ಕೋಲಾರ: ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್ ಜತೆ ಕೋಲಾರದ ಮಾರ್ಗವಾಗಿ ತಿರುಪತಿಗೆ ಪಾದಯಾತ್ರೆ ತೆರಳುವ ಮೂಲಕ ಅನಿರೀಕ್ಷಿತವಾಗಿ ಪ್ರತ್ಯಕ್ಷರಾದರು.
ತಿರುಪತಿಗೆ ಕಾಲ್ನಡಿಗೆಯ ಮೂಲಕ ಹರಕೆ ಸಲ್ಲಿಸುವ ಸಲುವಾಗಿ ಈ ದಂಪತಿ ತೆರಳುತ್ತಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್ ಜತೆಗೆ ಬಾಲಾಜಿಯ ದರ್ಶನಕ್ಕೆ ಹೋಗುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಕೋಲಾರದ ಬೈಪಾಸ್ ರಸ್ತೆಯಲ್ಲಿ ನಿಂಬಾಳ್ಕರ್ ದಂಪತಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದ್ದು, ಪತಿ ಹೇಮಂತ್ ನಿಂಬಾಳ್ಕರ್ ಖಾನಾಪುರ ಶಾಸಕಿ ಅಂಜಲಿ ಜತೆಗೆ ಹೆಜ್ಜೆ ಹಾಕುತ್ತಿದ್ದರು.
ಶನಿವಾರ ಬೆಳಗ್ಗೆ 5 ಗಂಟೆಗೆ ದಂಪತಿಯಿಬ್ಬರೂ ಆಪ್ತರ ಜತೆಗೆ ಬೆಂಗಳೂರಿನಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಕೋಲಾರದಿಂದ 180 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ತಿರುಪತಿಗೆ ದಂಪತಿಗಳು ಮುಂದಿನ ಐದು ದಿನಗಳಲ್ಲಿ ಸೇರುವ ನಿರೀಕ್ಷೆಯಿದೆ.
ಕ್ಷೇತ್ರದ ಒಳಿತಿಗಾಗಿ ಪಾದಯಾತ್ರೆ: ಕೋಲಾರದ ಮೂಲಕ ಹಾದುಹೋಗುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ಕ್ಷೇತ್ರದ ಜನರ ಒಳಿತಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ತಿರುಪತಿಯ ತಿಮ್ಮಪ್ಪನಲ್ಲಿ ಹರಕೆ ಹೊತ್ತುಕೊಳ್ಳಲಾಗಿತ್ತು. ಹರಕೆಯನ್ನು ತೀರಿಸುವ ಸಲುವಾಗಿ ಬಾಲಾಜಿಯ ದರ್ಶನಕ್ಕೆ ತೆರಳುತ್ತಿರುವುದಾಗಿ ಅಂಜಲಿ ಹೇಳಿದ್ದಾರೆ.
ತಪ್ಪು ತನಿಖೆ ವರದಿ ಸಲ್ಲಿಸಿದ್ದ ಐಪಿಎಸ್ ನಿಂಬಾಳ್ಕರ್ ವಿಚಾರಣೆ
ತಿರುಪತಿಗೆ ಕಾಲ್ನಡಿಗೆಯ ಮೂಲಕ ಹರಕೆ ಸಲ್ಲಿಸುವ ಸಲುವಾಗಿ ಈ ದಂಪತಿ ತೆರಳುತ್ತಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪತಿ ಎಸಿಬಿ ಘಟಕದ ಐಜಿ ಹೇಮಂತ ನಿಂಬಾಳ್ಕರ್ ಜತೆಗೆ ಬಾಲಾಜಿಯ ದರ್ಶನಕ್ಕೆ ಹೋಗುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಕೋಲಾರದ ಬೈಪಾಸ್ ರಸ್ತೆಯಲ್ಲಿ ನಿಂಬಾಳ್ಕರ್ ದಂಪತಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದ್ದು, ಪತಿ ಹೇಮಂತ್ ನಿಂಬಾಳ್ಕರ್ ಖಾನಾಪುರ ಶಾಸಕಿ ಅಂಜಲಿ ಜತೆಗೆ ಹೆಜ್ಜೆ ಹಾಕುತ್ತಿದ್ದರು.
ಶನಿವಾರ ಬೆಳಗ್ಗೆ 5 ಗಂಟೆಗೆ ದಂಪತಿಯಿಬ್ಬರೂ ಆಪ್ತರ ಜತೆಗೆ ಬೆಂಗಳೂರಿನಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಕೋಲಾರದಿಂದ 180 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ತಿರುಪತಿಗೆ ದಂಪತಿಗಳು ಮುಂದಿನ ಐದು ದಿನಗಳಲ್ಲಿ ಸೇರುವ ನಿರೀಕ್ಷೆಯಿದೆ.
ಕ್ಷೇತ್ರದ ಒಳಿತಿಗಾಗಿ ಪಾದಯಾತ್ರೆ: ಕೋಲಾರದ ಮೂಲಕ ಹಾದುಹೋಗುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ಕ್ಷೇತ್ರದ ಜನರ ಒಳಿತಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ತಿರುಪತಿಯ ತಿಮ್ಮಪ್ಪನಲ್ಲಿ ಹರಕೆ ಹೊತ್ತುಕೊಳ್ಳಲಾಗಿತ್ತು. ಹರಕೆಯನ್ನು ತೀರಿಸುವ ಸಲುವಾಗಿ ಬಾಲಾಜಿಯ ದರ್ಶನಕ್ಕೆ ತೆರಳುತ್ತಿರುವುದಾಗಿ ಅಂಜಲಿ ಹೇಳಿದ್ದಾರೆ.
ತಪ್ಪು ತನಿಖೆ ವರದಿ ಸಲ್ಲಿಸಿದ್ದ ಐಪಿಎಸ್ ನಿಂಬಾಳ್ಕರ್ ವಿಚಾರಣೆ