ಆ್ಯಪ್ನಗರ

ಗಡಿಭಾಗದಲ್ಲಿ ಕನ್ನಡ ಪ್ರಗತಿಗೆ ಆದ್ಯತೆ ನೀಡಿ

ಕನ್ನಡ ಶ್ರೀಮಂತ ಭಾಷೆ. ಕನ್ನಡ ನುಡಿ ಹಬ್ಬಕ್ಕೆ ಜಾತಿ ಮತ ವರ್ಗದ ಭೇದವಿಲ್ಲ. ಗಡಿಭಾಗದಲ್ಲಿ ಕನ್ನಡದ ಪ್ರಗತಿಗೆ ಆದ್ಯತೆ ನೀಡಿ. ತೆಲುಗು ದೇಹವಾದರೆ, ಕನ್ನಡ ಹೃದಯ ಭಾಷೆಯಾಗಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಜಿ.ಎನ್‌.ಕುಬೇರಗೌಡ ಹೇಳಿದರು.

Vijaya Karnataka 30 Jun 2019, 3:37 pm
ಶ್ರೀನಿವಾಸಪುರ: ಕನ್ನಡ ಶ್ರೀಮಂತ ಭಾಷೆ. ಕನ್ನಡ ನುಡಿ ಹಬ್ಬಕ್ಕೆ ಜಾತಿ ಮತ ವರ್ಗದ ಭೇದವಿಲ್ಲ. ಗಡಿಭಾಗದಲ್ಲಿ ಕನ್ನಡದ ಪ್ರಗತಿಗೆ ಆದ್ಯತೆ ನೀಡಿ. ತೆಲುಗು ದೇಹವಾದರೆ, ಕನ್ನಡ ಹೃದಯ ಭಾಷೆಯಾಗಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಜಿ.ಎನ್‌.ಕುಬೇರಗೌಡ ಹೇಳಿದರು.
Vijaya Karnataka Web give preference to kannada development in border area
ಗಡಿಭಾಗದಲ್ಲಿ ಕನ್ನಡ ಪ್ರಗತಿಗೆ ಆದ್ಯತೆ ನೀಡಿ


ಗೌನಿಪಲ್ಲಿ ಸಪ್ತಗಿರಿ ವಿದ್ಯಾ ಸಂಸ್ಥೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರ ಧ್ವಜಾರೋಹಣ, ಪರಿಷತ್‌ ಧ್ವಜಾರೋಹಣ, ನಾಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪರಿಷತ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಾತೃಭಾಷೆ ವ್ಯಾಮೋಹ: ನಮ್ಮ ಕನ್ನಡ ಭಾಷೆ ಯಾವ ಭಾಷೆಗಿಂತಲೂ ಕಡಿಮೆಯಿಲ್ಲ. ಕನ್ನಡ ಕಸ್ತೂರಿ. ಪ್ರತಿ ವ್ಯಕ್ತಿಗೆ ಮಾತೃ ವಾತ್ಸಲ್ಯ ನೀಡುವ ಸಂಸ್ಕೃತಿ. ಗಡಿಭಾಗದ ವಿದ್ಯಾರ್ಥಿಗಳು ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಎಲ್ಲಾ ಕಡೆ ತನು ಮನ ಕನ್ನಡ ಎನ್ನಬೇಕು. ಗಡಿಭಾಗದಲ್ಲಿ ಆಡುಭಾಷೆ ತೆಲುಗು ಬಿಟ್ಟು ಮಾತೃಭಾಷೆ ವ್ಯಾಮೋಹ ಬೆಳೆಸಿಕೊಳ್ಳಿ. ಜನರಿಗೆ ಕನ್ನಡವೆ ಜೀವನÜದ ಬದುಕು ಎನ್ನುವ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಭಾಷಾಬಿಮಾನ ಬೆಳೆಸಿಕೊಂಡು ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದರು.

ತಹಸೀಲ್ದಾರ್‌ ಬಿ.ಎಸ್‌.ರಾಜೀವ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಂದು ಹಂತದಲ್ಲಿ ನಮ್ಮಲ್ಲಿ ಮಾತೃ ವಾತ್ಸಲ್ಯ, ಕನ್ನಡದ ಕಿಚ್ಚು ಮೂಡಿಸುವ ಧರ್ಮದ ಪರಂಪರೆಯನ್ನು ನಿರಂತರ ನಮಗೆ ದಾರಿ ತೋರುವ ದಿಕ್ಸೂಚಿ ಎನ್ನುವುದು ನಾವು ಯಾವಾಗಲೂ ಮರೆಯಬಾರದೆಂದು ತಿಳಿಸಿದರು.

ಕನ್ನಡದಲ್ಲೇ ವ್ಯವಹರಿಸಿ: ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ್‌ ಕೆಂಪರಾಜ್‌ ಸಮೇಳನಾಧ್ಯಕ್ಷ ರ, ಸಾಂಸ್ಕೃತಿಕ, ಜಾನಪದ ಕಲಾ ಮೆರವಣಿಗೆಗೆ ಬಸ್‌ ನಿಲ್ದಾಣ ರಸ್ತೆಯಲ್ಲಿ ಚಾಲನೆ ನೀಡಿ ಮಾತನಾಡಿ, ಭಾಷೆ ಬೆಳವಣಿಗೆಗೆ ವಿದ್ಯಾರ್ಥಿಗಳು ಸಮಾಜದೊಂದಿಗೆ ಸಂಘಟನಾತ್ಮಕವಾಗಿ ಶ್ರಮಿಸಬೇಕು. ನಿತ್ಯ ನಿರಂತರ ಕನ್ನಡ ಮಾತನಾಡಿದಾಗ ಭಾಷೆ ಬೆಳವಣಿಗೆಯಾಗುತ್ತದೆ. ಸಮ್ಮೇಳನಗಳ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಮನೆಯಲ್ಲಿ ತೆಲುಗು ಮಾತಾಡುವ ಕನ್ನಡ ಮನಸ್ಸುಗಳು ಪ್ರತಿ ದಿನ ನಾವು ವ್ಯವಹರಿಸುವ ಸ್ಥಳಗಳಲ್ಲಿ ಕನ್ನಡದಲ್ಲೇ ವ್ಯವಹರಿಸಿ ಕನ್ನಡತನ ಮೆರೆಯಬೇಕೆಂದರು.

ನಾಡು ನುಡಿ ಅಲ್ಲದೆ, ಇನ್ನು ಮುಂದೆ ಪ್ರತಿಯೊಬ್ಬರೂ ಜಲದ ಹೋರಾಟ ಮಾಡುವ ಮೂಲ ಜೀವ ಜಲಕ್ಕೂ ಆದ್ಯತೆ ಕೊಡಬೇಕು. ಮುಂದಿನ ಆಗಸ್ಟ್‌ ತಿಂಗಳಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಯೋಜನೆ ರೂಪಿಸಲಾಗಿದೆ. ಗೌನಿಪಲ್ಲಿಯಲ್ಲಿ ಸಮ್ಮೇಳನ ಮಾಡಲು ಕೆಲವು ಸಂಘ ಸಂಸ್ಥೆಗಳ ಮುಖಂಡರು ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಕನ್ನಡ ಪರಕೆಲಸ ಮಾಡುವಾಗ ಇಂತಹ ಕ್ಷ ುಲ್ಲಕ ಯಾರಿಗೂ ತರವಲ್ಲವೆಂದು ಕುಟುಕಿದರು.

ಮೆರವಣಿಗೆ: ಕಾಲೇಜು ಆವರಣದಿಂದ ಬಸ್‌ ನಿಲ್ದಾಣ ರಸ್ತೆ ಮೂಲಕ ಸಮ್ಮೇಳನ ಸರ್ವಾಧ್ಯಕ್ಷ , ಶಿಕ್ಷ ಣ ತಜ್ಞರಾದ ಎಂ.ಶ್ರೀರಾಮರೆಡ್ಡಿ ಮತ್ತು ತಾಯಿ ಭುವನೇಶ್ವರಿ ಮೆರವಣಿಗೆಗೆ ಹೆಣ್ಣು ಮಕ್ಕಳು ಕನ್ನಡಾಂಬೆ ಧ್ವಜದ ಸಮವಸ್ತ್ರದಲ್ಲಿ ಬಾವುಟ ಹಿಡಿದು ಪಟ್ಟಣದ ಮುಖ್ಯ ರಥ ಬೀದಿಗಳಲ್ಲಿ ಬಸ್‌ ನಿಲ್ದಾಣ ಮಾರ್ಗವಾಗಿ ಪಂಚಾಯಿತಿ ಕೇಂದ್ರ ಪಕ್ಕದಲ್ಲೇ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಸೇರಿ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬ್ಯಾಂಡ್‌ ಸೆಟ್‌, ವಾದ್ಯಗೋಷ್ಠಿಗಳೊಂದಿಗೆ ಕಾಲ್ನಡಿಗೆಯಲ್ಲಿ ಸಮ್ಮೇಳನಾಧ್ಯಕ್ಷ ರ ಮೆರವಣಿಗೆ ಮೂಲಕ ಸಪ್ತಗಿರಿ ಶಿಕ್ಷ ಣ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನ ವೇದಿಕೆಗೆ ಸಮ್ಮೇಳನಾಧ್ಯಕ್ಷ ರನ್ನು ಕರೆ ತರಲಾಯಿತು.

ಬಿಇಒ ಬಿ.ರೇಣುಕಮ್ಮ, ತಾಪಂ ಸದಸ್ಯ ನರಸಿಂಹಯ್ಯ, ಹಿರಿಯ ಸಾಹಿತಿ ಆರ್‌.ಚೌಡರೆಡ್ಡಿ, ಪಿಕೆಜಿ ಬ್ಯಾಂಕ್‌ ವ್ಯವಸ್ಥಾಪಕ ವೆಂ.ರವಿಕುಮಾರ್‌, ನಿಕಟಪೂರ್ವ ಅಧ್ಯಕ್ಷ ಬೈರಪ್ಪ, ಸಂಪನ್ಮೂಲ ವ್ಯಕ್ತಿ ಎ.ವೆಂಕಟರೆಡ್ಡಿ, ಬೈರವೇಶ್ವರ ಪ್ರಿನ್ಸಿಪಾಲ್‌ ಮುನಿರೆಡ್ಡಿ, ಸಪಪೂ ಕಾಲೇಜು ಪ್ರಿನ್ಸಿಪಾಲ್‌ ಸೇವಾ ನಾಯಕ್‌, ವೈಸ್‌ ಪ್ರಿನ್ಸಿಪಾಲ್‌ ಜಿ.ಎಂ.ಮಂಜುನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ