿಗುವಂತೆ ಮಾಡಿ ಹೆಚ್ಚಿನ ಇಳುವರಿ ಬರಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಇದೇ ರೀತಿ ಹಾಸನದ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ತರಕಾರಿ ವಿಶೇಷ ಎಂಬುದನ್ನು ಅಭಿವೃದ್ಧಿಪಡಿಸಿದ್ದು, ಇದು ಟೊಮೇಟೊ, ಕ್ಯಾಪ್ಸಿಕಂ, ಬದನೆ, ಮೆಣಸಿನಕಾಯಿ, ಆಲೂಗಡ್ಡೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಿದೆ ಎಂದರು.
ಇದನ್ನು ಆಲೂಗಡ್ಡೆಗೆಂದೇ ವಿಶೇಷವಾಗಿ ಸಿದ್ಧಪಡಿಸಿದ್ದು, ಗಡ್ಡೆಯ ಗುಣಮಟ್ಟ ವೃದ್ಧಿಗೆ ಇದು ಹೆಚ್ಚು ಸಹಕಾರಿ. ಇದರಲ್ಲಿ ಸಸ್ಯಕ್ಕೆ ಅಗತ್ಯವಾದ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಮ್ಯಾಂಗನೀಸ್ ಮತ್ತಿತರ ಅಂಶಗಳು ಇರುತ್ತವೆ ಎಂದು ಹೇಳಿದರು.
ಇದನ್ನು ನಾಟಿ ಮಾಡಿದ 45 ದಿನಗಳ ನಂತರ ಗಿಡಮೇಲೆ ಸಿಂಪಡಿಸಿದರೆ ಕಾಯಿಗಳ ಗಾತ್ರ ಹೆಚ್ಚಳವಾಗುತ್ತದೆ ಮತ್ತು ಅತಿ ಮುಖ್ಯವಾಗಿ ತೋಟಗಾರಿಕಾ ಬೆಳೆಗಳಿಗೆ ಬರುವ ಜಾಂಡೀಸ್ ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ವಿವರಿಸಿದರು.
ತಾಲೂಕು ಉತ್ತಮ ರೈತ ಪ್ರಶಸ್ತಿ ವಿಜೇತ ರೈತ ಬಿ.ಮುನಿಯಪ್ಪ ತಮ್ಮ ತೋಟದಲ್ಲಿ ತಾಂತ್ರಿಕತೆ ಬಳಸಿ ಟೊಮೇಟೊ ಬೆಳೆದಿರುವ ಕುರಿತು ಮತ್ತು ಕೈಗೊಂಡ ಕ್ರಮಗಳ ಕುರಿತು ಭಾಗವಹಿಸಿದ್ದ ರೈತರಿಗೆ ವಿವರಿಸಿದರು.
ಈ ರೈತರ ಕ್ಷೇತ್ರಪಾಠ ಶಾಲೆಗೆ 30ಕ್ಕೂ ಹೆಚ್ಚು ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಿಜ್ಞಾನಿಗಲಾದ ಡಾ.ಅಂಬಿಕಾ, ಆತ್ಮ ಸಲಹಾ ಸಮಿತಿ ಸದಸ್ಯ ಸೀತಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಂ.ಎನ್.ನರಸಿಂಹ, ಗ್ರಾಮದ ರೈತರಾದ ಆನಂದ್, ಮುನಿಯಪ್ಪ, ರವಿ, ಸೀನಪ್ಪ, ಮೇಡಿಹಾಳ ಮುನಿರೆಡ್ಡಿ, ನಾಗರಾಜ್ ಮತ್ತಿತರರು ಹಾಜರಿದ್ದರು.