ಆ್ಯಪ್ನಗರ

ತಿರುಪತಿಗೆ ಹೇಮಂತ್ & ಅಂಜಲಿ ನಿಂಬಾಳ್ಕರ್ ಪಾದಯಾತ್ರೆ..! ಕಾಲ್ನಡಿಗೆಯಲ್ಲಿ ಸಾಗಿ ತಿಮ್ಮಪ್ಪನ ದರ್ಶನಕ್ಕೆ ಹರಕೆ

ತಿರುಪತಿಗೆ ಕಾಲ್ನಡಿಗೆಯ ಮೂಲಕ ಹರಕೆ ಸಲ್ಲಿಸುವ ಸಲುವಾಗಿ ಈ ದಂಪತಿ ತೆರಳುತ್ತಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರು ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್‌ ಜತೆಗೆ ಬಾಲಾಜಿಯ ದರ್ಶನಕ್ಕೆ ಹೋಗುತ್ತಿದ್ದಾರೆ.

Vijaya Karnataka Web 13 Jan 2020, 4:53 pm
ಕೋಲಾರ: ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್‌ ತಮ್ಮ ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್‌ ಜತೆ ಕೋಲಾರದ ಮಾರ್ಗವಾಗಿ ತಿರುಪತಿಗೆ ಪಾದಯಾತ್ರೆ ತೆರಳುವ ಮೂಲಕ ಅನಿರೀಕ್ಷಿತವಾಗಿ ಪ್ರತ್ಯಕ್ಷರಾದರು.
Vijaya Karnataka Web nimbalkar
ತಿರುಪತಿಗೆ ಹೇಮಂತ್ & ಅಂಜಲಿ ನಿಂಬಾಳ್ಕರ್ ಪಾದಯಾತ್ರೆ..! ಕಾಲ್ನಡಿಗೆಯಲ್ಲಿ ಸಾಗಿ ತಿಮ್ಮಪ್ಪನ ದರ್ಶನಕ್ಕೆ ಹರಕೆ


ತಿರುಪತಿಗೆ ಕಾಲ್ನಡಿಗೆಯ ಮೂಲಕ ಹರಕೆ ಸಲ್ಲಿಸುವ ಸಲುವಾಗಿ ಈ ದಂಪತಿ ತೆರಳುತ್ತಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರು ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್‌ ಜತೆಗೆ ಬಾಲಾಜಿಯ ದರ್ಶನಕ್ಕೆ ಹೋಗುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ಕೋಲಾರದ ಬೈಪಾಸ್‌ ರಸ್ತೆಯಲ್ಲಿ ನಿಂಬಾಳ್ಕರ್‌ ದಂಪತಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದ್ದು, ಪತಿ ಹೇಮಂತ್‌ ನಿಂಬಾಳ್ಕರ್‌ ಖಾನಾಪುರ ಶಾಸಕಿ ಅಂಜಲಿ ಜತೆಗೆ ಹೆಜ್ಜೆ ಹಾಕುತ್ತಿದ್ದರು.

ಶನಿವಾರ ಬೆಳಗ್ಗೆ 5 ಗಂಟೆಗೆ ದಂಪತಿಯಿಬ್ಬರೂ ಆಪ್ತರ ಜತೆಗೆ ಬೆಂಗಳೂರಿನಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಕೋಲಾರದಿಂದ 180 ಕಿಲೋಮೀಟರ್‌ ದೂರದಲ್ಲಿರುವ ಆಂಧ್ರಪ್ರದೇಶದ ತಿರುಪತಿಗೆ ದಂಪತಿಗಳು ಮುಂದಿನ ಐದು ದಿನಗಳಲ್ಲಿ ಸೇರುವ ನಿರೀಕ್ಷೆಯಿದೆ.

ಕ್ಷೇತ್ರದ ಒಳಿತಿಗಾಗಿ ಪಾದಯಾತ್ರೆ: ಕೋಲಾರದ ಮೂಲಕ ಹಾದುಹೋಗುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌, ಖಾನಾಪುರ ಕ್ಷೇತ್ರದ ಜನರ ಒಳಿತಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ತಿರುಪತಿಯ ತಿಮ್ಮಪ್ಪನಲ್ಲಿ ಹರಕೆ ಹೊತ್ತುಕೊಳ್ಳಲಾಗಿತ್ತು. ಹರಕೆಯನ್ನು ತೀರಿಸುವ ಸಲುವಾಗಿ ಬಾಲಾಜಿಯ ದರ್ಶನಕ್ಕೆ ತೆರಳುತ್ತಿರುವುದಾಗಿ ಅಂಜಲಿ ಹೇಳಿದ್ದಾರೆ.

ತಪ್ಪು ತನಿಖೆ ವರದಿ ಸಲ್ಲಿಸಿದ್ದ ಐಪಿಎಸ್‌ ನಿಂಬಾಳ್ಕರ್‌ ವಿಚಾರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ