ಆ್ಯಪ್ನಗರ

ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಿ

ಪುರುಷ ಮತ್ತು ಮಹಿಳೆಯರಿಗೆ ಸಂವಿಧಾನದಲ್ಲಿಸಮಾನ ಹಕ್ಕು ಬಾದ್ಯತೆ ನೀಡಿದೆ. ಮಹಿಳೆಯರು ಎಲ್ಲಾಕ್ಷೇತ್ರಗಳಲ್ಲಿಮುನ್ನಡೆಯುವ ಮೂಲಕ ತನ್ನ ಹಕ್ಕನ್ನು ಪ್ರತಿಪಾದಿಸಿಬೇಕು. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲಎಂದು ಡಿವೈಎಸ್‌ಪಿ ಅನುಷ ತಿಳಿಸಿದರು.

Vijaya Karnataka 23 Aug 2019, 2:30 pm
ಮುಳಬಾಗಲು: ಪುರುಷ ಮತ್ತು ಮಹಿಳೆಯರಿಗೆ ಸಂವಿಧಾನದಲ್ಲಿಸಮಾನ ಹಕ್ಕು ಬಾದ್ಯತೆ ನೀಡಿದೆ. ಮಹಿಳೆಯರು ಎಲ್ಲಾಕ್ಷೇತ್ರಗಳಲ್ಲಿಮುನ್ನಡೆಯುವ ಮೂಲಕ ತನ್ನ ಹಕ್ಕನ್ನು ಪ್ರತಿಪಾದಿಸಿಬೇಕು. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲಎಂದು ಡಿವೈಎಸ್‌ಪಿ ಅನುಷ ತಿಳಿಸಿದರು.
Vijaya Karnataka Web jnanavikasa kendra anniversary
ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಿ


ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬುವ ಜತೆಗೆ ಸ್ವಾವಲಂಬಿಯಾಗಿ ಬದಕಲು ವಿವಿಧ ರೀತಿಯ ವೃತ್ತಿ ಶಿಕ್ಷಣ ನೀಡಬೇಕು. ಜತೆಗೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಧಿಭ್ಯ ಒದಗಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದರು.

ಕೋಲಾರ ಜಿಲ್ಲೆಗೆ ತನ್ನದೇ ಅದ ವೈಶಿಷ್ಟತೆ ಇದೆ. ಇಲ್ಲಿನೀರಿನ ಸಮಸ್ಯೆ ಇಲ್ಲವಾಗಿದ್ದರೆ, ವಿವಿಧ ಕ್ಷೇತ್ರಗಳಲ್ಲಿರಾಜ್ಯದಲ್ಲೇ ಮುಂಚೂಣಿಯಲ್ಲಿಇರುತ್ತಿತ್ತು ಎಂದು ತಿಳಿಸಿದರು.

ವಿಶೇಷ ಯೋಜನೆ: ರೋಟರಿ ಮುಳಬಾಗಲು ಸೆಂಟ್ರಲ್‌ನ ಅಧ್ಯಕ್ಷೆ ಸರಿತಾ ಬಾಲಾಜಿ ಮಾತನಾಡಿ, ಮಹಿಳೆಯರ ಸ್ವಾವಲಂಭಿ ಜೀವನ ನಡೆಸುವ ನಿಟ್ಟಿನಲ್ಲಿಸರಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಈ ನಿಟ್ಟಿನಲ್ಲಿಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇಧಿದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಲೇಖಕಿ ಮಂಜುಕನ್ನಿಕ ಮಾತನಾಡಿ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ಮಹಿಳೆಯರು ಒಂದಲ್ಲಒಂದು ರೀತಿಯಲ್ಲಿಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿನ್ಯಾಯಾಲಯ ವಿಶೇಷ ಕಾನೂನು ಜಾರಿಗೊಳಿಸಿದೆ. ಇದನ್ನು ಅರಿಯಬೇಕು ಎಂದು ತಿಳಿಸಿದರು.

ಯೋಜನಾಧಿಕಾರಿ ಸಂದ್ಯಾ ವಿ. ಶೆಟ್ಟಿ ಮಾಡಿದರು. ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಏರ್ಪಡಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲೇಖಕಿ ಮಂಜುಕನ್ನಿಕ ಅಧಿವರ 'ಮಂಜಿನ ಬಾಲೆ' ಶೀರ್ಷಿಕೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಶಿಕ್ಷಕ ವಿ.ಲಕ್ಷತ್ರ್ಮಯ್ಯ, ಸಮನ್ವಯ ಅಧಿಕಾರಿಗಳಾದ ಎಂ.ಸೌಮ್ಯ, ಮಂಜುನಾಥ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ