ಆ್ಯಪ್ನಗರ

ರೀಲರ್‌ಗಳ ಪ್ರೋತ್ಸಾಹಧನ ಮುಂದುವರಿಸಲು ಕೆಎಚ್‌ಎಂ ಮನವಿ

ರೇಷ್ಮೆ ನೂಲು ಬಿಚ್ಚಣಿದಾರರಿಗೆ (ರೀಲರ್ಸ್‌) ಈ ಹಿಂದೆ ನೀಡುತ್ತಿದ್ದ ರೀತಿಯಲ್ಲಿ ಪ್ರೋತ್ಸಾಹಧನ ಕಾರ್ಯಕ್ರಮವನ್ನು ಮುಂದುವರಿಸಬೇಕು ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಅವರಲ್ಲಿ ಮನವಿ ಮಾಡಿದ್ದಾರೆ.

Vijaya Karnataka 18 Jan 2019, 5:15 pm
ಕೋಲಾರ: ರೇಷ್ಮೆ ನೂಲು ಬಿಚ್ಚಣಿದಾರರಿಗೆ (ರೀಲರ್ಸ್‌) ಈ ಹಿಂದೆ ನೀಡುತ್ತಿದ್ದ ರೀತಿಯಲ್ಲಿ ಪ್ರೋತ್ಸಾಹಧನ ಕಾರ್ಯಕ್ರಮವನ್ನು ಮುಂದುವರಿಸಬೇಕು ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಅವರಲ್ಲಿ ಮನವಿ ಮಾಡಿದ್ದಾರೆ.
Vijaya Karnataka Web khm appeals to continue the encouragement of reelers
ರೀಲರ್‌ಗಳ ಪ್ರೋತ್ಸಾಹಧನ ಮುಂದುವರಿಸಲು ಕೆಎಚ್‌ಎಂ ಮನವಿ


ಸಚಿವ ಸಾ.ರಾ.ಮಹೇಶ್‌ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ, ಸರಕಾರವು ದುಡಿಮೆ ಬಂಡವಾಳಕ್ಕೆ ನೀಡುವ ಸಾಲಕ್ಕೆ ಬಡ್ಡಿಯನ್ನು ಪಾವತಿಸಲು ವಾರ್ಷಿಕವಾಗಿ 1,690 ಲಕ್ಷ ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದ್ದು, ಈ ಮೀಸಲಿಟ್ಟಿರುವ ಹಣವನ್ನು ಸಕಷ್ಟದಲ್ಲಿರುವ ರೇಷ್ಮೆ ನೂಲು ಬಿಚ್ಚಣಿದಾರರಿಗೆ ಈ ಹಿಂದೆ ನೀಡುತ್ತಿದ್ದ ರೀತಿಯಲ್ಲಿ ಮುಂದುವರಿಸಬೇಕು ಎಂದು ಕೋರಿದರು.

ಪ್ರೋತ್ಸಾಹಧನ ಕಾರ್ಯಕ್ರಮವನ್ನು ಮುಂದುವರಿಸಿದರೆ ಎಲ್ಲಾ ರೀಲರ್‌ಗಳಿಗೆ ಈ ಸೌಲಭ್ಯ ದೊರೆಯುವುದಲ್ಲದೆ ರೀಲರ್‌ಗಳ ಸಂಕಷ್ಟಕ್ಕೆ ಸರಕಾರ ಸ್ಪಂಧಿಸಿದಂತೆ ಆಗುತ್ತದೆ. ಈಗ ಹೊಸದಾಗಿ ರೂಪಿಸಿರುವ ರೀಲರ್‌ಗಳಿಗೆ ಬೆಳೆ ಸಾಲದ ಮಾದರಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ದುಡಿಮೆ ಬಂಡವಾಳ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇಲಾಖೆಯಿಂದ ಎಷ್ಟೇ ಪ್ರಯತ್ನ ಪಟ್ಟರೂ ಈ ಯೋಜನೆ ಜಾರಿಗೊಳಿಸಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ರೀಲರ್‌ಗಳಿಗೆ ಅನುಕೂಲವಲ್ಲದ ಯೋಜನೆಗಳನ್ನು ರದ್ದುಗೊಳಿಸಿ ಈ ಹಿಂದೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನೀಡುವ ಕಾರ್ಯಕ್ರಮವನ್ನು ಮುಂದುವರಿಸಬೇಕು. ರೇಷ್ಮೇ ಆಮದು ಶುಲ್ಕವನ್ನು ಶೇ 15 ಕ್ಕೆ ಹೆಚ್ಚಿಸಿ ನಾಡಿನ ರೇಷ್ಮೆ ಕೃಷಿಕರಿಗೆ ನೆರವಾಗುವಂತೆ ಕೇಂದ್ರವನ್ನು ಆಗ್ರಹಿಸುವಂತೆ ಅವರು ಈ ಸಂದರ್ಭದಲ್ಲಿ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ