ಆ್ಯಪ್ನಗರ

ಬೆಂಕಿ ತಗುಲಿ ವೃದ್ಧೆ ಸಾವು

ಅಕಸ್ಮಿಕ ಬೆಂಕಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಅಂಡ್ರಸನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 19 Jul 2019, 3:19 pm
ಕೆಜಿಎಫ್‌: ಅಕಸ್ಮಿಕ ಬೆಂಕಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಅಂಡ್ರಸನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web fire accident women dies
ಬೆಂಕಿ ತಗುಲಿ ವೃದ್ಧೆ ಸಾವು


ಅಂಡ್ರಸನ್‌ಪೇಟೆಯ 2ನೇ ಬ್ಲಾಕ್‌ನ ನಿವಾಸಿಯಾದ ಕುಪ್ಪಮ್ಮ (75) ಮೃತಪಟ್ಟಿರುವ ದುರ್ದೈವಿ. ಮನೆಯಲ್ಲಿ ಸೌದೆ ಒಲೆಗೆ ಸೀಮೆ ಎಣ್ಣೆ ಎರಚುವ ಸಂದರ್ಭದಲ್ಲಿ ಕುಪ್ಪಮ್ಮಗೆæ ಬೆಂಕಿ ತಗುಲಿದಾಗ ಸುಟ್ಟ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ

ಜೂಜು ಅಡ್ಡೆ ಮೇಲೆ ದಾಳಿ: ಬೇತಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 2.290 ಹಣವನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಅರೋಪಿಗಳಾದ ಬೇತಮಂಗಲ ನಿವಾಸಿಗಳಾದ ಗೋವಿಂದಸ್ವಾಮಿ, ವೆಂಕಟಾಚಲಪತಿ, ವೆಂಕಟೇಶಪ್ಪ, ಪೆದ್ದನ್ನ ಅವರು ಬೈಪ್ಲಿ ಕೆರೆಯ ದಂಡೆ ಮೇಲೆ ಅಂದರ್‌ ಬಾಹರ್‌ ಆಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಬೇತಮಂಗಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ