ಆ್ಯಪ್ನಗರ

ಸಹಾಯ ಮಾಡಿದವರಿಗೆ ಬತ್ತಿ ಇಟ್ಟ ಕೆಎಚ್‌: ಶ್ರೀನಿವಾಸಗೌಡ

ತನಗೆ ಸಹಾಯ ಮಾಡಿದವರಿಗೆ ಸರಿಯಾಗಿ ಬತ್ತಿ ಇಟ್ಟ ಕೆ.ಎಚ್‌.ಮುನಿಯಪ್ಪ ಊಸರವಳ್ಳಿ 7 ಬಣ್ಣ ಬದಲಿಸಿದಂತೆ 7 ಬಾರಿ ತನ್ನ ಬಣ್ಣಗಳನ್ನು ಬದಲಿಸುತ್ತಾ ಬಂದಿದ್ದು, ಇದೀಗ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯವಾಗಿ ಅದು ಸತ್ತಂತಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದರು.

Vijaya Karnataka 24 May 2019, 5:00 am
ಕೋಲಾರ : ತನಗೆ ಸಹಾಯ ಮಾಡಿದವರಿಗೆ ಸರಿಯಾಗಿ ಬತ್ತಿ ಇಟ್ಟ ಕೆ.ಎಚ್‌.ಮುನಿಯಪ್ಪ ಊಸರವಳ್ಳಿ 7 ಬಣ್ಣ ಬದಲಿಸಿದಂತೆ 7 ಬಾರಿ ತನ್ನ ಬಣ್ಣಗಳನ್ನು ಬದಲಿಸುತ್ತಾ ಬಂದಿದ್ದು, ಇದೀಗ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯವಾಗಿ ಅದು ಸತ್ತಂತಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದರು.
Vijaya Karnataka Web kh srinivas gowda who dried the helpers
ಸಹಾಯ ಮಾಡಿದವರಿಗೆ ಬತ್ತಿ ಇಟ್ಟ ಕೆಎಚ್‌: ಶ್ರೀನಿವಾಸಗೌಡ


ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಗೆಲುವಿನ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೆ.ಎಚ್‌. ಅಭಿವ್ರದ್ಧಿ ಇರಲಿ, ಒಂದೇ ಒಂದು ಗಿಡವನ್ನೂ ನಾಟಿ ಮಾಡಲಿಲ್ಲ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜನತೆ ಬಿಜೆಪಿ ಬೆಂಬಲಿಸಿದ್ದಾರೆ, ಆ ಜನರಿಂದಲೇ ನಾವು ಶಾಸಕರಾಗಿರುವುದರಿಂದ ಅವರ ಆಶಯಕ್ಕೆ ತಕ್ಕಂತೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಅವರನ್ನು ಗೆಲ್ಲಿಸಲು ಶ್ರಮಿಸಿದ ನನಗೂ, ಸುಧಾಕರ್‌, ಕೃಷ್ಣಬೈರೇಗೌಡರಿಗೆ ಬೆನ್ನಿಗೆ ಚೂರಿ ಹಾಕಿ ಅನ್ಯಾಯ ಮಾಡಿದ್ದರು. ಸಹಾಯ ಮಾಡಿದವರನ್ನು ಮುಗಿಸುವ ಕೆ.ಎಚ್‌.ಮುನಿಯಪ್ಪ ಅವರ ಕುತಂತ್ರಗಳಿಗೆ ಇಂದು ತಕ್ಕ ಪಾಠವಾಗಿದೆ, ಒಳ್ಳೆಯ ದಿನಗಳು ಬರುತ್ತಿವೆ ಎಂದರು.

ಜೆಡಿಎಸ್‌ ಪಕ್ಷ ದಿಂದ ಗೆದ್ದ ನೀವು ಹೈಕಮಾಂಡ್‌ ವಿರುದ್ಧ ಕೆಲಸ ಮಾಡಿದಂತಾಗಲಿಲ್ಲವೇ ಎಂಬ ಪ್ರಶ್ನೆಗೆ ಅವರು ಕೇಳಲಿ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ