ಆ್ಯಪ್ನಗರ

ಕರ್ತವ್ಯದಲ್ಲಿ ಶ್ರದ್ಧೆ ಇದ್ದರೆ ತೊಂದರೆ ಇಲ್ಲ

ಸರಕಾರಿ ನೌಕರರು ತಾಳ್ಮೆ, ಸ್ವಾಭಿಮಾನ ಮತ್ತು ಸದಾ ಎಚ್ಚರದಿಂದ ಕೆಲಸ ನಿರ್ವಹಿಸಿದರೆ ಮಾತ್ರ ಆರೋಗ್ಯವಂತರಾಗಿ ತಧಿಮ್ಮ ಸೇವೆಯನ್ನ ಯಾವುದೇ ಕಳಂಕವಿಲ್ಲದೆ ಪೂರೈಸಲು ಸಾಧ್ಯ ಎಂದು ಉಪ ತಹಸೀಲ್ದಾರ್‌ ರವಿಕುಮಾರ್‌ ಹೇಳಿದರು.

Vijaya Karnataka 20 Sep 2019, 3:28 pm
ಬಂಗಾರಪೇಟೆ: ಸರಕಾರಿ ನೌಕರರು ತಾಳ್ಮೆ, ಸ್ವಾಭಿಮಾನ ಮತ್ತು ಸದಾ ಎಚ್ಚರದಿಂದ ಕೆಲಸ ನಿರ್ವಹಿಸಿದರೆ ಮಾತ್ರ ಆರೋಗ್ಯವಂತರಾಗಿ ತಮ್ಮ ಸೇವೆಯನ್ನ ಯಾವುದೇ ಕಳಂಕವಿಲ್ಲದೆ ಪೂರೈಸಲು ಸಾಧ್ಯ ಎಂದು ಉಪ ತಹಸೀಲ್ದಾರ್‌ ರವಿಕುಮಾರ್‌ ಹೇಳಿದರು.
Vijaya Karnataka Web have faith in your work
ಕರ್ತವ್ಯದಲ್ಲಿ ಶ್ರದ್ಧೆ ಇದ್ದರೆ ತೊಂದರೆ ಇಲ್ಲ


ತಹಸೀಲ್ದಾರ್‌ ಕಚೇರಿಯಲ್ಲಿ ಬಡ್ತಿ ಪಡೆದು ವರ್ಗಾವಣೆಯಾದ ಆಹಾರ ನಿರೀಕ್ಷಕ ಶ್ರೀನಿವಾಸ್‌ ಮತ್ತು ನಿವೃತ್ತಿ ಹೊಂದಿದ ಡಿ.ದರ್ಜೆ ಸಿಬ್ಬಂದಿ ನಾಗರತ್ನಮ್ಮರಿಗೆ ಬೀಳ್ಕೊಡುಗೆ ನೀಡಿ ಮಾತನಾಡಿದ ಅವರು, ಸೇವಾವಧಿ ಮಧ್ಯ ಅನೇಕ ಒತ್ತಡ, ಬೆದರಿಕೆ, ಪ್ರಭಾವಗಳು ನಮ್ಮ ಮೇಲೆ ಬರುಧಿವುದು ಸಾಧಿಮಾನ್ಯ. ಆದರೆ, ನಾವು ನಮ್ಮ ಕರ್ತವ್ಯವನ್ನು ಶ್ರದ್ಧೆ ಮತ್ತು ಎಚ್ಚರದಿಂದ ಮಾಡಿದರೆ ಯಾವುದೆ ತೊಂದರೆ ಇರುವುದಿಲ್ಲಎಂದರು.

ಉಪ ತಹಸೀಲ್ದಾರ್‌ ಮುಕ್ತಾಂಭ, ಬೂದಿಕೋಟೆ ರಾಜಸ್ವ ನಿರೀಕ್ಷಕ ಎನ್‌.ವಿ.ಲೋಕೇಶ್‌, ಸಿಬ್ಬಂದಿ ಮಂಜುನಾಥ್‌, ಗಾಯತ್ರಿ, ಅಕ್ಕೆಮ್ಮ, ಬಾನುಪ್ರಕಾಶ್‌, ಗಣೇಶ್‌, ರಾಮೇಗೌಡ, ಗ್ರಾಮ ಲೆಕ್ಕಿಗರಾದ ಯೋಗಿ, ಚಂದ್ರಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ