ಆ್ಯಪ್ನಗರ

ಮುಳಬಾಗಲು: ಆಂಜನೇಯ ದೇವಸ್ಥಾನದಲ್ಲಿ ವೈಕುಂಠ ದ್ವಾದಶಿ, ಪರಿಶೀಲಿಸಿ ಪ್ರಸಾದ ವಿತರಣೆ

ಮುಳಬಾಗಿಲು ಆಂಜನೇಯ ದೇವಸ್ಥಾನದಲ್ಲಿ ವೈಕುಂಠ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ನಡೆಯಿತು.

Vijaya Karnataka 20 Dec 2018, 10:14 am
ಮುಳಬಾಗಲು: ನಗರದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
Vijaya Karnataka Web featured worship vykunta diwashi is celebrated in the citys famous mythology of the azamayeswamy temple
ಮುಳಬಾಗಲು: ಆಂಜನೇಯ ದೇವಸ್ಥಾನದಲ್ಲಿ ವೈಕುಂಠ ದ್ವಾದಶಿ, ಪರಿಶೀಲಿಸಿ ಪ್ರಸಾದ ವಿತರಣೆ

ಸಾವಿರಾರು ಭಕ್ತರು ಸರತಿಯಲ್ಲಿ ತೆರಳಿ ವೈಕುಂಠ ದ್ವಾರದ ಮಾರ್ಗದಲ್ಲಿ ಹೋಗಿ ಗೋವಿಂದ ರಾಜಸ್ವಾಮಿ ಚಿತ್ರ ಪಟ ದರ್ಶನ ಮಾಡಿದ ನಂತರ ವರದರಾಜ ಸ್ವಾಮಿ, ಆಂಜನೇಯಸ್ವಾಮಿ ಹಾಗೂ ವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಪಡೆದರು.

ದೇವಾಲಯದ ಮುಂಭಾಗ ಹಾಗೂ ಆವರಣದಲ್ಲಿ ಸಮಾಜ ಸೇವಕ ಆರ್‌.ಎಸ್‌ ಸುಹಾಸ್‌ ಶೆಟ್ಟಿ ಹಾಗೂ ನಗರ ಸಭಾ ಸದಸ್ಯ ಜಗನ್‌ ಮೋಹನ್‌ರೆಡ್ಡಿ ಅವರ ಕೊಡುಗೆಯೊಂದಿಗೆ ಪುಷ್ಪಾಲಂಕಾರ ನೆರವೇರಿಸಲಾಗಿತ್ತು. ಎಲ್ಲ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಆರ‍್ಯವೈಶ್ಯ ವಾಕಿಂಗ್‌ ಫ್ರೆಂಡ್ಸ್‌ ವತಿಯಿಂದ 5 ಸಾವಿರ ಲಡ್ಡುಗಳನ್ನು ವಿತರಿಸಲಾಯಿತು.

ಅಯ್ಯಪ್ಪ ಸೇವಾ ಸಂಘ ಹಾಗೂ ಬೀಡಾ ಬಾಬು ಅವರು ನಾನಾ ಪ್ರಸಾದ ಹಾಗೂ ನೀರಿನ ಪ್ಯಾಕೇಟ್‌ಗಳನ್ನು ವಿತರಿಸಿದರು. ಪ್ರಸಾದ ತಯಾರಿಸುವ ಮುನ್ನ ಹಾಗೂ ನಂತರ ತಾಲೂಕು ಆರೋಗ್ಯಾಧಿಕಾರಿ ಸೂಚನೆಯಂತೆ ಆರೋಗ್ಯ ನಿರೀಕ್ಷಕರು ಪರಿಶೀಲಿಸಿದರು. ನಗರ ಸಭೆ ವತಿಯಿಂದ ನೀರಿನ ಸೌಲಭ್ಯ ಹಾಗೂ ಸ್ವಚ್ಛ ಮಾಡಲಾಗಿತ್ತು. ಸ್ಥಳೀಯ ಕಲಾವಿದರಿಂದ ವಿಶೇಷ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾಗ್ರತೆ ಕ್ರಮವಾಗಿ ವಿಶೇಷ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಎಂ.ಜಿ ರಾಮಕುಮಾರ್‌ ನೇತೃತ್ವದಲ್ಲಿ ಸಂಪ್ರಾಯದಂತೆ ಪೂಜಾ ಕಾರ್ಯಕ್ರಮಗಳು ನಡೆದವು.

ತಹಸೀಲ್ದಾರ್‌ ಬಿ.ಎನ್‌ ಪ್ರವೀಣ್‌, ನಗರ ಸಭಾ ಅಧ್ಯಕ್ಷ ಎಂ.ಆರ್‌ ಮುರಳಿ, ಕಂದಾಯ ಇಲಾಖೆಯ ಕೆ.ಎನ್‌ ಅರವಿಂದ ಗೌಡ, ವ್ಯವಸ್ಥಾಪಕ ಚಲುವಸ್ವಾಮಿ ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ