ಆ್ಯಪ್ನಗರ

1 ಲಕ್ಷ ದವರೆಗೆ ಶೂನ್ಯಬಡ್ಡಿ ಸಾಲ: ಸರಕಾರ ಸಮ್ಮತಿ

ಮಹಿಳಾ ಸಂಘಗಳ ಮೂಲಕ ತಲಾ 50 ಸಾವಿರದವರೆಗೂ ನೀಡುತ್ತಿರುವ ಶೂನ್ಯ ಬಡ್ಡಿ ಸಾಲದ ಪ್ರಮಾಣವನ್ನು ಒಂದು ಲಕ್ಷ ಕ್ಕೇರಿಸಲು ಸರಕಾರದ ಸಮ್ಮತಿ ಸಿಕ್ಕಿದ್ದು, ಸದ್ಬಳಸಿಕೊಳ್ಳುವ ಮೂಲಕ ಮಹಿಳೆಯರು ಬಡ್ಡಿ ಮಾಫಿಯಾದಿಂದ ಮುಕ್ತಿ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Vijaya Karnataka 15 Jan 2019, 5:00 am
ಕೋಲಾರ: ಮಹಿಳಾ ಸಂಘಗಳ ಮೂಲಕ ತಲಾ 50 ಸಾವಿರದವರೆಗೂ ನೀಡುತ್ತಿರುವ ಶೂನ್ಯ ಬಡ್ಡಿ ಸಾಲದ ಪ್ರಮಾಣವನ್ನು ಒಂದು ಲಕ್ಷ ಕ್ಕೇರಿಸಲು ಸರಕಾರದ ಸಮ್ಮತಿ ಸಿಕ್ಕಿದ್ದು, ಸದ್ಬಳಸಿಕೊಳ್ಳುವ ಮೂಲಕ ಮಹಿಳೆಯರು ಬಡ್ಡಿ ಮಾಫಿಯಾದಿಂದ ಮುಕ್ತಿ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
Vijaya Karnataka Web government nod for zero interest loan up to 1 lakh
1 ಲಕ್ಷ ದವರೆಗೆ ಶೂನ್ಯಬಡ್ಡಿ ಸಾಲ: ಸರಕಾರ ಸಮ್ಮತಿ


ತಾಲೂಕಿನ ಪೆಮ್ಮಶೆಟ್ಟಿಹಳ್ಳಿಯಲ್ಲಿ ಸೋಮವಾರ ನರಸಾಪುರ ಎಫ್‌ಸಿಎಸ್‌ ಆಶ್ರಯದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ 39 ಮಹಿಳಾ ಸಂಘಗಳಿಗೆ 3 ಕೋಟಿ ರೂ ಸಾಲ ವಿತರಿಸಿ ಮಾತನಾಡಿದರು.

ಮಹಿಳೆಯರಿಗೆ ನೀಡುತ್ತಿರುವ ಬಡ್ಡಿರಹಿತ ಸಾಲದ ಪ್ರಮಾಣವನ್ನು ತಲಾ ಒಂದು ಲಕ್ಷ ಕ್ಕೇರಿಸಲು ಸರಕಾರ ಒಪ್ಪಿದ್ದು, ಸಮರ್ಪಕ ಸಾಲ ಮರುಪಾವತಿ ಮೂಲಕ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ತಪ್ಪದೇ ವಾರದ ಸಭೆ ನಡೆಸಿ, ಉಳಿತಾಯದ ಹಣವನ್ನು ಸೊಸೈಟಿಗೆ ಪಾವತಿ ಮಾಡಿ, ಇದೇ ನಂಬಿಕೆ ಉಳಿಸಿಕೊಳ್ಳುವಂತೆ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ ನೀಡುವ 50 ಸಾವಿರ ಸಾಲಕ್ಕೆ ಬಡ್ಡಿ ಇಲ್ಲ, ನೀವು ಬಡ್ಡಿ ಮಾಫಿಯಾಗೆ ನೀಡಬೇಕಾದ ಬಡ್ಡಿಯ ಹಣ ಬ್ಯಾಂಕಿಗೆ ಕಟ್ಟಿದರೆ ಸಾಕು ಸಾಲ ತೀರುತ್ತದೆ ಎಂದರು.

ನಬಾರ್ಡ್‌ ಈಗ ಡಿಸಿಸಿ ಬ್ಯಾಂಕ್‌ ಮೂಲಕ ಕೋಳಿ ಸಾಕಣೆಗೆ 600 ಕೋಟಿ ರೂ ಸಾಲ ನೀಡಲು ಮುಂದೆ ಬಂದಿದೆ. ಶೇ.25ರಷ್ಟು ಸಹಾಯಧನ ರೈತರಿಗೆ ಸಿಗಲಿದೆ. 40 ಲಕ್ಷ ಸಾಲ ಪಡೆದರೆ 10 ಲಕ್ಷ ನಿಮ್ಮ ಖಾತೆಗೆ ಸಂದಾಯವಾಗುತ್ತದೆ ಎಂದರು.

ಬರಪೀಡಿತ ಜಿಲ್ಲೆಯ ನಿರುದ್ಯೋಗಿಗಳ ಬಾಳಿಗೆ ಇದು ಬೆಳಕಾಗಲಿದ್ದು, ಸಾಲ ಮರುಪಾವತಿಯಲ್ಲಿ ಉತ್ತಮ ಹೆಸರುಗಳಿಸಿರುವ ನರಸಾಪುರ ಸೊಸೈಟಿ ನಿರುದ್ಯೋಗಿಗಳನ್ನು ಗುರುತಿಸಿ ಸಾಲಕ್ಕೆ ಅರ್ಜಿ ಹಾಕಿದರೆ ಕೋಳಿ ಸಾಕಣೆಗೆ ಮಂಜೂರಾತಿ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಶ್ರೀನಿವಾಸಗೌಡ, ಮಹಿಳೆಯರಂತೆ ಪುರುಷರು ಸಾಲ ಮರುಪಾವತಿಯ ನಂಬಿಕೆ ಉಳಿಸಿಕೊಳ್ಳಬೇಕು. ಶೂನ್ಯ ಬಡ್ಡಿ ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್‌ ಪುರುಷರಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.

ನರಸಾಪುರ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಮುನಿರಾಜು, ನರಸಾಪುರ ಸೊಸೈಟಿ ವ್ಯಾಪ್ತಿಯಲ್ಲಿ ಮಾತ್ರವೇ ಸಾಲ ಮನ್ನಾ ಯೋಜನೆಗಳಿಂದ 4.75 ಕೋಟಿ ರೂ. ರೈತರಿಗೆ ಪ್ರಯೋಜನ ಸಿಕ್ಕಿದೆ. 564 ಜನಕ್ಕೆ 8 ಕೋಟಿ ಬೆಳೆ ಸಾಲ, 14 ಕೋಟಿ ರೂ. ಮಹಿಳೆಯರಿಗೆ ಸಾಲ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌, ಸೊಸೈಟಿ ಉಪಾಧ್ಯಕ್ಷ ವಾಸುದೇವ, ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್‌, ಕೆಇಬಿ ಚಂದ್ರು, ರತ್ನಮ್ಮ, ವೀರಯ್ಯ, ಮೋಹನ್‌, ಗ್ರಾಪಂ ಸದಸ್ಯರಾದ ಮುನಿರಾಜು, ಲೋಕೇಶ್‌, ಮುಖಂಡರಾದ ಬಾಬು, ಕಾಂತರಾಜ್‌, ರಮೇಶ್‌, ಶಂಕರಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ