ಅಬ್ಬರದ ಮಳೆಗೆ ಕೋಲಾರ ತತ್ತರ

Vijaya Karnataka Web 21 May 2021, 5:33 pm
ಕೋಲಾರ ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ ವಾಗಿದ್ದು, ನಗರದ ಕೀಲುಕೋಟೆ ಬಡಾವಣೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಬ್ರಿಜ್ ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು ಮಳೆಯಲ್ಲಿ ನೀರಿನ ಆಳದ ಅರಿವಿಲ್ಲದೆ ಚಲಿಸಿದ ಇನೋವ ಕಾರು ಅಂಡರ್ ಪಾಸ್ ಮದ್ಯ ಸಿಲುಕಿ ಸಂಪೂರ್ಣ ಜಲಾವೃತ ಗೊಂಡಿದ್ದು ಕಾರಿನಲ್ಲಿದ್ದ ನಾಲ್ವರು ಹೊರಬರಲಾಗದೆ ಇನ್ನೇನು ಮುಳುಗುತ್ತಿದ್ದಾರೆ ಎಂದಾಗ ಸ್ಥಳಕ್ಕೆ ದಾವಿಸಿದ ಸ್ಥಳೀಯರು ಕಾರಿನಲ್ಲಿದ್ದವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇನ್ನು ಕೋಲಾರದಲ್ಲಿ ಜೋರು ಮಳೆಯದ ಪ್ರತಿಬಾರಿ ಕೀಲುಕೋಟೆ ಅಂಡರ್ ಪಾಸ್ ನಲ್ಲಿ ಒಂದು ವಾಹನ ಸಿಲುಕುತ್ತಿದ್ದು ಅನೇಕ ಬಾರಿ ಇದೇರೀತಿ ಅನಾಹುತಗಳು ನಡೆದರೂ ಎಚ್ಚತ್ತುಕೊಳ್ಳದ ಸ್ಥಳೀಯ ಆಡಳಿತ , ಹಾಗೂ ಲೋಕೋಪಯೋಗಿ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯೆಕ್ತಪಡಿಸಿ ಇನ್ನಾದರೂ ಯಾವುದೇ ಪ್ರಾಣಾಪಾಯ ಸಂಭವಿಸುವ ಮೊದಲು ರಲ್ವೆ ಅಂಡರ್ ಪಾಸ್ ಸರಿಪಡಿಸುವಂತೆ ಆಗ್ರಹಿಸಿದ್ದಾರೆ .
Loading ...