ಆ್ಯಪ್ನಗರ

ಬಾಲಕಿಯನ್ನು ಅಪಹರಿಸಿದ್ದವನಿಗೆ ನ್ಯಾಯಾಂಗ ಬಂಧನ

ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ ಆಂಧ್ರಪ್ರದೇಶದ ರಾಮಸಂದ್ರ ಗ್ರಾಮದಲ್ಲಿ ಬಲತ್ಕಾರ ಮಾಡಿ ಕೂಡಿಟ್ಟಿದ್ದ ಪ್ರಕರಣವನ್ನು ಬೇದಿಸಿರುವ ಪಟ್ಟಣದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Vijaya Karnataka 4 Jul 2019, 3:18 pm
ಮಾಲೂರು: ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ ಆಂಧ್ರಪ್ರದೇಶದ ರಾಮಸಂದ್ರ ಗ್ರಾಮದಲ್ಲಿ ಬಲತ್ಕಾರ ಮಾಡಿ ಕೂಡಿಟ್ಟಿದ್ದ ಪ್ರಕರಣವನ್ನು ಬೇದಿಸಿರುವ ಪಟ್ಟಣದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Vijaya Karnataka Web judicial custody for girl kidnapper
ಬಾಲಕಿಯನ್ನು ಅಪಹರಿಸಿದ್ದವನಿಗೆ ನ್ಯಾಯಾಂಗ ಬಂಧನ


ತಾಲೂಕಿನ ಲಕ್ಕೂರು ಗ್ರಾಮದ ಬರಕತ್‌ (20) ಬಂಧಿತ ಆರೋಪಿ. ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ ಈತ, ಗ್ರಾಮದ 16 ವರ್ಷದ ಬಾಲಕಿ ಜೂ. 25ರಂದು ಸಂಜೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇದ್ದಾಗ ಆಟೋದಲ್ಲಿ ಅಪಹರಿಸಿ ಆಂಧ್ರಪ್ರದೇಶದ ರಾಮಸಂದ್ರ ಗ್ರಾಮದಲ್ಲಿ ಬಲತ್ಕಾರ ಮಾಡಿರುವುದಾಗಿ, ಬಾಲಕಿಯ ತಾಯಿ ಪಟ್ಟಣದ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪಟ್ಟಣದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬರಕತ್‌ನನ್ನು ಬಾಲಕಿಯೊಂದಿಗೆ ಕೋಲಾರ ಬಸ್‌ ನಿಲ್ದಾಣದಲ್ಲಿ ಇದ್ದಾಗ ದಿಡೀರ್‌ ದಾಳಿ ನಡೆಸಿ ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ