ಆ್ಯಪ್ನಗರ

ಕೋಚಿಮುಲ್ ವಿಭಜನೆಗೆ ಡಿ.ವಿ ಹರೀಶ್‌ ಬೆಂಬಲ: ಕೂಡಲೇ ಅನುದಾನ ಬಿಡುಗಡೆಗೆ ಆಗ್ರಹ

​ಅವಳಿ ಜಿಲ್ಲೆಗಳಲ್ಲಿ ನೀರಾವರಿ ಕೊರತೆಯಿಂದ ವ್ಯವಸಾಯ ಮತ್ತು ಹೈನುಗಾರಿಕೆ ಮಾಡಲು ರೈತರಿಗೆ ತುಂಬಾ ಕಷ್ಟವಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 185 ಕೋಟಿ ರೂಪಾಯಿ ವೆಚ್ಚದಲ್ಲಿ, 10 ಲಕ್ಷ ಲೀಟರ್ ಸಾಮರ್ಥ್ಯದ ಎಂವಿಕೆ ಡೈರಿ ಮಾಡಲು ಶಂಕುಸ್ಥಾಪನೆ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿಗಳು 50 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ನೀಡಿಲ್ಲ. ಹಾಗಾಗಿ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ 50 ಕೋಟಿ ರೂಪಾಯಿ ಅನುದಾನವನ್ನು ಕೂಡಲೇ ಕೊಡಿಸಬೇಕು ಎಂದು ಮನವಿ ಮಾಡಿದರು.

guest Nagesha-N | Lipi 24 Jun 2022, 7:52 pm
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಜೀವನಾಡಿಯಾಗಿದ್ದಂತಹ ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ವಿಭಜಿಸಿ ಎರಡೂ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಸಹಕಾರ ಹಾಲು ಒಕ್ಕೂಟವನ್ನು ಸ್ಥಾಪಿಸಲಾಗುದರುವುದಕ್ಕೆ ಬೆಂಬಲಿಸಿ ಸಹಕಾರ ಇಲಾಖೆಗೆ ಕೋಲಾರ ತಾಲೂಕಿನ ಕೋಚಿಮುಲ್ ನಿರ್ದೇಶದ ಡಿ.ವಿ.ಹರೀಶ್ ಕೃತಜ್ಞತೆ ತಿಳಿಸಿದರು.
Vijaya Karnataka Web ಕೊಚಿಮುಲ್



International Yoga Day: ಕೋಲಾರದಲ್ಲಿ ಏಕಕಾಲಕ್ಕೆ 20,000 ಮಂದಿ ಯೋಗದಿನದಲ್ಲಿ ಪಾಲ್ಗೊಂಡು ದಾಖಲೆ!
ಕೋಲಾರ ನಗರದ ಹೊರವಲಯದಲ್ಲಿರುವ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ವಿ.ಹರೀಶ್, ಕಳೆದ ವರ್ಷವೇ ರಾಜ್ಯ ಸರ್ಕಾರ ನೇರವಾಗಿ ಕೋಚಿಮುಲ್ ಅನ್ನು ವಿಭಜಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಎರಡೂ ಜಿಲ್ಲೆಗಳ ಕೆಲವು ಸಹಕಾರ ಸಂಘಗಳ ಅಧ್ಯಕ್ಷರು ರಾಜಕೀಯ ಇಚ್ಛಾಶಕ್ತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈಗ ಎರಡೂ ಜಿಲ್ಲೆಗಳಿಗೆ ಯಾವುದೇ ಕಾನೂನು ತೊಂದರೆಗಳಾಗದಂತೆ ಎಚ್ಚರವಹಿಸಿ ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರ ಮೂಲಕವೇ ಒಕ್ಕೂಟವನ್ನು ವಿಭಜಿಸಿ ಆದೇಶ ಹೊರಡಿಸಿದೆ ಎಂದು ಹೇಳಿದರು.

ಕೂಡಲೇ 50 ಕೋಟಿ ರೂಪಾಯಿ ಅನುದಾನ ನೀಡಲಿ

ಅವಳಿ ಜಿಲ್ಲೆಗಳಲ್ಲಿ ನೀರಾವರಿ ಕೊರತೆಯಿಂದ ವ್ಯವಸಾಯ ಮತ್ತು ಹೈನುಗಾರಿಕೆ ಮಾಡಲು ರೈತರಿಗೆ ತುಂಬಾ ಕಷ್ಟವಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 185 ಕೋಟಿ ರೂಪಾಯಿ ವೆಚ್ಚದಲ್ಲಿ, 10 ಲಕ್ಷ ಲೀಟರ್ ಸಾಮರ್ಥ್ಯದ ಎಂವಿಕೆ ಡೈರಿ ಮಾಡಲು ಶಂಕುಸ್ಥಾಪನೆ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿಗಳು 50 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ನೀಡಿಲ್ಲ. ಹಾಗಾಗಿ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ 50 ಕೋಟಿ ರೂಪಾಯಿ ಅನುದಾನವನ್ನು ಕೂಡಲೇ ಕೊಡಿಸಬೇಕು ಎಂದು ಅವರು ಮನವಿ ಮಾಡಿದರು.
ಕೋಲಾರ: ಸರಕಾರಿ ಜಾಗ ನುಂಗಲು ಭೂಗಳ್ಳರ ಹವಣಿಕೆ..!

ಸರ್ಕಾರ ಹಾಲಿನ ದರ 8 ರಿಂದ 10 ರೂಪಾಯಿ ಹೆಚ್ಚಳ ಮಾಡಲಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಹಿಂದೆಯೇ 200 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಿದ್ದಾರೆ. ಹಾಗೇ ನಮ್ಮ ಕೋಲಾರ ಜಿಲ್ಲೆಯಲ್ಲೂ ಹಾಲು ಉತ್ಪಾದಕರ ಇಚ್ಛಾಶಕ್ತಿಯಿಂದ ಎಂವಿಕೆ ಡೇರಿ ಮಾಡಲು ಹೊರಟಿದ್ದೇವೆ. ಇದಕ್ಕೆ ಸರ್ಕಾರ ಅನುಮತಿ ನೀಡಿ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದ ಒತ್ತಾಯ ಮಾಡಿದರು.

ಅಲ್ಲದೇ ಕೊರೋನಾ ಸಂಕಷ್ಟದ ಸಮಯದಲ್ಲಿ ಒಕ್ಕೂಟಕ್ಕೆ 35 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಇದನ್ನು ಸರಿದೂಗಿಸಲು ಇತ್ತೀಚೆಗೆ ಲೀಟರ್‌ ಹಾಲಿನ ದರ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಸರ್ಕಾರ ಹಾಲಿನ ದರ 8 ರಿಂದ 10 ರೂಪಾಯಿ ಹೆಚ್ಚಿಗೆ ಮಾಡಿದರೆ, ರೈತರಿಗೆ 5 ರಿಂದ 6 ರೂಪಾಯಿ ಹೆಚ್ಚಿಗೆ ನೀಡಬಹುದು. ಇದರಿಂದ ರೈತರಿಗೆ ಆತ್ಮಸ್ಥೈರ್ಯ ಕೊಟ್ಟಂತಾಗುತ್ತದೆ ಎಂದು ಡಿ.ವಿ.ಹರೀಶ್ ಹೇಳಿದರು.

ರಸ್ತೆಯಲ್ಲಿ ಕೆರೆಯೋ.. ಕೆರೆಯಲ್ಲಿ ರಸ್ತೆಯೋ..? ವಾಹನ ಸವಾರರ ಪಾಡು ದೇವರಿಗೇ ಪ್ರೀತಿ..!
ಕೋಲಾರ: ಈ ದೇಶದ ಕಥೆ ಇಷ್ಟೇ ಕಣಣ್ಣೋ.. ಎಂಬ ಜನಪ್ರಿಯ ಹಾಡು ಅಕ್ಷರಶಃ ಇಲ್ಲಿನ ರಸ್ತೆಗಳಿಗೆ ಅನ್ವಯವಾಗುತ್ತದೆ. ಇದೆನೋ ರಸ್ತೆಯಲ್ಲಿ ಹೊಂಡವಿದೆಯೋ ಅಥವಾ ಹೊಂಡದಲ್ಲಿ ರಸ್ತೆಯಿದೆಯೋ ಎಂಬ ಅನುಮಾನ ಕಾಡುತ್ತದೆ.

ಬಡವರ ಬಾದಾಮಿ ನೆಲಗಡಲೆ ಬೆಳೆದ ಕೋಲಾರದ ರೈತ: 1.13 ಎಕರೆಯಲ್ಲಿ 4 ಟನ್ ಇಳುವರಿ!
ಹೌದು, ನಗರದಲ್ಲಿ ಯುಜಿಡಿ, ಚರಂಡಿ ವ್ಯವಸ್ಥೆಗಳು ಸಮರ್ಪಕವಾಗಿರದ ಕಾರಣ ಮಳೆ ಬಂದ ಸಮಯದಲ್ಲಿ ಅನೇಕ ರಸ್ತೆಗಳು ಕೆರೆಗಳಂತಾಗುತ್ತಿದ್ದು, ಗುಂಡಿಗಳ ನಡುವೆಯೇ ಹತ್ತಾರು ಮೀಟರ್‌ ನೀರಿನಲ್ಲಿಯೇ ಸಂಚರಿಸುವ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ಕೋಲಾರ ನಗರದಲ್ಲಿ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿರುವುದು ಒಂದೆಡೆಯಾದರೆ, ಮಳೆ ಬಂದರೆ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೇ ಇರುವ ಕಾರಣದಿಂದ ಒಂದು ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ.

ಇತ್ತ ವಾಹನ ಸವಾರರು ಗುಂಡಿಗಳನ್ನು ತಪ್ಪಿಸುವುದಕ್ಕೂ ಸಾಧ್ಯವಾಗದೇ ನೀರಿನಲ್ಲಿಯೇ ಹರಸಾಹಸ ಪಟ್ಟುಕೊಂಡು ಓಡಾಡುವ ಪರಿಸ್ಥಿತಿಯೇ ಇದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ಈ ಬಗ್ಗೆ ಗಮನಹರಿಸದೇ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ