ಆ್ಯಪ್ನಗರ

ಕಾಂಗ್ರೆಸ್‌ ಶಾಸಕರ ವಿರುದ್ಧವೇ ಕೆಎಚ್‌ ಮುನಿಯಪ್ಪ ವಾಗ್ದಾಳಿ; ರಮೇಶ್‌ಕುಮಾರ್‌ರನ್ನು ಪಕ್ಷದಿಂದ ಉಚ್ಚಾಟಿಸಿ ಎಂದ ಮಾಜಿ ಸಚಿವ

ರಮೇಶ್ ಕುಮಾರ್, ನಜೀರ್ ಅಹಮದ್, ಎಸ್ ಎನ್ ನಾರಾಯಣಸ್ವಾಮಿ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ, ಲೋಕಸಭೆ ಚುನಾವಣೆಯಲ್ಲಿ ಇವರ್ಯಾರು ಕಾಂಗ್ರೆಸ್ ಪರ ಕೆಲಸ ಮಾಡಲಿಲ್ಲ ಎಂದು ಕೆಎಚ್‌ ಮುನಿಯಪ್ಪ ಕಿಡಿಕಾರಿದರು.

Vijaya Karnataka Web 28 Aug 2019, 4:42 pm
ಕೋಲಾರ: ಕಾಂಗ್ರೆಸ್‌, ಜೆಡಿಎಸ್‌ ದೋಸ್ತಿ ಸರಕಾರ ಪತನಗೊಂಡ ನಂತರ ಕಾಂಗ್ರೆಸ್‌ನಲ್ಲಿಯೇ ಆಂತರಿಕ ಸಮರ ಶುರುವಾಗಿದೆ.
Vijaya Karnataka Web ಕೆಎಚ್‌ ಮುನಿಯಪ್ಪ
ಕೆಎಚ್‌ ಮುನಿಯಪ್ಪ


ಕೈ ನಾಯಕ ನಡುವೆಯೇ ಮಾತಿನ ಸಮರ ಶುರುವಾಗಿದೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ದಿನೇಶ್‌ ಗುಂಡೂರಾವ್‌ ನಡುವೆ ಪರೋಕ್ಷ ಮಾತಿನ ಚಕಮಕಿ ನಂತರ ಈಗ ಕೋಲಾರದ ಮಾಜಿ ಸಂಸದ ಕೆಎಚ್‌ ಮುನಿಯಪ್ಪ ಸರದಿ.

ತಮ್ಮದೇ ಪಕ್ಷದ ಶಾಸಕರ ವಿರುದ್ಧ ಕೆಎಚ್‌ ಮುನಿಯಪ್ಪ ಕಿಡಿಕಾರಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಸ್ ಎನ್ ನಾರಾಯಣಸ್ವಾಮಿ, ವಿ.ಮುನಿಯಪ್ಪ, ನಜೀರ್ ಅಹಮದ್‌ಗೆ ಮಾನ, ಮಾರ್ಯಾದೆಯಿಲ್ಲ ಎಂದು ಕೆಎಚ್‌ ಮುನಿಯಪ್ಪ ಗುಡುಗಿದ್ದಾರೆ.

ರಮೇಶ್ ಕುಮಾರ್, ಎಸ್ ಎನ್ ನಾರಾಯಣಸ್ವಾಮಿ, ನಜೀರ್ ಅಹಮದ್, ವಿ ಮುನಿಯಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಈ ಕಾಂಗ್ರೆಸ್ ಶಾಸಕರೇ ಕಾರಣ. ಎಂದು ಹೇಳಿದ್ದಾರೆ.

ಮಾಲೂರಿನಲ್ಲಿ ನಡೆಯುತ್ತಿರುವ ಸತ್ಯ ಶೋದನಾ ಸಮಿತಿ ಸಭೆಯಲ್ಲಿ ಕೆಎಚ್‌ ಮುನಿಯಪ್ಪ ವಾಗ್ದಾಳಿ ನಡೆಸಿದರು.

ರಮೇಶ್ ಕುಮಾರ್, ನಜೀರ್ ಅಹಮದ್, ಎಸ್ ಎನ್ ನಾರಾಯಣಸ್ವಾಮಿ ಇವರ್ಯಾರಿಗೂ ಮಾನ ಮರ್ಯಾದೆ ಇಲ್ಲ, ಮಾನ ಮರ್ಯಾದೆ ಇದ್ದಲ್ಲಿ ಇವರು ಕಾಂಗ್ರೆಸ್ ಕಚೇರಿ ಒಳಗೆ ಬರಬಾರದು ಎಂದು ಮಾಜಿ ಸಂಸದ ಮುನಿಯಪ್ಪ ಆಕ್ರೋಶಭರಿತರಾಗಿ ಟೀಕಿಸಿದರು.

ಮಾಲೂರಿನ ಆರ್ ಜಿ ರೆಸಾರ್ಟ್‌ನಲ್ಲಿ ನಡೆದ ಸತ್ಯ ಶೋಧನಾ ಸಮಿತಿ ಸಭೆಯಲ್ಲಿ ಆರ್ ಧ್ರುವನಾರಾಯಣ್, ಬಸವರಾಜ ರಾಯರೆಡ್ಡಿ, ವೀರಣ್ಣ ಮತ್ತಿಕಟ್ಟಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ