ಆ್ಯಪ್ನಗರ

ಕೋಲಾರದಲ್ಲಿಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಪ್ರತ್ಯಕ್ಷ!

ಕೋಲಾರ ಜಿಲ್ಲೆಯಲ್ಲಿಇನ್ಫೋಸಿಸ್‌ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ದಿಡೀರನೆ ಕಾಣಿಸಿಕೊಂಡಿದ್ದು, ರಾಷ್ಟೀ್ರಯ ಹೆದ್ದಾರಿ ಸಮೀಪದ ಹೋಟೆಲ್‌ವೊಂದರಲ್ಲಿರಾಗಿರೊಟ್ಟಿ, ದೋಸೆ ಸವಿದಿದ್ದಾರೆ.

Vijaya Karnataka 25 Oct 2019, 3:29 pm
ಕೋಲಾರ: ಕೋಲಾರ ಜಿಲ್ಲೆಯಲ್ಲಿಇನ್ಫೋಸಿಸ್‌ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ದಿಡೀರನೆ ಕಾಣಿಸಿಕೊಂಡಿದ್ದು, ರಾಷ್ಟೀ್ರಯ ಹೆದ್ದಾರಿ ಸಮೀಪದ ಹೋಟೆಲ್‌ವೊಂದರಲ್ಲಿರಾಗಿರೊಟ್ಟಿ, ದೋಸೆ ಸವಿದಿದ್ದಾರೆ.
Vijaya Karnataka Web infosys sudhamoorthy was in kolar kolar news kannada news
ಕೋಲಾರದಲ್ಲಿಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಪ್ರತ್ಯಕ್ಷ!

ಕೋಲಾರದ ಮುಳಬಾಗಲಿನ ನಂಗಲಿ ಗ್ರಾಮದ ಹೆದ್ದಾರಿಯಲ್ಲಿನ ಶ್ರೀಕೃಷ್ಣ ಗ್ರ್ಯಾಂಡ್‌ ಹೋಟೆಲ್‌ಗೆ ಬುಧವಾರ ರಾತ್ರಿ 9 ರ ವೇಳೆಯಲ್ಲಿಊಟಕ್ಕಾಗಿ ಹೋಟೆಲ್‌ಗೆ ಬಂದ ಮೂವರ ಪೈಕಿ ಓರ್ವ ಮಹಿಳೆಯ ಮುಖವನ್ನು ಎಲ್ಲೋ ನೋಡಿದಂತೆ ಮಾಲಿಕನಿಗೆ ಅನಿಸಿತ್ತು.
ತಕ್ಷಣವೇ ಗೌರವಾದರಗಳಿಂದ ಸುಧಾಮೂರ್ತಿ ಹಾಗೂ ಅವರ ಬಳಗವನ್ನು ಮಾಲಿಕರು ಮತ್ತು ಸಿಬಂದಿಯು ಉಪಚರಿಸಿದ್ದಾರೆ. ಸುಧಾಮೂರ್ತಿ ಅವರು ಹೋಟೆಲ್‌ನಲ್ಲಿರಾಗಿ ರೊಟ್ಟಿ ಹಾಗೂ ರವಾ ದೋಸೆ ಸವಿದಿದ್ದಾರೆ. ಸುಧಾಮೂರ್ತಿ ಅವರು ಹೋಟೆಲ್‌ಗೆ ಬಂದಿರುವ ಸುದ್ದಿ ಅಲ್ಲಿದ್ದವರಿಗೂ ಗೊತ್ತಾಗಿದೆ.
ಕೋಲಾರ ಜಿಲ್ಲೆಯಲ್ಲಿನ ಮಳೆ-ಬೆಳೆ ಬಗ್ಗೆಯೂ ವಿಚಾರಿಸಿಕೊಂಡ ಸುಧಾಮೂರ್ತಿ ಅವರು, ಜಿಲ್ಲೆಯಲ್ಲಿನ ಹಲವಾರು ಶಾಲೆಗಳಿಗೆ ತಮ್ಮ ಸಂಸ್ಥೆಯ ಪ್ರತಿಷ್ಠಾನದಿಂದ ಕೊಡಲಾಗಿರುವ ಸವಲತ್ತುಗಳ ಬಗ್ಗೆಯೂ ಕೇಳಿ ತಿಳಿದುಕೊಂಡಿದ್ದಾರೆ.
ತಿರುಪತಿ ದೇವಸ್ಥಾನ ಮಂಡಳಿಯ ಆಡಳಿತ ಸಮಿತಿ ಸದಸ್ಯರಾಗಿರುವ ತಾವು ತಿರುಪತಿಯಲ್ಲಿದ್ದ ಸಭೆಯಲ್ಲಿಭಾಗವಹಿಸಿ ಬೆಂಗಳೂರಿಗೆ ಹಿಂದಿರುಗುತ್ತಿರುವುದಾಗಿ ಅವರು ಮಾಹಿತಿ ಕೊಟ್ಟಿದ್ದಾರೆ.
ಸುಧಾಮೂರ್ತಿ ಅವರ ಊಟವಾದ ನಂತರ ಹೋಟೆಲ್‌ ಸಿಬ್ಬಂದಿ ಹಾಗೂ ಗ್ರಾಮಸ್ಥರು ಅವರೊಂದಿಗೆ ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡಿದ್ದಾರೆ. ಹೊಟೆಲ್‌ ಮಾಲೀಕರನ್ನು ಉದ್ದೇಶಿಸಿ ಮನೆಗಿಂತ ನಿಮ್ಮ ಹೋಟೆಲ್‌ನಲ್ಲಿಯೇ ರಾಗಿ ರೊಟ್ಟಿ ಚೆನ್ನಾಗಿತ್ತು ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿ, ವಾಪಸ್ಸಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ