ಆ್ಯಪ್ನಗರ

ಆದಾಯ ತೆರಿಗೆ ಮುಖ್ಯಸ್ಥರಿಗೆ ದೂರು ನೀಡುತ್ತೇನೆ

ಆದಾಯ ತೆರಿಗೆ ಅಧಿಕಾರಿಗಳು ನೀಡಿರುವ ಕಿರುಕುಳದ ವಿರುದ್ದ ದೆಹಲಿಗೆ ತೆರಳಿ ಆದಾಯ ತೆರಿಗೆ ಮುಖ್ಯಸ್ಥರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ದೇವರಾಜ ಅರಸು ವೈದ್ಯಕೀಯ ವಿವಿ ಕಾರ್ಯದರ್ಶಿ ಜಿ. ಎಚ್‌.ನಾಗರಾಜ್‌ ತಿಳಿಸಿದರು.

Vijaya Karnataka 21 Oct 2019, 2:57 pm
ಕೋಲಾರ: ಆದಾಯ ತೆರಿಗೆ ಅಧಿಕಾರಿಗಳು ನೀಡಿರುವ ಕಿರುಕುಳದ ವಿರುದ್ದ ದೆಹಲಿಗೆ ತೆರಳಿ ಆದಾಯ ತೆರಿಗೆ ಮುಖ್ಯಸ್ಥರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ದೇವರಾಜ ಅರಸು ವೈದ್ಯಕೀಯ ವಿವಿ ಕಾರ್ಯದರ್ಶಿ ಜಿ. ಎಚ್‌.ನಾಗರಾಜ್‌ ತಿಳಿಸಿದರು.
Vijaya Karnataka Web i complain to the head of income taxkolar news kannada news
ಆದಾಯ ತೆರಿಗೆ ಮುಖ್ಯಸ್ಥರಿಗೆ ದೂರು ನೀಡುತ್ತೇನೆ

ನಗರ ಹೊರವಲಯದ ವೈದ್ಯಕೀಯ ವಿವಿಯಲ್ಲಿಸುದ್ದಿಗಾರರೊಂದಿಗೆ ಶನಿವಾರ ಅವರು ಮಾತನಾಡಿದರು.
ಹಿರಿಯ ಪ್ರೊಫೆಸರ್‌ರನ್ನು ಅವರ ವಯಸ್ಸಿಗೂ ಗೌರವ ನೀಡದೇ ಮನಬಂದಂತೆ ಪ್ರಶ್ನೆ ಕೇಳಿದಾಗ ಅದಕ್ಕೆ ನಾವು ಪ್ರತಿರೋಧ ಒಡ್ಡಿದ್ದಾಗಿ ತಿಳಿಸಿದ ಅವರು, ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಸಾವಿಗೂ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿದರು.
ಐಟಿ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಅಕೌಂಟೆಂಟ್‌ಗೆ ಪೋರ್ಸ್‌ ಮಾಡಿ ಸುಳ್ಳನ್ನು ನಿಜ ಎಂದು ಒಪ್ಪಿಸುವ ವಿಫಲಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.
ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ, ದಾಖಲೆ ನೀಡಿದ್ದೇವೆ, ಏನು ದಾಖಲೆ ಬೇಕಾದರೂ ತಗೊಂಡೋಗಲಿ, ನಮ್ಮಲ್ಲಿಪೇಪರ್‌ಲೆಸ್‌ ಆಡಳಿತವಿದೆ,ಅವರು ಎಷ್ಟೇ ಹುಡುಕಿದರೂ ಆಸ್ಪತ್ರೆ ದಿನಾಚರಣೆಗಾಗಿ ಸಂಗ್ರಹಿಸಿದ್ದ 3.75 ಲಕ್ಷ ರೂ. ಮಾತ್ರ ಅವರಿಗೆ ಹಣ ಸಿಕ್ಕಿರೋದು ಎಂದು ತಿಳಿಸಿದರು.
ನಮ್ಮಲ್ಲಿಕೆಲಸ ಮಾಡುತ್ತಿರುವ ಸಿಬ್ಬಂದಿಯ ಎರಡು ಗುಂಪುಗಳಿಂದಾಗಿಯೇ ಇಂತಹ ಸುಳ್ಳು ದೂರು ನೀಡಲಾಗಿದೆ, ನಾವು ಶುದ್ಧವಾಗಿದ್ದೇವೆ, ಬೆರಳೆತ್ತಿ ತೋರುವಂತಿಲ್ಲ, ಈಗ್ಗೆ ಮೂರು ಬಾರಿ ಐಟಿ ರೈಡ್‌ ಆಗಿದೆ ಏನು ಸಿಕ್ಕಿಲ್ಲಎಂದು ತಿಳಿಸಿದರು.
ವೈದ್ಯಕೀಯ ಸೀಟು ಕೌನ್ಸಿಲಿಂಗ್‌ನಲ್ಲಿಅನ್ಯಾಯವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ ಮಹಿಳೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಡಿಜಿಎಚ್‌ಎಸ್‌ ನೀಡುವ ಪಟ್ಟಿಯಂತೆಯೇ ನಾವು ದಾಖಲಾತಿ ಮಾಡಿದ್ದೇವೆ, ತಪ್ಪಿದ್ದರೆ ತೋರಿಸಲಿ, ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲಎಂದರು.
ನಗರಸಭೆ ವಿರುದ್ಧವೂ ದೂರು: ಕೋಲಾರ ನಗರಸಭೆಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಇದ್ದರೂ ನಾವು 30 ಲಕ್ಷ ಪ್ರತಿವರ್ಷ ಪಾವತಿಸುತ್ತಿದ್ದೇವೆ, ಇವರು ಎಂದಾದರೂ ಒಂದು ಲೀಟರ್‌ ನೀರು ಕೊಟ್ಟಿದ್ದಾರಾ? ರಸ್ತೆ, ಚರಂಡಿ,ಕಸವಿಲೇವಾರಿ ಏನಾದರೂ ಮಾಡಿದ್ದಾರಾ. ನೀರಿಗಾಗಿ ನಾವು ತಿಂಗಳಿಗೆ 4.5 ಲಕ್ಷ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಗರಸಭೆಗೆ ಅಭಿವೃದ್ಧಿಗೆ 50 ಲಕ್ಷ ನೀಡಿದ್ದೇವೆ ಏನಾಯಿತೋ ಗೊತ್ತಿಲ್ಲ, ನಮಗೂ ಪರಿಸರ ಕಾಳಜಿ ಇದೆ, ನಮ್ಮ ಕಾಲೇಜು ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳಿಗೆ ಗಿಡ ನೆಡಲು ತಲಾ 50 ಸಾವಿರ ನೀಡಿದ್ದೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ