ಆ್ಯಪ್ನಗರ

ಉತ್ತರ ಬರೆಯುವ ಕಡೆ ಮನಸ್ಸು ಕೇಂದ್ರೀಕರಿಸಿ

ಪರೀಕ್ಷೆ ಬರೆಯುವಂತಹ ಸಮಯದಲ್ಲಿ ಯಾರಾದರೂ ನಿಮ್ಮ ಕೊಠಡಿಯೊಳಗೆ ಪ್ರವೇಶಿಸಿದಾಗ ಅವರ ಕಡೆ ಗಮನ ಕೊಡದೇ ನಿಮ್ಮ ಗಮನ ಪರೀಕ್ಷೆ ಬರೆಯುವುದರ ಕಡೆಗೆ ಕೇಂದ್ರೀಕೃತವಾಗಿರಬೇಕು,ಮೊದಲನೇ 15 ನಿಮಿಷ ಪ್ರಶ್ನೆಪತ್ರಿಕೆ ಅರ್ಥ ಮಾಡಿಕೊಳ್ಳುವುದರ ಕಡೆ ಗಮನಹರಿಸಬೇಕೆಂದು ಕೋಲಾರ ಜಿಲ್ಲಾ ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ಧೇಶಕರಾದ ಕೆ.ರತ್ನಯ್ಯ ಹೇಳಿದರು.

Vijaya Karnataka 16 Mar 2019, 5:00 am
ಬಂಗಾರಪೇಟೆ : ಪರೀಕ್ಷೆ ಬರೆಯುವಂತಹ ಸಮಯದಲ್ಲಿ ಯಾರಾದರೂ ನಿಮ್ಮ ಕೊಠಡಿಯೊಳಗೆ ಪ್ರವೇಶಿಸಿದಾಗ ಅವರ ಕಡೆ ಗಮನ ಕೊಡದೇ ನಿಮ್ಮ ಗಮನ ಪರೀಕ್ಷೆ ಬರೆಯುವುದರ ಕಡೆಗೆ ಕೇಂದ್ರೀಕೃತವಾಗಿರಬೇಕು,ಮೊದಲನೇ 15 ನಿಮಿಷ ಪ್ರಶ್ನೆಪತ್ರಿಕೆ ಅರ್ಥ ಮಾಡಿಕೊಳ್ಳುವುದರ ಕಡೆ ಗಮನಹರಿಸಬೇಕೆಂದು ಕೋಲಾರ ಜಿಲ್ಲಾ ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ಧೇಶಕರಾದ ಕೆ.ರತ್ನಯ್ಯ ಹೇಳಿದರು.
Vijaya Karnataka Web focus on writing the answer
ಉತ್ತರ ಬರೆಯುವ ಕಡೆ ಮನಸ್ಸು ಕೇಂದ್ರೀಕರಿಸಿ


ತಾಲೂಕಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಓದಿರುವ ಎಲ್ಲಾ ಉತ್ತರಗಳನ್ನು ಮರೆತು ಹೋಗುವುದು ಸರ್ವೆ ಸಾಮಾನ್ಯವಾಗಿದೆ. ಇಂತಹ ಕ್ಲಿಷ್ಟಕರವಾದ ಸನ್ನಿವೇಶದಿಂದ ಹೊರಗೆ ಬರಬೇಕಾದರೆ ಇಂತಹ ಕಾರ್ಯಾಗಾರಗಳ ಅವಶ್ಯಕತೆ ಇದೆ ಎಂದರು.

ಶಿಕ್ಷ ಣ ಅಧಿಕಾರಿ ನಾಗೇಂದ್ರಪ್ರಸಾದ್‌ ಮಾತನಾಡಿ, ಪ್ರಶ್ನೆಪತ್ರಿಕೆ ನಿಮ್ಮನ್ನು ತಲುಪಿದ ಕೂಡಲೇ ಮೊದಲನೇ 15 ನಿಮಿಷ ಎಲ್ಲವನ್ನೂ ಗಮನವಿಟ್ಟು ಓದಿ ಅರ್ಥೈಸಿಕೊಳ್ಳಬೇಕು, ಉತ್ತರ ಗೊತ್ತಿರುವ ಎಲ್ಲಾ ಪ್ರಶ್ನೆಗಳನ್ನು ಗುರುತು ಮಾಡಿಕೊಳ್ಳಿ, ಕೆಲವೊಮ್ಮೆ ಸಮಯದ ಅಭಾವ ಏರ್ಪಟ್ಟಿರುತ್ತದೆ. ಹಾಗಾಗಿ ಎಲ್ಲರೂ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರವನ್ನು ಬರೆಯಿರಿ. ಮೌಲ್ಯಮಾಪನ ಮಾಡುವವರನ್ನು ಉತ್ತೇಜಿಸುವ ಸಲುವಾಗಿ ನಿಮ್ಮ ಬರವಣಿಗೆ ಅಚ್ಚುಕಟ್ಟಾಗಿ ಮತ್ತು ನಾಜೂಕಾಗಿರಲಿ. ಹಾಲ್‌ ಟಿಕೇಟ್‌ನಲ್ಲಿರುವಂತೆ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಪ್ರತಿದಿನ ಮುಂಜಾನೆ ಎದ್ದು ಧ್ಯಾನ ಮಾಡುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕಾಗಿ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿಕೊಟ್ಟರು.

ಉತ್ತರ ಬರೆಯುವ ವಿಧಾನ: ಪುನಶ್ಚೇತನ ಕಾರ್ಯಗಾರಕ್ಕೆ ಮುಖ್ಯ ವಿಷಯಕಾರರನ್ನಾಗಿ ಬೆಂಗಳೂರಿನಿಂದ ಬಂದಿದ್ದ ನಿವೃತ್ತ ಶಿಕ್ಷ ಕ ಪ್ರಸನ್ನ ಮೂರ್ತಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷೆಯ ರೂಪರೇಷೆಗಳನ್ನು ತಿಳಿಸಿಕೊಟ್ಟರು. ಪ್ರತಿಯೊಂದು ವಿಷಯದಲ್ಲೂ ಬರುವ ಕಠಿಣ ಮತ್ತು ಸಡಿಲ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಮಾಡಬೇಕು, ಗಣಿತದ ವಿಷಯದಲ್ಲಿ ಗ್ರಾಪ್‌ಶೀಟ್‌ ಅಳವಡಿಕೆ, ಪತ್ರಲೇಖನ ಬರೆಯುವುದು, ಲೆಕ್ಕಗಳನ್ನು ಬಿಡಿಸುವ ಸುಲಭ ವಿದಾನಗಳು ಮುಂತಾದ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.

ಈ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ.ಪಿ.ಕೆಂಪಯ್ಯ, ಇಸಿಒಗಳಾದ ವಾಜೀದ್‌, ವೆಂಕಟರಮಣಪ್ಪ, ಕಾರ್ಯಪ್ಪ ಶಾಲೆಯ ಡಾ ಎಂ.ಚಂದ್ರಶೇಖರ್‌, ಮುಖ್ಯ ಶಿಕ್ಷ ಕ ಲಕ್ಷ್ಮಿನಾರಾಯಣರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ನಾನಾ ಶಾಲೆಯ ವಿಷಯ ಶಿಕ್ಷ ಕರು ಮತ್ತು ತಾಲೂಕಿನ ನಾನಾ ಗ್ರಾಮಾಂತರ ಶಾಲೆಗಳಿಂದ ಸುಮಾರು 250ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಾಗಾರದ ಅನುಕೂಲತೆಯನ್ನು ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ