ಆ್ಯಪ್ನಗರ

ಕ್ಯಾನ್‌ ನೆಟ್‌ವರ್ಕ್‌ ನಿಂದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ

ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಮೌಲ್ಯದ ಕುಡಿವ ನೀರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದ್ದು, ಇದರ ಜತೆಗೆ ಸದಸ್ಯರು ತಾವೂ ಸಂಗ್ರಹಿಸಿದ ವಸ್ತುಗಳನ್ನು ಕಳುಹಿಸಿಕೊಡಬಹುದೆಂದು ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್‌.ರಾವ್‌ ಹೇಳಿದರು.

Vijaya Karnataka 13 Aug 2019, 4:08 pm
ಕೋಲಾರ : ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಮೌಲ್ಯದ ಕುಡಿವ ನೀರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದ್ದು, ಇದರ ಜತೆಗೆ ಸದಸ್ಯರು ತಾವೂ ಸಂಗ್ರಹಿಸಿದ ವಸ್ತುಗಳನ್ನು ಕಳುಹಿಸಿಕೊಡಬಹುದೆಂದು ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್‌.ರಾವ್‌ ಹೇಳಿದರು.
Vijaya Karnataka Web helping neighbors from can network
ಕ್ಯಾನ್‌ ನೆಟ್‌ವರ್ಕ್‌ ನಿಂದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ


ಇಲ್ಲಿನ ಹೊನ್ನಶೆಟ್ಟಿಹಳ್ಳಿ ಗ್ರಾಮವಿಕಾಸ ಸಂಸ್ಥೆಯಲ್ಲಿ ನಡೆದ ಕ್ಯಾನ್‌ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಕುಡಿವ ನೀರಿಗೆ ಸಮಸ್ಯೆ ಆಗಿರುವ ಕುರಿತಂತೆ ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬಿಸ್ಲೆರಿ ಕ್ಯಾನ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಆಯೋಗದ ಮಾದರಿಯಲ್ಲಿ ಯುವಜನ ಆಯೋಗ ಸ್ಥಾಪನೆಗೆ ಆಗ್ರಹಿಸಿ ಅಂಚೆ ಕಾರ್ಡ್‌ ಚಳವಳಿ ಆರಂಭಿಸಲಾಗುತ್ತಿದೆ. ರಾಜ್ಯದ ಶೇ.65ಜನಸಂಖ್ಯೆ ಇರುವ ಯುವ ಜನರ ಮಾರ್ಗದರ್ಶನ ಮತ್ತು ಸಲಹೆಗೆ ಯುವ ಜನ ಆಯೋಗ ಸ್ಥಾಪಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಿಂಗಳಿಗೆ ಒಂದು ಸಾವಿರ ಅಂಚೆ ಕಾರ್ಡ್‌ಗಳನ್ನು ಕ್ಯಾನ್‌ ಸದಸ್ಯರು ಯುವ ಜನರಿಂದ ಮುಖ್ಯಮಂತ್ರಿಗಳಿಗೆ ಬರೆಸುವ ಮೂಲಕ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದು ಎಂವಿಎನ್‌ ರಾವ್‌ ತಿಳಿಸಿದರು.

ಆ.12ರಂದು ಶ್ರೀನಿವಾಸಪುರ ತಾಲೂಕಿನ ವೈ. ಹೊಸಕೋಟೆ ಗ್ರಾಮಕ್ಕೆ ಭೇಟಿ ನೀಡಿ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಮನವಿ ಮಾಡುವುದರ ಜತೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ನೀಡಿ ಮುಂದಿನ ವರ್ಷದಿಂದಲಾದರೂ ಸರಕಾರಿ ಪ್ರೌಢಶಾಲೆ ಆರಂಭವಾಗಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಸರಕಾರಿ ಶಾಲೆಗೆ ಸೇರಿಸಿದರೆ ಮಕ್ಕಳಿಗೆ ಸಿಕ್ಕುವ ಉಚಿತ ಪಠ್ಯಪುಸ್ತಕ, ನೋಟ್‌ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್‌, ಬಿಸಿಯೂಟ, ಸೈಕಲ್‌ ಮುಂತಾದವುಗಳ ಕುರಿತು ಕರಪತ್ರ ಮುದ್ರಿಸಿ ಜಿಲ್ಲೆಯಾದ್ಯಂತ ಪೋಷಕರಿಗೆ ವಿತರಿಸುವ ಜತೆಗೆ ಆಯ್ದ ಸ್ಥಳಗಳಲ್ಲಿ ಗೋಡೆ ಬರಹ ಬರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೀಡ್‌ ಸಂಸ್ಥೆ ಮಲ್ಲಮ್ಮ ಮಾತನಾಡಿ, ಸೈಗಲ್‌ ಸಂಸ್ಥೆಯವರು ಹೈದರಾಬಾದ್‌ನಲ್ಲಿ ಆ.27ರಿಂದ 30ರವರೆಗೆ ಮಳೆ ಕೊಯ್ಲು ಕುರಿತು ವೈಜ್ಞಾನಿಕ ಕಾರ್ಯಾಗಾರ ಆಯೋಜಿಸಿದ್ದು ಆಸಕ್ತ ಸದಸ್ಯರು ಭಾಗವಹಿಸಬಹುದೆಂದು ಮಾಹಿತಿ ನೀಡಿದರು.

ಮೂಲ ಸೌಲಭ್ಯ: ಮಕ್ಕಳ ಪಾಲನಾ ಸಂಸ್ಥೆಗಳಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಮತ್ತೊಂದು ಕಾರ್ಯಾಗಾರ ಆಯೋಜಿಸುವ ಮೂಲಕ ಎನ್‌ಜಿಓ ಮುಖ್ಯಸ್ಥರಿಗೆ ಕ್ವಿಜ್‌ ಹಾಗೂ ಲಿಖಿತ ಪರೀಕ್ಷೆ ಮೂಲಕ ಮಕ್ಕಳಿಗೆ ಗುಣಮಟ್ಟದ ಸೇವೆ ಸಿಕ್ಕುವಂತೆ ಮಾಡಬೇಕು.

ಉತ್ತಮವಾಗಿ ಪಾಲನಾ ಸಂಸ್ಥೆಗಳನ್ನು ನಡೆಸುವ ಮುಖ್ಯಸ್ಥರಿಗೆ ಬಹುಮಾನ ಕೊಡಬೇಕು. ಇದಕ್ಕೂ ಮೊದಲು ಪಾಲನಾ ಸಂಸ್ಥೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕ್ಯಾನ್‌ ಅಧ್ಯಕ್ಷ ನಾರಾಯಣಸ್ವಾಮಿ ಸಭೆ ಅಧ್ಯಕ್ಷ ತೆ ವಹಿಸಿದ್ದು, ಖಜಾಂಚಿ ಶಿಲ್ಪಾ, ಸದಸ್ಯರಾದ ಕದಂ, ಸುಭಾಷಿಣಿ, ಬೆಳಕು ರಾಧಾಮಣಿ, ಹೂಹಳ್ಳಿ ನಾಗರಾಜ್‌, ರಾಜಣ್ಣ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ